ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.15ರಂದು ಸರ್ಕಾರಿ ನೌಕರರ ಸತ್ಯಾಗ್ರಹ

By Staff
|
Google Oneindia Kannada News

ಸೆ.15ರಂದು ಸರ್ಕಾರಿ ನೌಕರರ ಸತ್ಯಾಗ್ರಹ
ಬೇಡಿಕೆ ಈಡೇರಿಕೆಗಾಗಿ ಸೆ.29ರಂದು ಒಂದು ದಿನದ ಮುಷ್ಕರ ಹೂಡಲಾಗುವುದು- ನೌಕರರ ಒಕ್ಕೂಟ

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರವು ನೌಕರರ ವಿರೋಧಿ ನೀತಿ ಅನುಸುತ್ತಿರುವುದನ್ನು ವಿರೋಧಿಸಿ ಸೆ.15ರಂದು ಸರ್ಕಾರಿ ನೌಕರರು ಸತ್ಯಾಗ್ರಹ ನಡೆಸಲಿದ್ದು, ತಮ್ಮ ಬೇಡಿಕೆ ಈಡೇರಿಕೆಗಾಗಿ ಸೆ.29ರಂದು ಒಂದು ದಿನದ ಮುಷ್ಕರ ನಡೆಸಲು ತೀರ್ಮಾನಿಸಿದೆ.

ಸರ್ಕಾರಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಯನ್ನು ಕೂಡಲೇ ಭರ್ತಿ ಮಾಡಬೇಕು. ಹುದ್ದೆಗಳ ರದ್ಧತಿ ಹಾಗೂ ಗುತ್ತಿಗೆ ಆಧಾರದ ನೇಮಕಾತಿನ್ನು ತಕ್ಷಣ ಕೈ ಬಿಡಬೇಕು ಹಾಗೂ ರಾಜ್ಯದಲ್ಲೂ ನಿವೃತ್ತಿ ವಯಸ್ಸನ್ನು 60ವರ್ಷಕ್ಕೆ ಹೆಚ್ಚಿಸುವದರ ಜೊತೆಗೆ ಇತರೆ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಈ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.

ಸರ್ಕಾರಿ ನೌಕರರ ಸಮಾಜಿಕ ಭದ್ರತೆಯ ನಿವೃತ್ತಿ ವೇತನವನ್ನು ಕಡಿಮೆಗೊಳಿಸಿ, ಕ್ರಮೇಣ ಖಾಸಗೀಕರಣಗೊಳಿಸುವ ಪ್ರಯತ್ನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿದೆ ಎಂದು ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಒಕ್ಕೂಟ ಆರೋಪಿಸಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X