Get Updates
Get notified of breaking news, exclusive insights, and must-see stories!

ಕನ್ನಡಮಾಸದ ಕೊಡುಗೆ : ರಾಜ್ಯಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ

ಕನ್ನಡಮಾಸದ ಕೊಡುಗೆ : ರಾಜ್ಯಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ
ಜುಲೈ 2004ರಿಂದ ಅನ್ವಯವಾಗುವಂತೆ ಶೇ.3ರ ಅಧಿಕ ತುಟ್ಟಿಭತ್ಯೆ

ಬೆಂಗಳೂರು : ದೀಪಾವಳಿ- ರಾಜ್ಯೋತ್ಸವದ ಕೊಡುಗೆಯಾಗಿ ರಾಜ್ಯ ಸರ್ಕಾರ ತನ್ನ ನೌಕರರಿಗೆ ಶೇ.3ರ ತುಟ್ಟಿಭತ್ಯೆ ಪ್ರಕಟಿಸಿದೆ.

ಮೂಲ ವೇತನಕ್ಕೆ ಅನ್ವಯವಾಗುವಂತೆ ಶೇ.3ರ ತುಟ್ಟಿಭತ್ಯೆ ನೀಡುವ ಆದೇಶವನ್ನು ನ.3ರ ಬುಧವಾರ ರಾಜ್ಯ ಸರ್ಕಾರ ಹೊರಡಿಸಿತು. 2004ರ ಜುಲೈನಿಂದಲೇ ಈ ತುಟ್ಟಿಭತ್ಯೆ ಅನ್ವಯವಾಗಲಿದ್ದು , ಸೆಪ್ಟಂಬರ್‌ವರೆಗಿನ ಹಣವನ್ನು ಉಳಿತಾಯ ಪತ್ರಗಳ ರೂಪದಲ್ಲಿ ನೌಕರರು ಪಡೆಯಲಿದ್ದಾರೆ. ಅಕ್ಟೋಬರ್‌ ತಿಂಗಳ ಹೆಚ್ಚಳ ನಗದು ರೂಪದಲ್ಲಿಯೇ ದೊರಕುವುದು.

ರಾಜ್ಯ ಸರ್ಕಾರದ ಸುಮಾರು 6 ಲಕ್ಷ ನೌಕರರಿಗೆ ಈ ತುಟ್ಟಿಭತ್ಯೆ ಹೆಚ್ಚಳ ಅನ್ವಯವಾಗಲಿದೆ. ಸರ್ಕಾರದ ನಿರ್ಧಾರವನ್ನು ರಾಜ್ಯ ಸರ್ಕಾರ ನೌಕರರ ಸಂಘದ ಕಾರ್ಯದರ್ಶಿ ಎಂ.ವಿ.ರಾಜಶೇಖರಯ್ಯ ಸ್ವಾಗತಿಸಿದ್ದು , ಮುಖ್ಯಮಂತ್ರಿ ಧರ್ಮಸಿಂಗ್‌ರಿಗೆ ಧನ್ಯವಾದ ಅರ್ಪಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+