Get Updates
Get notified of breaking news, exclusive insights, and must-see stories!

ತವರ ಋಣ : ಗುಲ್ಬರ್ಗಾ ನಗರಕ್ಕೆ 10 ಕೋಟಿ ರು. ವಿಶೇಷ ಪ್ಯಾಕೇಜ್‌

ತವರ ಋಣ : ಗುಲ್ಬರ್ಗಾ ನಗರಕ್ಕೆ 10 ಕೋಟಿ ರು. ವಿಶೇಷ ಪ್ಯಾಕೇಜ್‌
ಮುಖ್ಯಮಂತ್ರಿಗಳಲ್ಲಿ ಧರ್ಮ-ಸಂಕಟ ತೋಡಿಕೊಂಡ ಆರ್ಥಿಕ ಬಿಕ್ಕಟ್ಟಿನ ನಗರಪಾಲಿಕೆ

ಗುಲ್ಬರ್ಗಾ : ಹೈದ್ರಾಬಾದ್‌ ಕರ್ನಾಟಕದ ಕೇಂದ್ರಭಾಗ ಗುಲ್ಬರ್ಗಾ ನಗರದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 10 ಕೋಟಿ ರುಪಾಯಿಗಳ ವಿಶೇಷ ಪ್ಯಾಕೇಜ್‌ ಕಲ್ಪಿಸಲು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಉದ್ದೇಶಿಸಿದ್ದಾರೆ.

ನಗರದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಕ್ರಮ-ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಮುಖ್ಯಮಂತ್ರಿ ಧರ್ಮಸಿಂಗ್‌ ಭರವಸೆ ನೀಡಿದ್ದಾರೆ. ಗುಲ್ಬರ್ಗಾ ನಗರಪಾಲಿಕೆ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಆಶ್ವಾಸನೆ ದೊರೆಯಿತು ಎಂದು ಮೇಯರ್‌ ಅಮೃತರಾವ್‌ ಪಾಟೀಲ್‌ ಹಾಗೂ ಉಪ ಮೇಯರ್‌ ಮಾಲಿಪಾಟೀಲ್‌ ತಿಳಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗದ ಮುಂದಾಳತ್ವವನ್ನು ಅಮೃತರಾವ್‌ ಹಾಗೂ ಮಾಲಿಪಾಟೀಲ್‌ ವಹಿಸಿದ್ದರು.

ಪ್ರಮುಖ ರಸ್ತೆಗಳ ದುರಸ್ತಿ , ಸಂಪರ್ಕ ರಸ್ತೆಗಳ ನಿರ್ಮಾಣ, ಒಳಚರಂಡಿ ಸವಲತ್ತಿನ ಉತ್ತಮೀಕರಣ, ಕುಡಿಯುವ ನೀರಿನ ಯೋಜನೆಗಳಿಗಾಗಿ ಮುಖ್ಯಮಂತ್ರಿಗಳು ನೀಡುವ ವಿಶೇಷ ಪ್ಯಾಕೇಜ್‌ ಬಳಕೆಯಾಗಲಿದೆ.

ವಿಶೇಷ ಪ್ಯಾಕೇಜ್‌ನ ಹಣ ಏಳೆಂಟು ದಿನಗಳಲ್ಲಿ ಕೈಸೇರುವುದೆಂದು ನಗರಪಾಲಿಕೆ ನಿರೀಕ್ಷಿಸಿದೆ. ನಗರಪಾಲಿಕೆ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು , ಇದರ ಕುರಿತು ಮುಖ್ಯಮಂತ್ರಿ ಧರ್ಮಸಿಂಗ್‌ ಗಮನ ಸೆಳೆಯಲಾಗಿದೆ ಎಂದು ಮೇಯರ್‌ ಅಮೃತರಾವ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+