ನಾವು ನೀವೇ ಬರೆದ ಇಳ‘ಕಲ್ಲು’ ನೇಕಾರರ ಕರುಳು ಕರಗುವಂಥ ಕಥೆ!
ನಾವು ನೀವೇ ಬರೆದ ಇಳ‘ಕಲ್ಲು’ ನೇಕಾರರ ಕರುಳು ಕರಗುವಂಥ ಕಥೆ!
ಮಗ್ಗಗಳ ಸದ್ದು ಕ್ಷೀಣವಾದಷ್ಟೂ 9 ಲಕ್ಷ ಮಂದಿಯ ಎದೆಬಡಿತದ ಗ್ರಾಫ್ ಜೋಕಾಲಿಯಾಡತೊಡಗುತ್ತದೆ.
- ದಟ್ಸ್ಕನ್ನಡ ಬ್ಯೂರೊ
ಇಳಕಲ್ಲಿನ ನೇಕಾರರ ಗೋಳಿನ ಕಥೆಯ ಕೇಳಿದಾಗ ಥಟ್ಟನೆ ನೆನಪಾಗುವುದು ಅದೇ ಗಾಂಧೀಜಿ.
ಗುಡಿ ಕೈಗಾರಿಕೆಗಳ ಕುರಿತು ನಮ್ಮ ಆಳುವ ವರ್ಗದ ಅನಾದರಣೆಯ ಪ್ರತಿಫಲ, ಇಂದು ಇಳಕಲ್ಲಿನ ನೇಕಾರರು ಅನುಭವಿಸುತ್ತಿರುವ ತವಕ ತಲ್ಲಣಗಳು. ಒಂದು ಕಾಲದಲ್ಲಿ ಭಾರತೀಯ ಮಹಿಳೆಯರ ಅಚ್ಚುಮೆಚ್ಚಿನ ವಸ್ತ್ರವಾಗಿದ್ದ ಇಳಕಲ್ಲಿನ ಸೀರೆಗಳನ್ನು ಇಂದು ಕೇಳುವವರಾದರೂ ಯಾರು ?
ಪಾಶ್ಚಾತ್ಯೀಕರಣ, ಜಾಗತೀಕರಣ, ಉದಾರೀಕರಣ... ಒಂದೇ ಎರಡೇ... ಇಳಕಲ್ಲಿನ ಸೀರೆಗಳನ್ನು, ಆ ಮೂಲಕ ನೇಕಾರರ ಬದುಕನ್ನು ಮೂರಾಬಟ್ಟೆ ಮಾಡಿದ ದೈತ್ಯಶಕ್ತಿಗಳು ! ನಿಮಗೆ ಗೊತ್ತಾ - ಇಳಕಲ್ಲು ಹಾಗೂ ಆಸುಪಾಸು ಇಂದಿಗೂ ಕನಿಷ್ಠ 25 ಸಾವಿರ ಮಗ್ಗಗಳಿವೆ. ಅಂದಾಜು 9 ಲಕ್ಷ ಜನರ ಉಸಿರು ಈ ಮಗ್ಗಗಳ ಶಬ್ದದೊಂದಿಗೆ ಬೆರೆತುಹೋಗಿದೆ. ಮಗ್ಗಗಳ ಸದ್ದು ಕ್ಷೀಣವಾದಷ್ಟೂ ಇವರ ಎದೆಬಡಿತದ ವೇಗ ಕಡಿಮೆಯಾಗುತ್ತದೆ.
ಸರ್ಕಾರ ಏನು ಮಾಡುತ್ತಿದೆ ಎಂದಿರಾ? ಸರ್ಕಾರ ಭರವಸೆಗಳನ್ನು ಕೊಡುತ್ತಲೇ ಇದೆ. ತರಬೇತಿ, ಉದ್ಯೋಗ, ಕಚ್ಛಾವಸ್ತುಗಳನ್ನು ಒದಗಿಸುವುದು- ಮುಂತಾಗಿ ಅಂಗೈಯಲ್ಲಿ ಸ್ವರ್ಗ ತೋರಿಸುವ ಕಸರತ್ತನ್ನು ಈವರೆಗಿನ ಎಲ್ಲ ಸರ್ಕಾರಗಳೂ ಮಾಡುತ್ತಲೇ ಬಂದಿವೆ. ಅನುಷ್ಠಾನ ಮಾತ್ರ ಅಷ್ಟಕ್ಕಷ್ಟೇ .
ಧರ್ಮಸಿಂಗ್ ಮುಖ್ಯಮಂತ್ರಿ ಆಗುವುದಕ್ಕಿಂಥ ಮುನ್ನ ಒಂದು ಸರ್ಕಾರ ಇತ್ತಲ್ಲ , ಆ ಸರ್ಕಾರ ನೇಕಾರರಿಗೆಂದು ಒಂದು ವಿಶೇಷ ಯೋಜನೆಯನ್ನೂ ಪ್ರಕಟಿಸಿತ್ತು . ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನ ಸರ್ಕಾರ ಬಿದ್ದುಹೋಯಿತು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಾದರೂ ಈ ಪ್ಯಾಕೇಜನ್ನು ಫಲಪ್ರದವಾಗಿಸುತ್ತಾ ? ಅಂತದೊಂದು ಪುರಸೊತ್ತು ಧರ್ಮಸಿಂಗ್-ಸಿದ್ಧರಾಮಯ್ಯ ಜೋಡಿಗಿದೆಯಾ ? ಇಳಕಲ್ಲಿನ ನೇಕಾರರು ನಿರೀಕ್ಷಿಸುತ್ತಿದ್ದಾರೆ.
ಇದ್ದುದರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರವೇ ವಾಸಿ. ಕರ್ನಾಟಕ ಹ್ಯಾಂಡ್ಲೂಂ ಅಭಿವೃದ್ಧಿ ನಿಗಮವು ವಿದ್ಯಾ ವಿಕಾಸ ಯೋಜನೆಯಡಿ ಮಕ್ಕಳ ಸಮವಸ್ತ್ರಗಳನ್ನು ಖರೀದಿಸುತ್ತಿತ್ತು . ಆದರೆ, ವಿಪರ್ಯಾಸ ನೋಡಿ ; ನಿಗಮವೇ ಈಗ ರೋಗಗ್ರಸ್ತ ! ಈಗಲೂ ಸಮವಸ್ತ್ರ ಖರೀದಿ ಚಾಲನೆಯಲ್ಲಿದೆ. ಕಾಸು ಮಾತ್ರ ಸರ್ಕಾಲಕ್ಕೆ ಕೈಗೆ ಬರುತ್ತಿಲ್ಲ . ಅಕ್ಟೋಬರ್ನಲ್ಲಿ ನಡೆದ ಖರೀದಿಗೆ ಜೂನ್ನಲ್ಲೂ ಬಟವಾಡೆ ದೊರೆಯುವುದಿಲ್ಲ . ತುತ್ತಿನ ಚೀಲ ತುಂಬುವುದು ಹೇಗೆ ?
ಸರ್ಕಾರದ ಮಾತು ಬಿಡಿ. ಜನ ಸಾಮಾನ್ಯರಾದ ನಾವು ನೀವೇನು ಮಾಡುತ್ತಿದ್ದೇವೆ ? ಇಳಕಲ್ಲು ಎನ್ನುವುದು ಕರ್ನಾಟಕದ ವಸ್ತ್ರ ಸಂಸ್ಕೃತಿಯ ಒಂದು ಭಾಗ. ಅಂಥದೊಂದು ಸಂಸ್ಕೃತಿಯ ಉಳಿಸುವುದು ಬೇಡವಾ ? ವಾರದಲ್ಲಿ ಒಂದು ದಿನವಾದರೂ ದೇಸಿ ವಸ್ತ್ರ ತೊಡುವ ವ್ರತ ತೊಟ್ಟರೆ, ಇಳಕಲ್ಲು ಹಾಗೂ ಇತರ ಊರಿನ ನೇಕಾರರ ಉಸಿರು ಕೊಂಚ ಸರಾಗವಾದೀತು. ಆ ನೆಮ್ಮದಿ ನಿಮಗೆ ಬೇಡವೇ ?
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications