ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅತಿವೃಷ್ಟಿ : ಶೇ.50ರ ರಿಯಾಯತಿಯಲ್ಲಿ ಬೀಜ ವಿತರಣೆ
ಅತಿವೃಷ್ಟಿ
:
ಶೇ.50ರ
ರಿಯಾಯತಿಯಲ್ಲಿ
ಬೀಜ
ವಿತರಣೆ
ರಾಗಿ,
ಭತ್ತ,
ಸೂರ್ಯಕಾಂತಿ,
ಅಲಸಂದೆ
ಮುಂತಾದ
ಬೀಜಗಳ
ವಿತರಣೆ
ಈ ಕುರಿತು ಕೃಷಿ ಸಚಿವ ಕೆ.ಶ್ರೀನಿವಾಸಗೌಡ ಶುಕ್ರವಾರ ಪ್ರಕಟಿಸಿದ್ದಾರೆ. ರಿಯಾಯತಿ ದರದಲ್ಲಿ ಈಗಾಗಲೇ ಬೀಜ ಪಡೆದು ಬಿತ್ತನೆ ಮಾಡಿ, ಬೆಳೆ ಹಾನಿಗೊಳಗಾಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಈ ಸೌಲಭ್ಯ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದರು.
ಯೋಜನೆಯಲ್ಲಿ ಅಳವಡಿಸಿರುವ 13ಬೆಳೆಗಳ ಪೈಕಿ, ಭತ್ತ, ರಾಗಿ, ಸೂರ್ಯಕಾಂತಿ, ಅಲಸಂದೆ ಸೇರಿದಂತೆ ತಡವಾಗಿ ಬಿತ್ತನೆ ಮಾಡಬಹುದಾದ ಬೆಳೆಗಳ ಬೀಜವನ್ನು ರೈತರಿಗೆ ವಿತರಿಸಲಾಗುವುದು. ಈ ಹಿಂದೆ ರಿಯಾಯತಿ ದರದಲ್ಲಿ ಬೀಜ ಪಡೆದವರೂ ಈ ಸೌಲಭ್ಯಕ್ಕೆ ಅರ್ಹರು. ಹಾನಿಗೊಳಗಾದ ಪ್ರದೇಶ, ರೈತರ ಸಂಖ್ಯೆ, ಬೇಡಿಕೆ ಪ್ರಮಾಣಕ್ಕನುಗುಣವಾಗಿ ಬೀಜ ವಿತರಿಸಲಾಗುವುದು ಎಂದು ಅವರು ವಿವರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Saturday, August 6, 2005, 23:53 [IST]