ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಯೋಧ್ಯೆಯಲ್ಲಿ ರಕ್ತದೋಕುಳಿ : ಆರು ಉಗ್ರರ ಬಲಿ
ಅಯೋಧ್ಯೆಯಲ್ಲಿ
ರಕ್ತದೋಕುಳಿ
:
ಆರು
ಉಗ್ರರ
ಬಲಿ
ರಾಮಮಂದಿರಕ್ಕೆ
ನುಗ್ಗಲು
ಯತ್ನಿಸಿದ
ಉಗ್ರರಿಗೆ
ಭದ್ರತಾ
ಪಡೆಯಿಂದ
ತೀವ್ರ
ಪ್ರತಿರೋಧ
ಮಂಗಳವಾರ ಬೆಳಿಗ್ಗೆ ಅಂಬಾಸಿಡರ್ ಕಾರಿನಲ್ಲಿ ವಿವಾದಗ್ರಸ್ಥ ಸ್ಥಳಕ್ಕೆ ಬಂದಿಳಿದ ಉಗ್ರರು, ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿ ತಮ್ಮ ಬಳಿ ಇದ್ದ ಎಕೆ 47 ಮತ್ತು ಎಕೆ 56ಬಂದೂಕಿನಿಂದ ಮನಬಂದಂತೆ ಗುಂಡು ಹಾರಿಸಿದಾಗ ಈ ಘಟನೆ ನಡೆದಿದೆ.
ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎರಡು ಗಂಟೆಗಳಷ್ಟು ಕಾಲ ಸುದೀರ್ಘ ಕಾರ್ಯಾಚರಣೆ ನಡೆಯಿತು. ಈ ಘರ್ಷಣೆಯಲ್ಲಿ ಆರು ಮಂದಿ ಉಗ್ರರು ಬಲಿಯಾಗಿದ್ದಾರೆ. ಮೂವರು ಭದ್ರತಾ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಕಾರಿನ ಚಾಲಕನನ್ನು ಭದ್ರತಾ ಪಡೆ ಬಂಧಿಸಿದೆ.
ದೇವಾಲಯದ ಬಳಿ ಇದ್ದ ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದು, ದೇವಾಲಯದ ಪ್ರದೇಶಕ್ಕೆ ಯಾವುದೇ ಧಕ್ಕೆ ಆಗಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಕಾರ್ಯದರ್ಶಿ ಅಲೋಕ್ ಸಿನ್ಹಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Story first published: Tuesday, July 5, 2005, 23:53 [IST]