ಬೀದರ್ಲೋಕಸಭೆ ಸ್ಥಾನ ‘ಕೈ’ಗೆ, ಕೊನೆಗೂ ಜ್ವಲಿಸಿದ ‘ಸೂರ್ಯ’ವಂಶಿ
ಬೀದರ್ಲೋಕಸಭೆ ಸ್ಥಾನ ‘ಕೈ’ಗೆ, ಕೊನೆಗೂ ಜ್ವಲಿಸಿದ ‘ಸೂರ್ಯ’ವಂಶಿ
ಬಿಜೆಪಿಯ ಬಸವರಾಜ ಆರ್ಯ ಪರಾಜಿತ, ಜೆಡಿಎಸ್ಗೆ ಮೂರನೇ ಸ್ಥಾನ
ಬಿಜೆಪಿಯ ಭದ್ರಕೋಟೆ ಎನ್ನಲಾಗಿದ್ದ ಬೀದರ್ ಲೋಕಸಭಾ ಕ್ಷೇತ್ರ ಹದಿಮೂರು ವರ್ಷಗಳ ನಂತರ ಕಾಂಗ್ರೆಸ್ ಪಾಲಾಗಿದೆ. ಶನಿವಾರ ನಡೆದ ಮತ ಎಣಿಕೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳಾದ ಬಿಜೆಪಿಯ ಬಸವರಾಜ ಆರ್ಯ ಹಾಗೂ ಜೆಡಿಎಸ್ನ ಹೊನ್ನನಾಯಕ್ರನ್ನು ಸೂರ್ಯವಂಶಿ ಸೋಲಿಸಿದ್ದಾರೆ. ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
1991, 1996,1998, 1999, 2004 ಹೀಗೆ ಬಿಜೆಪಿಯ ದಿ.ರಾಮಚಂದ್ರವೀರಪ್ಪ ವಿರುದ್ಧ ಸೋಲುತ್ತಲೇ ಬಂದಿದ್ದ, ಕಾಂಗ್ರೆಸ್ನ ನರಸಿಂಗರಾವ್ ಸೂರ್ಯವಂಶಿ ಈ ಚುನಾವಣೆಯಲ್ಲಿ ಜಯಶೀಲರಾಗಿದ್ದಾರೆ. ಚುನಾವಣೆಯ ಫಲಿತಾಂಶಗಳು ರಾಜ್ಯದ ಸಮ್ಮಿಶ್ರ ಸರಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಜನಮತ : ಸೋನಿಯಾ ನಾಯಕತ್ವವನ್ನು ಜನರು ಬೆಂಬಲಿಸಿರುವುದು ಬೀದರ್ ಚುನಾವಣೆಯಲ್ಲಿ ವ್ಯಕ್ತವಾಗಿದೆ. ಸಮ್ಮಿಶ್ರ ಸರಕಾರದ ಮಿತ್ರ ಪಕ್ಷ ಜೆಡಿಎಸ್ ಚುನಾವಣೆಯ ಕಣದಲ್ಲಿದ್ದದ್ದು ದುರದೃಷ್ಟಕರ. ಬೀದರ್ ಗೆಲುವಿನಿಂದ ಸರಕಾರದ ಮೇಲಿನ ಜವಬ್ದಾರಿ ಹೆಚ್ಚಿದೆ. ಈ ಭಾಗದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಭರವಸೆ ನೀಡಿದ್ದಾರೆ.
ಅಭಿನಂದನೆ : ಕಾಂಗ್ರೆಸ್ ಗೆಲುವಿಗೆ ಕಾರಣರಾದ ಮುಖ್ಯಮಂತ್ರಿ ಎನ್.ಧರ್ಮಸಿಂಗ್ರನ್ನು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ ದೂರವಾಣಿ ಮೂಲಕ ಅಭಿನಂದಿಸಿದ್ದಾರೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications