ಪುತ್ತೂರು ತಾಲ್ಲೂಕು ಉಪ್ಪಿನಂಗಡಿ ಪೊಲೀಸ್ಠಾಣೆಯಲ್ಲಿ ಫೋನಿಲ್ಲ !
ಪುತ್ತೂರು ತಾಲ್ಲೂಕು ಉಪ್ಪಿನಂಗಡಿ ಪೊಲೀಸ್ಠಾಣೆಯಲ್ಲಿ ಫೋನಿಲ್ಲ !
ಗೃಹ ಇಲಾಖೆ ಉದಾಸೀನದ ಕುರಿತು ಬಿಜೆಪಿ ಸದಸ್ಯೆಯಿಂದ ಟೀಕೆ
ಫೋನ್ ಇಲ್ಲದ ಪೊಲೀಸ್ ಠಾಣೆಯೂ ಉಂಟಾ ಎಂದು ಮೂಗು ಮುರಿಯಬೇಡಿ. ರಸ್ತೆ , ವಿದ್ಯುತ್, ಶಾಲೆಗಳು ಇಲ್ಲದ ಊರುಗಳು ಇರುವ ಕರ್ನಾಟಕದಲ್ಲಿ ಫೋನ್ ಇಲ್ಲದ ಪೊಲೀಸ್ ಠಾಣೆಗಳೂ ಇವೆ. ಜುಲೈ 29ರ ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಫೋನ್ ಇಲ್ಲದ ಠಾಣೆಯಾಂದರ ಪ್ರಸ್ತಾಪ ಬಂತು.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನಲ್ಲಿ ಉಪ್ಪಿನಂಗಡಿ ಎನ್ನುವುದೊಂದು ಊರಿದೆ. ಈ ಊರಲ್ಲಿ ಪೊಲೀಸ್ ಠಾಣೆಯೇನೋ ಇದೆ ; ಠಾಣೆಯಲ್ಲಿ ದೂರವಾಣಿ ಮಾತ್ರ ಇಲ್ಲ . ಈ ಕಾರಣದಿಂದಾಗಿ ಪೊಲೀಸರ ನೆರವು ಆ ಕ್ಷಣದಲ್ಲೇ ಬೇಕೆಂದ ಸಂದರ್ಭದಲ್ಲಿ ಠಾಣೆಯನ್ನು ತ್ವರಿತವಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ . ಸಣ್ಣಪುಟ್ಟ ವಿಷಯಗಳಿಗೂ ಸಾರ್ವಜನಿಕರು ಠಾಣೆಗೆ ಓಡಿಬರಬೇಕಾಗಿದೆ.
ಫೋನ್ ವಂಚಿತ ಉಪ್ಪಿನಂಗಡಿ ಠಾಣೆಯ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದವರು ಬಿಜೆಪಿ ಸದಸ್ಯೆ ಶಕುಂತಲಾ ಶೆಟ್ಟಿ . ಬಜೆಟ್ ಪ್ರಸ್ತಾಪಗಳ ಬಗ್ಗೆ ಮಾತನಾಡುತ್ತಿದ್ದ ಶಕುಂತಲಾ- ಫೋನ್ ಇಲ್ಲದ ಠಾಣೆಯ ವಿಷಯ ಪ್ರಸ್ತಾಪಿಸಿ ಗೃಹ ಇಲಾಖೆಯ ಅಸಾಮರ್ಥ್ಯವನ್ನು ಟೀಕಿಸಿದರು.
ಕಳೆದ ಸರ್ಕಾರ ನಾಲ್ಕು ಮಹಿಳಾ ಪೊಲೀಸ್ ಠಾಣೆಗಳನ್ನು ನಿರ್ಮಿಸುವುದಾಗಿ ಹೇಳಿತ್ತು . ಆದರೆ 2004-05ರ ಬಜೆಟ್ನಲ್ಲಿ ಈ ಪ್ರಸ್ತಾಪವೇ ಇಲ್ಲ ಎಂದು ಶಕುಂತಲಾ ಆಕ್ಷೇಪಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications