Get Updates
Get notified of breaking news, exclusive insights, and must-see stories!

ಶಂಕರಾಚಾರ್ಯ ಬಂಧನಕ್ಕೆ ಬೇಸತ್ತು ಹಿಂದೂ ಕಾರ್ಯಕರ್ತ ಆತ್ಮಹತ್ಯೆ

ಶಂಕರಾಚಾರ್ಯ ಬಂಧನಕ್ಕೆ ಬೇಸತ್ತು ಹಿಂದೂ ಕಾರ್ಯಕರ್ತ ಆತ್ಮಹತ್ಯೆ
ಅಯ್ಯಂಪಾಳ್ಯದ ಷಣ್ಮುಗಂ ಕೀಟನಾಶಕ ಸೇವಿಸಿ ಸಾವಿಗೆ ಶರಣು

ಕೊಯಮತ್ತೂರು : ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ ಬಂಧನದಿಂದ ಬೇಸತ್ತು ಹಿಂದೂ ಮುನ್ನಾನಿ ಕಾರ್ಯಕರ್ತನೊಬ್ಬ ವಿಷ ಸೇವಿಸಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಯಮತ್ತೂರಿಗೆ 40 ಕಿಮೀ ದೂರದ ಪಲ್ಲಾಡಮ್‌ ಸಮೀಪ ಷಣ್ಮುಗಂ ಎನ್ನುವ ಎಂಬಾತ ಸೋಮವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಂಕರಾಚಾರ್ಯರ ಬಂಧನ ವಿರೋಧಿಸಿ ವಿಶ್ವ ಹಿಂದೂ ಪರಿಷತ್‌ ಹಾಗೂ ಇತರ ಹಿಂದೂ ಸಂಘಟನೆಗಳು ಹಮ್ಮಿಕೊಂಡಿದ್ದ ಉಪವಾಸ ಪ್ರತಿಭಟನೆಯಲ್ಲಿ ಷಣ್ಮುಗಂ ಪಾಲ್ಗೊಂಡಿದ್ದ . ಸ್ಥಳದಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದ ಆತನನ್ನು ಪಲ್ಲಾಡಮ್‌ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಂಚಿಶ್ರೀಗಳ ಬಂಧನದಿಂದ ಷಣ್ಮುಗಂ ತೀವ್ರ ಹತಾಶನಾಗಿದ್ದ . ಉಪವಾಸ ನಡೆಯುವ ಸ್ಥಳಕ್ಕೆ ಧಾವಿಸುವ ಮೊದಲೇ ಆತ ಕೀಟನಾಶಕ ಸೇವಿಸಿದ್ದ ಎಂದು ಮೂಲಗಳು ತಿಳಿಸಿವೆ.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+