ಕೆಪಿಸಿಸಿ ಅಧ್ಯಕ್ಷತೆಗೆ ನಾವ್ ರೆಡಿ -ಎಚ್. ವಿಶ್ವನಾಥ್, ಶ್ರೀಕಂಠಯ್ಯ.....
ಕೆಪಿಸಿಸಿ
ಅಧ್ಯಕ್ಷತೆಗೆ
ನಾವ್
ರೆಡಿ
-ಎಚ್.
ವಿಶ್ವನಾಥ್,
ಶ್ರೀಕಂಠಯ್ಯ.....
ಪೂಜಾರಿಗೆ
ಗೇಟ್ಪಾಸ್
ಕೊಡಿಸಲು
ದೆಹಲಿಯಿಂದ
ಗುಂಪುಗಳ
ಲಾಬಿ
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ನಾನು ಸಹ ಒಬ್ಬ. ಈ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೋರಿದ್ದೇನೆ. ಹೈಕಮಾಂಡ್ ಪಕ್ಷದ ಹೊಣೆ ಒಪ್ಪಿಸಿದರೆ, ಅದನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ವಿಶ್ವನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಹಿಂದೆ ಪಕ್ಷದ ಅಧ್ಯಕ್ಷರ ಬಗೆಗೆ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ನೋಟೀಸ್ ನೀಡಿತ್ತು. ಇಂತಹದೇ ನೋಟಿಸನ್ನು ಮತ್ತೊಬ್ಬ ಮಾಜಿ ಸಚಿವ ಎಚ್.ಸಿ.ಶ್ರೀಕಂಠಯ್ಯ ಅವರಿಗೆ ನೀಡಲಾಗಿದೆ. ನೋಟಿಸ್ಗೆ ಸೊಪ್ಪು ಹಾಕದೇ ಶ್ರೀಕಂಠಯ್ಯ, ತಮ್ಮ ಬೆಂಬಲಿಗರೊಂದಿಗೆ ಕೆಪಿಸಿಸಿ ಅಧ್ಯಕ್ಷ ಸ್ಢಾನಕ್ಕೆ ಕಸರತ್ತು ನಡೆಸಿದ್ದಾರೆ. ಡಿ.ಬಿ.ಚಂದ್ರೇಗೌಡ ಸಹ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಎಂದು ಹಿಂದೆಯೇ ಗುರ್ತಿಸಿಕೊಂಡಿದ್ದರು.
ನವದೆಹಲಿಯಲ್ಲಿ ಪೂಜಾರಿ ವಿರುದ್ಧ ಪಿತೂರಿ ಆರಂಭಗೊಂಡಿದ್ದು, ಮುಂದಿನ ಬೆಳವಣಿಗೆಗಳನ್ನು ಕಾದು ನೋಡ ಬೇಕು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು