ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತವರ ಋಣ : ಗುಲ್ಬರ್ಗಾ ನಗರಕ್ಕೆ 10 ಕೋಟಿ ರು. ವಿಶೇಷ ಪ್ಯಾಕೇಜ್‌

By Staff
|
Google Oneindia Kannada News

ತವರ ಋಣ : ಗುಲ್ಬರ್ಗಾ ನಗರಕ್ಕೆ 10 ಕೋಟಿ ರು. ವಿಶೇಷ ಪ್ಯಾಕೇಜ್‌
ಮುಖ್ಯಮಂತ್ರಿಗಳಲ್ಲಿ ಧರ್ಮ-ಸಂಕಟ ತೋಡಿಕೊಂಡ ಆರ್ಥಿಕ ಬಿಕ್ಕಟ್ಟಿನ ನಗರಪಾಲಿಕೆ

ಗುಲ್ಬರ್ಗಾ : ಹೈದ್ರಾಬಾದ್‌ ಕರ್ನಾಟಕದ ಕೇಂದ್ರಭಾಗ ಗುಲ್ಬರ್ಗಾ ನಗರದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 10 ಕೋಟಿ ರುಪಾಯಿಗಳ ವಿಶೇಷ ಪ್ಯಾಕೇಜ್‌ ಕಲ್ಪಿಸಲು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಉದ್ದೇಶಿಸಿದ್ದಾರೆ.

ನಗರದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಕ್ರಮ-ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಮುಖ್ಯಮಂತ್ರಿ ಧರ್ಮಸಿಂಗ್‌ ಭರವಸೆ ನೀಡಿದ್ದಾರೆ. ಗುಲ್ಬರ್ಗಾ ನಗರಪಾಲಿಕೆ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಆಶ್ವಾಸನೆ ದೊರೆಯಿತು ಎಂದು ಮೇಯರ್‌ ಅಮೃತರಾವ್‌ ಪಾಟೀಲ್‌ ಹಾಗೂ ಉಪ ಮೇಯರ್‌ ಮಾಲಿಪಾಟೀಲ್‌ ತಿಳಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗದ ಮುಂದಾಳತ್ವವನ್ನು ಅಮೃತರಾವ್‌ ಹಾಗೂ ಮಾಲಿಪಾಟೀಲ್‌ ವಹಿಸಿದ್ದರು.

ಪ್ರಮುಖ ರಸ್ತೆಗಳ ದುರಸ್ತಿ , ಸಂಪರ್ಕ ರಸ್ತೆಗಳ ನಿರ್ಮಾಣ, ಒಳಚರಂಡಿ ಸವಲತ್ತಿನ ಉತ್ತಮೀಕರಣ, ಕುಡಿಯುವ ನೀರಿನ ಯೋಜನೆಗಳಿಗಾಗಿ ಮುಖ್ಯಮಂತ್ರಿಗಳು ನೀಡುವ ವಿಶೇಷ ಪ್ಯಾಕೇಜ್‌ ಬಳಕೆಯಾಗಲಿದೆ.

ವಿಶೇಷ ಪ್ಯಾಕೇಜ್‌ನ ಹಣ ಏಳೆಂಟು ದಿನಗಳಲ್ಲಿ ಕೈಸೇರುವುದೆಂದು ನಗರಪಾಲಿಕೆ ನಿರೀಕ್ಷಿಸಿದೆ. ನಗರಪಾಲಿಕೆ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು , ಇದರ ಕುರಿತು ಮುಖ್ಯಮಂತ್ರಿ ಧರ್ಮಸಿಂಗ್‌ ಗಮನ ಸೆಳೆಯಲಾಗಿದೆ ಎಂದು ಮೇಯರ್‌ ಅಮೃತರಾವ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X