ರಾಜ್ಯೋತ್ಸವ ಪ್ರಶಸ್ತಿ ಯಾರುಯಾರಿಗೆ? ಇಲ್ಲಿಹುದು ಸಂಭಾವ್ಯರ ಪಟ್ಟಿ
ರಾಜ್ಯೋತ್ಸವ ಪ್ರಶಸ್ತಿ ಯಾರುಯಾರಿಗೆ? ಇಲ್ಲಿಹುದು ಸಂಭಾವ್ಯರ ಪಟ್ಟಿ
ಕನ್ನಡ ಜ್ವರ ಶುರುವಾಯ್ತು ನೋಡ್ರಿ, ಈ ಬಾರಿ 70 ಮಂದಿಗೆ ಪ್ರಶಸ್ತಿ ಕಣ್ರೀ..
ಕನ್ನಡ ಹೋರಾಟಗಾರರಿಗೆ, ಕವಿಗಳಿಗೆ, ಕನ್ನಡ ಭಾಷಣ ಬಿಗಿಯುವವರಿಗೆ, ಆರ್ಕೆಸ್ಟ್ರಾಗಳಿಗೆ, ಹಾಸ್ಯೋತ್ಸವಗಳು ಹಾಗೂ ನಗೆ ಪರಿಣಿತರಿಗೆ ಇದು ಹಬ್ಬದ ತಿಂಗಳು. ಅದೇ ರೀತಿ ರಾಜ್ಯೋತ್ಸವ ಪ್ರಶಸ್ತಿಗೆ ಸಹಾ ಸಾಕಷ್ಟು ಕಸರತ್ತುಗಳು ಶುರುವಾಗುತ್ತವೆ. ಪ್ರಶಸ್ತಿಗೆ ಪಾತ್ರರಾದವರನ್ನು ಯೋಗ್ಯರು-ಅಯೋಗ್ಯರು ಎಂದು ಜನತೆ ವಿಭಾಗಿಸಿದರೂ, ಪ್ರಶಸ್ತಿ ಆಯ್ಕೆಗೆ ಸರಕಾರದ ಮಾನದಂಡಗಳು ಯಾರಿಗೂ ಅರ್ಥವಾಗುವುದಿಲ್ಲ. ಇದು ಪ್ರತಿವರ್ಷದ ಕತೆ.
ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಕು.ವೀರಭದ್ರಪ್ಪ , ಹಿಂದೂಸ್ತಾನಿ ಗಾಯಕ ಪಂ.ಪರಮೇಶ್ವರ ಹೆಗಡೆ, ಅರ್ಥಶಾಸ್ತ್ರಜ್ಞ ಡಾ.ಅರವಿಂದ ನಾಡಕರ್ಣಿ ಸೇರಿದಂತೆ 70 ಮಂದಿಗೆ ಲಭ್ಯವಾಗಿದೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ.
ಸಚಿವ ಎಂ. ಪಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರ್ತಿಸಲಾಗಿದೆ. ಈ ಪಟ್ಟಿಯನ್ನು ಮುಖ್ಯಮಂತ್ರಿ ಧರ್ಮಸಿಂಗ್, ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಅಂತಿಮಗೊಳಿಸುವರು.
ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿರುವ ಸಂಭಾವ್ಯರು :
- ಸಾಹಿತ್ಯ ಕ್ಷೇತ್ರ- ಡಾ.ನಿರುಪಮಾ, ಗುರುಮೂರ್ತಿ ಪೆಂಡಕೂರು, ಬಿ.ವಿ.ವೀರಭದ್ರಪ್ಪ , ನಾ.ಮೊಗಸಾಲೆ
- ಸಂಗೀತ ಕ್ಷೇತ್ರ- ಪಂ.ಸೋಮನಾಥ ಮರಡೂರ, ಪಂ. ಆರ್.ಕೆ.ಪದ್ಮನಾಭ,ನಾದಸ್ವರ ವಾದಕ ಚಂದ್ರಶೇಖರ್
- ಚಿತ್ರಕಲಾ ಕ್ಷೇತ್ರ- ಹೀರಾಲಾಲ್ ಮಲ್ಕಾರಿ
- ವೈದ್ಯಕೀಯ ಕ್ಷೇತ್ರ- ಡಾ.ವಿವೇಕ್ ಜವಳಿ
- ಪತ್ರಿಕೋದ್ಯಮ- ರಂಜಾನ್ ದರ್ಗಾ
- ಜಾನಪದ-ಮಾತಂಗವ್ವ
- ಸುಗಮ ಸಂಗೀತ- ವೈ.ಕೆ.ಮುದ್ದುಕೃಷ್ಣ,
- ಹರಿಕಥಾ ಕ್ಷೇತ್ರ-ಶೋಭಾ ನಾಯ್ಡು
- ಚಲನಚಿತ್ರ- ಕೆ.ಎಸ್.ಎಲ್. ಸ್ವಾಮಿ , ಹರಿಣಿ.
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications