Get Updates
Get notified of breaking news, exclusive insights, and must-see stories!

ಹಾಲು ಕುಡಿದ ಹುಡುಗನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಹಾಲು ಕುಡಿದ ಹುಡುಗನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿಗಳು ಪ್ರಕಟ

ಬೆಂಗಳೂರು : ವಿಶಿಷ್ಟ ದನಿಯ ಕವಿ, ಕಥೆಗಾರ ಅಬ್ದುಲ್‌ ರಶೀದ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿ ದೊರೆಕಿದೆ. ಪ್ರಶಸ್ತಿ 40 ಸಾವಿರ ರುಪಾಯಿ ನಗದು ಬಹುಮಾನ ಹೊಂದಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಗೆ 50ವರ್ಷ ತುಂಬಿರುವ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಐದು ಮಂದಿ ಯುವ ಲೇಖಕರು ಮತ್ತು ಹಿರಿಯ ಸಾಹಿತಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಲೆಯಾಳಂ ಲೇಖಕಿ ಎಸ್‌. ಸಿತಾರ, ಬಂಗಾಳಿ ಬರೆಹಗಾರ ಮಂದ್ರಕಾಂತ ಸೇನ್‌, ಇಂಗ್ಲೀಷ್‌ ಕವಿ ಮತ್ತು ಲೇಖಕ ರಂಜಿತ್‌ ಹೊಸಕೋಟೆ, ಹಿಂದಿ ಲೇಖಕಿ ನೀಲಾಕ್ಷಿ ಸಿಂಗ್‌ ಇತರ ಪ್ರಶಸ್ತಿ ಪುರಸ್ಕೃತರು.

Abdul Rashid selected for Kendra Sahithya Academy awardದಿಲ್ಲಿಯಲ್ಲಿ ನವೆಂಬರ್‌ 1ರಂದು ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಮಾರಂಭದಲ್ಲಿ ಮರಾಠಿಯ ಹಿರಿಯ ದಲಿತ ಕವಿ, ಕಾದಂಬರಿಕಾರ ನಾಮ್‌ ದೇವ್‌ ಲಕ್ಷ್ಮಣ್‌ ಧಸಾಲ್‌ ಅವರನ್ನು ಜೀವನದ ಸಾಧನೆಗಾಗಿ ಗೌರವಿಸುತ್ತಿದೆ.

ಹಾಲು ಕುಡಿದ ಹುಡುಗ, ಪ್ರಾಣ ಪಕ್ಷಿ , ನನ್ನ ಪಾಡಿಗೆ ನಾನು, ಮಾತಿಗೂ ಆಚೆ ರಷೀದರ ಕೃತಿಗಳು. ಹಾಲು ಕುಡಿದ ಹುಡುಗ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ವರ್ಧಮಾನ ಹಾಗೂ ಲಂಕೇಶ್‌ ಸಾಹಿತ್ಯ ಪ್ರಶಸ್ತಿಗಳೂ ಅವರಿಗೆ ಸಂದಿವೆ.

ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿರುವ ರಷೀದರ ಎರಡು ಕಥೆಗಳು : ಮಣ್ಣಾಂಗಟ್ಟಿ ಹಾಗೂ ಒಂದು ಪುರಾತನ ಪ್ರೇಮ.

ಪ್ರಸ್ತುತ ಮೈಸೂರು ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ರಷೀದ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+