ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಣಿ ಕಾಲೇಜಿನ ಡಾ.ರಮೇಶ್‌ಚಂದ್ರ ದತ್ತರಿಗೆ ಸಂಸ ಪ್ರಶಸ್ತಿ

By Staff
|
Google Oneindia Kannada News

ಮಹಾರಾಣಿ ಕಾಲೇಜಿನ ಡಾ.ರಮೇಶ್‌ಚಂದ್ರ ದತ್ತರಿಗೆ ಸಂಸ ಪ್ರಶಸ್ತಿ
ಜನವರಿ 23ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು : ಭಾರತಯಾತ್ರಾ ಕೇಂದ್ರದ 2004-05ನೇ ಸಾಲಿನ ಸಂಸ ರಂಗಪ್ರಶಸ್ತಿ ಡಾ.ರಮೇಶ್‌ಚಂದ್ರ ದತ್ತ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ರಮೇಶ್‌ಚಂದ್ರ- ದತ್ತ ತ್ಯಾಗಿ, ತಲೆ ಬಾಗದ ಜನ , ಕೈಲಾಸದ ಹಾದಿಯಲ್ಲಿ, ತೆರೆಗಳು, ಕುಂಟಾ ಕುಂಟಾ ಕುರುವತಿ ಮತ್ತು ಶೂದ್ರ ತಪಸ್ವಿ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಚಿಕ್ಕಮಗಳೂರು, ಕಡೂರು ಮತ್ತು ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ಒಂದು ತಿಂಗಳ ನಾಟಕ ತರಬೇತಿ ಶಿಬಿರಗಳನ್ನು ರಮೇಶ್‌ಚಂದ್ರ ನಡೆಸಿದ್ದಾರೆ. ಸಂಸ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 23ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X