ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಕ್ಕರಹಳ್ಳಿ, ಲಿಂಗಾಂಬುಧಿ, ಕಾರಂಜಿ ಕೆರೇಲಿ ಗಣೇಶ ವಿಸರ್ಜನೆ ನಿಷೇಧ

By Staff
|
Google Oneindia Kannada News

ಕುಕ್ಕರಹಳ್ಳಿ, ಲಿಂಗಾಂಬುಧಿ, ಕಾರಂಜಿ ಕೆರೇಲಿ ಗಣೇಶ ವಿಸರ್ಜನೆ ನಿಷೇಧ
ಜಲ ಮಾಲಿನ್ಯಕ್ಕೆ ಕಡಿವಾಣ ಹಾಕಲು ನಗರ ಪಾಲಿಕೆಯಿಂದ ಕಟ್ಟುನಿಟ್ಟಿನ ಕ್ರಮ

ಮೈಸೂರು : ಕೆರೆಕಟ್ಟೆಗಳೊಂದಿಗೆ ಕನ್ನಂಬಾಡಿಯೂ ತುಂಬಿರುವುದರಿಂದ ಈ ಬಾರಿ ಮೈಸೂರು ಜಿಲ್ಲೆಯಲ್ಲಿ ಗಣೇಶೋತ್ಸವ ಸಂಭ್ರಮಕ್ಕೆ ಗರಿ ಮೂಡಿದೆ. ಗಲ್ಲಿಗಲ್ಲಿಗಳಲ್ಲಿ ಗಣೇಶೋತ್ಸವ ಆಚರಣೆಯ ಸಿದ್ಧತೆಗಳು ಕಾವು ಪಡೆದುಕೊಳ್ಳುತ್ತಿರುವಂತೆಯೇ ಗಣೇಶನ ನೆಪದಲ್ಲಿ ಪರಿಸರ ಮಾಲಿನ್ಯ ಉಂಟಾಗದಂತೆ ಸ್ಥಳೀಯ ಆಡಳಿತ ಎಚ್ಚರ ವಹಿಸುತ್ತಿರುವುದು ಈ ಬಾರಿಯ ವಿಶೇಷ.

ಮೈಸೂರು ವಿಶ್ವವಿದ್ಯಾಲಯದಯ ತನ್ನ ವ್ಯಾಪ್ತಿಯ ಜಲಮೂಲಗಳಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆಯನ್ನು ನಿಷೇಧಿಸಿದೆ. ಕುಕ್ಕರಹಳ್ಳಿ, ಕಾರಂಜಿ ಹಾಗೂ ಲಿಂಗಾಂಬುಧಿ ಕೆರೆಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ನಿಷೇಧಿಸಿ ಮೈಸೂರು ನಗರ ಪಾಲಿಕೆ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ , ರಾಸಾಯಿನಿಕ ಬಣ್ಣಗಳುಳ್ಳ ಗಣೇಶ ವಿಗ್ರಹಗಳನ್ನು ಇತರ ಜಲಮೂಲಗಳಲ್ಲಿ ವಿಸರ್ಜಿಸುವುದನ್ನೂ ಪಾಲಿಕೆ ನಿಷೇಧಿಸಿದೆ.

ಜಲಮೂಲಗಳಲ್ಲಿ ಗಣೇಶ ವಿಗ್ರಹ ವಿಸರ್ಜನೆ ನಿಷೇಧದಿಂದಾಗಿ ಈ ಬಾರಿ ನಾಗರಿಕರು ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ಡ್ರಮ್ಮು-ಕೊಳಗಗಳನ್ನೇ ಆಶ್ರಯಿಸಬೇಕು. ಹೀಗೆಂದು ಹಬ್ಬದ ಸಂಭ್ರಮವೇನೂ ಕಡಿಮೆಯಾಗಿಲ್ಲ ಬಿಡಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X