ಮೈಸೂರು ಮೃಗಾಲಯದಲ್ಲಿ ಫೂತನಿ ಸಂತಾನ ; ಆನೆಗಳಿಗೆ ವಿಷಪ್ರಾಷನ
ಮೈಸೂರು ಮೃಗಾಲಯದಲ್ಲಿ ಫೂತನಿ ಸಂತಾನ ; ಆನೆಗಳಿಗೆ ವಿಷಪ್ರಾಷನ
ವಿಷಪ್ರಾಷನದಿಂದಾಗಿ ಗಣೇಶ ಹಾಗೂ ರೂಪಾ ಆನೆಗಳ ದಾರುಣ ಸಾವು -ವರದಿ
ಗಣೇಶ ಹಾಗೂ ರೂಪ ಎನ್ನುವ ಆನೆಗಳ ಸಾವಿಗೆ ರಿkುಂಕ್ ಫಾಸ್ಫೈಡ್ ಎನ್ನುವ ಪ್ರಬಲ ರಾಸಾಯಿನಿಕ ವಿಷವೇ ಕಾರಣ ಎಂದು ವರದಿ ತಿಳಿಸಿದೆ. ಸೆಪ್ಟಂಬರ್ 4 ಮತ್ತು 7ರಂದು ಗಣೇಶ ಹಾಗೂ ರೂಪಾ ಎನ್ನುವ ಆನೆಗಳು ಮೃಗಾಲಯದಲ್ಲಿ ಸಾವಿಗೀಡಾಗಿದ್ದವು. ಅಚಾನಕ್ ಮರಣಕ್ಕೊಳಗಾದ ಈ ಆನೆಗಳ ಅಂತ್ಯ ಅನೇಕ ಊಹೆಗಳಿಗೆ ಕಾರಣವಾಗಿತ್ತು .
ಹಾರ್ಮೋನುಗಳ ವೈಪರೀತ್ಯ ಹಾಗೂ ಉಸಿರಾಟದ ತೊಂದರೆಗೊಳಗಾಗಿ ಆನೆಗಳು ಕೊನೆಯುಸಿರೆಳೆದಿದ್ದವು. ಮರಣೋತ್ತರ ಪರೀಕ್ಷೆಯ ನಂತರ ವಿಷ ಪ್ರಾಷನದ ಘಟನೆ ಬಯಲಾಗಿದೆ. ರಿkುಂಕ್ ಸಲ್ಫೈಡ್ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ವಿಷವಾಗಿದೆ.
ಈ ಘಟನೆಯ ಸಂಬಂಧ ಗಣೇಶ ಹಾಗೂ ರೂಪಾ ಆನೆಗಳನ್ನು ನೋಡಿಕೊಳ್ಳುತ್ತಿದ್ದ 6 ಮಂದಿ ಮೃಗಾಲಯದ ಸಿಬ್ಬಂದಿಯನ್ನು ಅಮಾನತ್ತಿನಲ್ಲಿಟ್ಟಿದ್ದು , ತನಿಖೆಗಾಗಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
(ಇನ್ಫೋ ವಾರ್ತೆ)
Post your views
ವಾರ್ತಾ ಸಂಚಯ
ಮೈಸೂರಿನ ‘ಶ್ರೀ ಚಾಮರಾಜೇಂದ್ರ ಮೃಗಾಲಯ’ದಲ್ಲಿ ರೂಪಾ ಸಾವು
ಮುಖಪುಟ / ವಾರ್ತೆಗಳು












Click it and Unblock the Notifications