ಒಂಬತ್ತು ವರ್ಷಗಳ ಹೋರಾಟದ ನಂತರ ಈ ರೈತನಿಗೆ ನ್ಯಾಯ ಸಿಕ್ಕಿತು !
ಒಂಬತ್ತು ವರ್ಷಗಳ ಹೋರಾಟದ ನಂತರ ಈ ರೈತನಿಗೆ ನ್ಯಾಯ ಸಿಕ್ಕಿತು !
ವಂಚನೆಯ ವಿರುದ್ಧ ಸೆಣಸಿದ ಸಾಹಸಿ ಮುಳಬಾಗಿಲು ವೆಂಕಟರವಣಪ್ಪ
ಮುಳಬಾಗಲು ತಾಲೂಕಿನ ಮಸ್ತೂರು ಗ್ರಾಮದ ಪ್ರಗತಿಪರ ರೈತ ವೆಂಕಟರವಣಪ್ಪ . ಆತ 12 ಚೀಲ ಆಲೂಗಡ್ಡೆ ಬೀಜಗಳನ್ನು ಬಂಗಾರಪೇಟೆಯ ಶಿವ ಟ್ರೇಡಿಂಗ್ ಕಂಪನಿಯಲ್ಲಿ 1995 ಸೆಪ್ಟೆಂಬರ್ನಲ್ಲಿ ಖರೀದಿಸಿದ್ದ. ವ್ಯವಸ್ಥಿತವಾಗಿಯೇ ಬೇಸಾಯವನ್ನು ಶುರುಮಾಡಿದ. ಆದರೆ ಭೂತಾಯಿ ಮಡಿಲಿಗೆ ಸುರಿದ ಬೀಜಗಳು ಸರಿಯಾಗಿ ಮೊಳೆಯಲೇ ಇಲ್ಲ.
ಬೇಸಾಯವನ್ನೇ ಬದುಕಾಗಿ ಸ್ವೀಕರಿಸಿರುವ ವೆಂಕಟರವಣಪ್ಪನಿಗೆ ತಪ್ಪು ಎಲ್ಲಾಗಿದೆ ಎಂದು ಅರಿವಾಯಿತು. ಬೆಳೆ ವೈಫಲ್ಯಕ್ಕೆ ಬೀಜಗಳ ಕಳಪೆ ಗುಣಮಟ್ಟವೇ ಕಾರಣ ಎಂಬುದನ್ನು ಆತ ಆರಿತ. ಪರಿಶೀಲನೆ ನಂತರ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಸಹಾ ವೆಂಕಟರವಣಪ್ಪನ ವಾದವನ್ನು ಸಮರ್ಥಿಸಿತ್ತು. ಬೇಸರದಿಂದ ಆತ ಬೀಜ ಖರೀದಿಸಿದ್ದ ಕಂಪನಿ ಮಾಲೀಕ ಶಿವಾನಂದಪ್ಪನನು ್ನ ತರಾಟೆಗೆ ತೆಗೆದುಕೊಂಡ. ಬೆಳೆ ನಷ್ಟಕ್ಕೆ ನೀನೇ ಹೊಣೆ. ಹೀಗಾಗಿ ಹಣ ಮರುಪಾವತಿಸಲು ಒತ್ತಾಯಿಸಿದ. ಈ ಮನವಿಗೆ ಮೂರು ಕಾಸಿನ ಬೆಲೆ ನೀಡದೇ ಕಂಪನಿ ಮಾಲೀಕ ಮನಬಂದಂತೆ ಬೈದು ಕಳುಹಿಸಿದ.
ವೆಂಕಟರವಣಪ್ಪನಿಗೆ ದಿಕ್ಕು ತೋಚಲಿಲ್ಲ. ತನಗಾದ ಅನ್ಯಾಯ ಹಾಗೂ ವಂಚನೆಗೆ ಮನದಲ್ಲೇ ಮರುಗಿದ. ಆದರೂ ಛಲ ಬೀಡದೇ, ತಾನು ಖರೀದಿ ಮಾಡಿದ್ದ ಬೀಜಗಳ ರಸೀದಿ ಮತ್ತಿತರ ದಾಖಲೆಗಳನ್ನು ಸಂಗ್ರಹಿಸಿದ. ನನಗೆ ನ್ಯಾಯನೀಡಿ ಎಂದು ಜಿಲ್ಲಾ ಗ್ರಾಹಕರ ವೇದಿಕೆಯ ಮೆಟ್ಟಿಲು ಹತ್ತಿದ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ. ರೈತನಾದ ವೆಂಕಟರಣಪ್ಪ ವಂಚನೆಗೆ ಗುರಿಯಾಗಿರುವುದು ಸತ್ಯ. ನಷ್ಟ ಪರಿಹಾರವಾಗಿ ಕಂಪನಿ 16,465 ರೂ. ನೀಡಬೇಕೆಂದು ತೀರ್ಪು ಹೊರಬಿದ್ದಿದೆ, ಒಂಬತ್ತು ವರ್ಷಗಳ ನಂತರ.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications