ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗೌಡರ ರಬ್ಬರ್‌ ಸ್ಪಾಂಪ್‌ ಎಂದು ಗೇಲಿ ಮಾಡದಿರಿ’

By Staff
|
Google Oneindia Kannada News

‘ಗೌಡರ ರಬ್ಬರ್‌ ಸ್ಪಾಂಪ್‌ ಎಂದು ಗೇಲಿ ಮಾಡದಿರಿ’
ರಾಜಕೀಯದಿಂದ ಲಾಭ ಮಾಡುವ ಉದ್ದೇಶ ನನಗಿಲ್ಲ - ಎನ್‌.ತಿಪ್ಪಣ್ಣ

ಧಾರವಾಡ : ನಾನು ಮಾಜಿ ಪ್ರಧಾನಿ ದೇವೇಗೌಡರ ರಬ್ಬರ್‌ ಸ್ಪಾಂಪ್‌ ಅಲ್ಲ. ಹಾಗಾಗುವ ಅಗತ್ಯ ನನಗೂ ಇಲ್ಲ ಹಾಗೂ ದೇವೇಗೌಡರಿಗೂ ಇಲ್ಲ. ಸುಮ್ಮನೇ ಅನಗತ್ಯ ಆರೋಪಗಳ ಮೂಲಕ ನನ್ನ ಮನಸ್ಸನ್ನು ನೋಯಿಸಲಾಗುತ್ತಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎನ್‌.ತಿಪ್ಪಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವನದಲ್ಲಿ ಎಲ್ಲಾ ರೀತಿಯ ನಿವೃತ್ತಿ ಪಡೆದಿರುವ ನನ್ನಂಥವನು ಯಾವ ಕಾರಣಕ್ಕೆ ರಬ್ಬರ್‌ ಸ್ಟಾಂಪ್‌ ಆಗಬೇಕು? ಎಂದು ಪ್ರಶ್ನಿಸಿದರು.

ಗೌಡರು ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಲು ಕೆಲವರು ಸಂಚು ನಡೆಸಿದ್ದಾರೆ. ನಾನು 50ವರ್ಷ ವಕೀಲ ನಾಗಿ, ಹನ್ನೆರಡು ವರ್ಷ ವಿಧಾನ ಪರಿಷತ್ತು ಸದಸ್ಯನಾಗಿದ್ದ ನನಗೆ ರಾಜಕೀಯದಿಂದ ಲಾಭ ಮಾಡುವ ಯಾವ ಉದ್ದೇಶಗಳೂ ಇಲ್ಲ. ರಬ್ಬರ್‌ ಸ್ಪಾಂಪ್‌ ಎಂದು ಪದೇಪದೇ ಕರೆದು ಗೇಲಿ ಮಾಡಬೇಡಿ ಎಂದು ತಿಪ್ಪಣ್ಣ ಮನವಿ ಮಾಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X