ಬನವಾಸಿ ರೈತರ ಗೋಳು ತಪ್ಪಲಿಲ್ಲ , ಕಣ್ತುಂಬಿದ ಭತ್ತ ಮನೆಗೆ ಬರಲಿಲ್ಲ !
ಬನವಾಸಿ ರೈತರ ಗೋಳು ತಪ್ಪಲಿಲ್ಲ , ಕಣ್ತುಂಬಿದ ಭತ್ತ ಮನೆಗೆ ಬರಲಿಲ್ಲ !
ಬಿಳಿ ಮಿಡತೆಗಳ ದಾಳಿಯಿಂದಾಗಿ 200 ಹೆಕ್ಟೇರ್ ಪ್ರದೇಶದ ಬೆಳೆ ನಾಶ
ಬಿಳಿ ಮಿಡತೆಗಳ ದಾಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವ ಸಂಕಟ ಬನವಾಸಿ ಹೋಬಳಿ ರೈತರದಾಗಿದೆ. ಭಾಷಿ, ತಿಗಣಿ, ಯಡೂರ್ಬೈಲ್, ಗುಂಡಾಪುರ, ಮಧುರವಳ್ಳಿ, ದಾಸನಕೊಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿನ ಭತ್ತದ ಬೆಳೆ ಕೀಟಗಳಿಂದಾಗಿ ಸಂಪೂರ್ಣ ನಾಶವಾಗಿದೆ.
ಭತ್ತದ ಪೈರಿನ ಬಿತ್ತನೆ ಹೆಚ್ಚು ನಿಕಚವಾಗಿರುವ ಕಡೆ ಹಾಗೂ ನೀರು ನಿಂತಿರುವ ಕಡೆಗಳಲ್ಲಿ ಕೀಟಗಳ ದಾಳಿ ಹೆಚ್ಚಾಗಿದೆ. ಅನೇಕ ರೈತರು ಕೀಟನಾಶಕಗಳ ಮೊರೆ ಹೋಗಿದ್ದಾರೆ. ಯಶಸ್ಸು ಮಾತ್ರ ಅಷ್ಟಕ್ಕಷ್ಟೇ. ಬೆಳೆಯೂ ಹೋಯಿತು, ಕೀಟನಾಶಕಗಳಿಗಾಗಿ ಸುರಿದ ದುಡ್ಡೂ ಹೋಯಿತು ಎನ್ನುವ ವ್ಯಥೆ ಕೆಲವು ರೈತರದು.
ಕೀಟಗಳನ್ನು ಹತೋಟಿಗೆ ತರುವ ಪ್ರಯತ್ನಗಳು ಚುರುಕಾಗಿವೆ. ಕೀಟನಾಶಕಗಳನ್ನು ರೈತರಿಗೆ ಒದಗಿಸುವ ಕೆಲಸದಲ್ಲಿ ಬನವಾಸಿ ರೈತ ಸಂಪರ್ಕ ಕೇಂದ್ರದಂಥ ಸಂಘಸಂಸ್ಥೆಗಳು ತೊಡಗಿವೆ. ಆದರೆ ಕೀಟನಾಶಕ ಭಾರೀ ದುಬಾರಿ. ಲೀಟರ್ಗೆ 3500 ರುಪಾಯಿ ಬೆಲೆ. ಬನವಾಸಿ ಹೋಬಳಿಯಲ್ಲಿ ಸುಮಾರು 1000 ಎಕರೆ ಪ್ರದೇಶದಲ್ಲಿ ಭತ್ತದ ನಾಟಿ ನಡೆದಿದ್ದು , ಈ ಪ್ರದೇಶಕ್ಕೆಲ್ಲ ಕೀಟನಾಶಕ ಹೊಂಚುವುದು ಹೇಗೆ ಎನ್ನುವ ಯೋಚನೆ ಕೃಷಿ ಅಧಿಕಾರಿಗಳದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications