ಬನ್ನೂರು ಶಾಲೆ ಸ್ವಾತಂತ್ರ್ಯೋತ್ಸವಕ್ಕೆ ಅಮೆರಿಕನ್ನಡಿಗರು
ಬನ್ನೂರು ಶಾಲೆ ಸ್ವಾತಂತ್ರ್ಯೋತ್ಸವಕ್ಕೆ ಅಮೆರಿಕನ್ನಡಿಗರು
ಐವತ್ತೆಂಟಲೇ ಸ್ವಾತಂತ್ರ್ಯಉತ್ಸವ ಆಚರಣೆಗೆ ದೇಶಾದ್ಯಂತ ವ್ಯಾಪಕ ಸಿದ್ಧತೆ ನಡೆದಿದೆ. ಪಟ್ಟಣ ನಗರಿಗಳ ಮೈದಾನಗಳಲ್ಲಿ ಆ.15ರ ಕಾರ್ಯಕ್ರಮಗಳು ರಂಗುರಂಗಾಗಿ ನಡೆಯುತ್ತವೆ. ಹಳ್ಳಿಗಳಲ್ಲಿ ? ಒಂದು ಹಳ್ಳಿಯ ವಿಶಿಷ್ಟ ಕಾರ್ಯಕ್ರಮದ ಕಥೆ ಕೇಳಿ....
ಬನ್ನೂರೆಂದ ಕೂಡಲೇ ನೆನಪಿಗೆ ಬರುವುದು ಏನು ? ಕುರಿಗಳ ಮಾತು ಬಿಡಿ, ಅಲ್ಲಿನ ವಿವೇಕಾನಂದ ಶಿಕ್ಷಣ ಸಂಸ್ಥೆಯ ಬಗ್ಗೆ ಮಾತನಾಡಿ. ಈ ಸುದ್ದಿಯ ಕೇಂದ್ರಬಿಂದು ಇದೇ ಶಾಲೆ- ವಿವೇಕಾನಂದ ಶಿಕ್ಷಣ ಸಂಸ್ಥೆ .
ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ (ಟಿ.ನರಸೀಪುರ) ತಾಲ್ಲೂಕಿನ ಒಂದು ಪುಟ್ಟ ಗ್ರಾಮ, ಬನ್ನೂರು. ಇಲ್ಲಿನ ಮಕ್ಕಳ ಪಾಲಿಗೆ ವಿವೇಕಾನಂದ ಶಿಕ್ಷಣ ಸಂಸ್ಥೆ ಅಕ್ಷರಪಾತ್ರೆ! ಈ ಶಾಲೆಯಲ್ಲಿ ಆ.15ರ ಭಾನುವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಎಲ್ಲ ಶಾಲೆಗಳಲ್ಲೂ ಕೇಸರಿ ಬಿಳಿ ಹಸಿರು ಬಾವುಟ ಆ.15ರಂದು ಹಾರುವುದು ಮಾಮೂಲು, ಬನ್ನೂರಿನ ಶಾಲೆಯದೇನು ವಿಶೇಷ ಎಂದಿರಾ ? ಇದೆ.
ಬನ್ನೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆ ಆಚರಿಸುವ 58ನೇ ಸ್ವಾತಂತ್ರ್ಯದಿನಾಚರಣೆ ಸಮಾರಂಭದಲ್ಲಿ ಭಾಗವಹಿಸುವ ಅತಿಥಿಗಳ ಪಟ್ಟಿಯ ಮೇಲೆ ಸುಮ್ಮನೇ ಒಮ್ಮೆ ಕಣ್ಣಾಡಿಸಿ. ಅಲ್ಲಿರುವುದೆಲ್ಲ ಅಮೆರಿಕನ್ನಡಿಗರು. ಅದರಲ್ಲೂ ಸಾರಸ್ವತಲೋಕದ ನಂಟರು !
ಕಾರ್ಯಕ್ರಮದ ವಿವರಗಳು ಇಂತಿವೆ :
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯುವ ಸ್ಥಳ :
ವಿವೇಕಾನಂದ ಶಿಕ್ಷಣ ಸಂಸ್ಥೆ , ಬನ್ನೂರು, ಟಿ. ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ-571 101
ದಿನಾಂಕ : 15, ಆಗಸ್ಟ್ , 2004.
ಸಮಯ : 10:15 ಪ್ರಾತಃಕಾಲ
ಸಮಾರಂಭ : ಸರ್ವಮಂಗಳ ಕಲ್ಯಾಣ ಮಂಟಪ, ಬನ್ನೂರು
ಧ್ವಜಾರೋಹಣ
ಕುಮಾರಿ ರಶ್ಮಿ ಶ್ರೀಧರ್
(ಪ್ರತಿಭಾನ್ವಿತ ನೃತ್ಯಗಾರ್ತಿ, ಕ್ಯಾಲಿಫೋರ್ನಿಯಾ ಅಮೇರಿಕಾ, ಕುಪರ್ಟಿನೋ. ರಶ್ಮಿ , ಕ್ಯಾಲಿಫೋರ್ನಿಯಾದಲ್ಲಿರುವ ಶ್ರೀಮತಿ ಆಶಾ ಶ್ರೀಧರ್ ಮತ್ತು ಗೋಪಾಲ್ ಶ್ರೀಧರ್ ಅವರ ಮಗಳು)
ಉದ್ಘಾಟನೆ
ಡಾ. ಕೆ. ವಿ. ರವಿಶಂಕರ್
ನಿರ್ದೇಶಕರು, ಉಷಾಕಿರಣ್ ಕಣ್ಣಿನ ಆಸ್ಪತ್ರೆ, ಮೈಸೂರು
ಅನ್ನಪೂರ್ಣಾ ವಿದ್ಯಾರ್ಥಿ ನಿಲಯದ ನಿರ್ಮಾಣದ ಉದ್ಘಾಟನೆ
ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ
ಸಾಹಿತಿಗಳು ಮತ್ತು ಸಂಪಾದಕರು
ಮುಖ್ಯ ಅತಿಥಿಗಳು
ಡಾ. ಅಶ್ವಥ್ ಎನ್. ರಾವ್
ಅರ್ಥೋಪೆಡಿಕ್ ಸರ್ಜನ್
ಸೆಂಟ್ ಲೂಯಿಸ್ ಮಿಸ್ಸೌರಿ, ಅಮೇರಿಕಾ
ಅಧ್ಯಕ್ಷತೆ
ಶ್ರೀ ಶಿಕಾರಿಪುರ ಹರಿಹರೇಶ್ವರ
ಸಾಹಿತಿಗಳು ಮತ್ತು ಅಂಕಣ ಬರಹಗಾರರು, ಮೈಸೂರು
ರಾಷ್ಟ್ರಭಕ್ತಿಯ ಈ ಸಮಾರಂಭಕ್ಕೆ ಎಲ್ಲರಿಗೂ ಶಾಲೆ ಸ್ವಾಗತ ಕೋರಿದೆ.
ಸ್ವಾಗತಿಸುವವರು :
ಎಂ. ಪ್ರಕಾಶ್, ಸಂಸ್ಥಾ ನಿರ್ವಾಹಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು.
ಅಂದಹಾಗೆ, ನೀವು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿರಾ ? ಕನಿಷ್ಟ , ಗಾಂಧಿತಾತನ ನೆನೆದು. ಭಾರತ ಮಾತೆಗೊಂದು ನಮನ ಸಲ್ಲಿಸಿದಿರಿ ತಾನೆ....
-
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ನಿಮ್ಮ ಮನೆಯ ಸೀಲಿಂಗ್ ಫ್ಯಾನ್ನಲ್ಲಿ ಧೂಳು ತುಂಬಿದೆಯೇ? ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಇಲ್ಲಿವೆ 'ಸೀಕ್ರೆಟ್' ಟಿಪ್ಸ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ












Click it and Unblock the Notifications