ಬೆಂಗಳೂರು ಸಾಕು ಸಾಕಾಯ್ತಪ್ಪ ! ವಿಪ್ರೋ ಕಣ್ಣು ಇತರ ನಗರಗಳತ್ತ !
ಬೆಂಗಳೂರು ಸಾಕು ಸಾಕಾಯ್ತಪ್ಪ ! ವಿಪ್ರೋ ಕಣ್ಣು ಇತರ ನಗರಗಳತ್ತ !
ಕರ್ನಾಟಕ- ಬೆಂಗಳೂರಿನ ಹೊರಗೆ ಚಟುವಟಿಕೆಗಳ ವಿಸ್ತರಿಸಲು ವಿಪ್ರೋ ಹೆಜ್ಜೆ
ಬೆಂಗಳೂರು ಸಾಕಾಯ್ತು ಎಂದು ಅಜೀಂ ಹೇಳುವುದಿಲ್ಲ . ಪ್ರೇಂಜಿ ಹೇಳುವುದಿಷ್ಟು : ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಪ್ರಗತಿಯೆನ್ನುವುದು ಮಡುಗಟ್ಟಿದೆ. ಇತ್ತೀಚಿನ ದಿನಗಳಂತೂ ಪ್ರಗತಿಯ ಮಾತೇ ಇಲ್ಲ . ಹೀಗಾಗಿ ಹೊಸ ನೆಲೆಗಳತ್ತ ಕಣ್ಣು ಹಾಯಿಸುವುದು ಅನಿವಾರ್ಯ.
ಪ್ರಸ್ತುತ ಬೆಂಗಳೂರಿನ ವಿಪ್ರೋ ಕೇಂದ್ರಗಳಲ್ಲಿ 11 ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ, ಇನ್ನುಮುಂದೆ ಬೆಂಗಳೂರಿನಲ್ಲಿ ಕೊಂಬೆರೆಂಬೆಗಳ ವಿಸ್ತರಿಸಲು ವಿಪ್ರೋಗೆ ಮನಸ್ಸಿಲ್ಲ . ಮೂಲಭೂತ ಸೌಕರ್ಯಗಳಿಗೇ ಕೊರೆಯಾದರೆ, ಬೆಳವಣಿಗೆಯ ಮಾತು ಎಲ್ಲಿಂದ ಎನ್ನುವುದು ವಿಪ್ರೋದ ಕೊರಗು. ಹಾಗಾಗಿ ಸಾಧ್ಯವಾದಷ್ಟೂ ಬೆಂಗಳೂರಿನ ಹೊರಗೆ ಕಣ್ಣು ಹಾಯಿಸುತ್ತಿದ್ದೇವೆ ಎನ್ನುತ್ತಾರೆ ವಿವೇಕ್ ಪೌಲ್, ವಿಪ್ರೋದ ಉಪಾಧ್ಯಕ್ಷ .
ಹೈದರಾಬಾದ್, ಚೆನ್ನೈ , ಪುಣೆ, ಕೋಲ್ಕತ್ತಾ ಹಾಗೂ ಕೊಚ್ಚಿ . ಇವುಗಳು ವಿಪ್ರೋ ಸದ್ಯಕ್ಕೆ ಕಣ್ಣು ಹಾಯಿಸುತ್ತಿರುವ ನೆಲೆಗಳು. ಕೋಲ್ಕತ್ತಾದಲ್ಲಿ ಆಗಸ್ಟ್ ತಿಂಗಳಿಂದಲೇ ನಮ್ಮ ಚಟುವಟಿಕೆ ಪ್ರಾರಂಭಿಸುತ್ತೇವೆ ಎನ್ನುತ್ತಾರೆ ಅಜೀಂ ಪ್ರೇಂಜಿ. ಕೆಲವು ಹೊಸ ಲೆಕ್ಕಗಳನ್ನು ಅಲ್ಲಿ ಪ್ರಾರಂಭಿಸುವುದು ಮಾತ್ರವಲ್ಲದೆ, ಬೆಂಗಳೂರಿನ ಒಂದಷ್ಟು ಹೊರೆಯೂ ಕೊಲ್ಕತ್ತಾದಲ್ಲಿ ಹಗುರಗೊಳ್ಳಲಿದೆ ಎಂದು ಪ್ರೇಂಜಿ ಮುಂದಿನ ನಡೆಗಳ ಬಣ್ಣಿಸುತ್ತಾರೆ.
ಬೆಂಗಳೂರು ಒತ್ತಡದಿಂದಾಗಿ ಸವೆಯುತ್ತಿದೆ. ಈ ಒತ್ತಡದಲ್ಲಿ ಸಮಯವೂ ಪೋಲು. ಅಷ್ಟೇ ಅಲ್ಲ , ಇತರ ರಾಜ್ಯ-ನಗರಗಳಲ್ಲಿಯೂ ಉತ್ತಮ ಇಂಜಿನಿಯರ್ಗಳು, ತಂತ್ರಜ್ಞರು ದೊರೆಯುತ್ತಿದ್ದಾರೆ, ಸಂಬಳದ ಬೇಡಿಕೆಗಳೂ ಅಲ್ಲಿ ಇಲ್ಲಷ್ಟಿಲ್ಲ . ವಾಸ್ತವ ಏನಪ್ಪಾ ಅಂದರೆ- ಕರ್ನಾಟಕ ಹಾಗೂ ಬೆಂಗಳೂರಿನ ಹೊರಗೇ ಅವಕಾಶಗಳು ಉಜ್ವಲವಾಗಿವೆ ಎಂದು ಅಜೀಂ ಪ್ರೇಂಜಿ ಹೇಳುತ್ತಾರೆ.
ಅಯ್ಯೋ ಬೆಂಗಳೂರೇ....!
(ಇನ್ಫೋ ವಾರ್ತೆ)
ಮುಖಪುಟ / ಐಟಿ - ಬಿಟಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications