Get Updates
Get notified of breaking news, exclusive insights, and must-see stories!

ರಾಜ್ಯಸಭೆಗೆ ಆಸ್ಕರ್‌, ವೆಂಕಯ್ಯ, ರಾಮಸ್ವಾಮಿ ಹಾಗೂ ಹರಿಪ್ರಸಾದ್‌

ರಾಜ್ಯಸಭೆಗೆ ಆಸ್ಕರ್‌, ವೆಂಕಯ್ಯ, ರಾಮಸ್ವಾಮಿ ಹಾಗೂ ಹರಿಪ್ರಸಾದ್‌
ತುರುಸಿನ ಸ್ಪರ್ಧೆಯಲ್ಲಿ ಸೋತ ರಾಮಕೃಷ್ಣ ಹೆಗಡೆ ಪತ್ನಿ ಶಕುಂತಲಾ

ಬೆಂಗಳೂರು : ಕೇಂದ್ರ ಸಚಿವ ಆಸ್ಕರ್‌ ಫರ್ನಾಂಡಿಸ್‌, ಬಿಜೆಪಿ ರಾಷ್ಟ್ರಾಧ್ಯಕ್ಷ ವೆಂಕಯ್ಯ ನಾಯ್ಡು , ಜಾತ್ಯತೀತ ಜನತಾದಳದ ಎಂಎಎಂ ರಾಮಸ್ವಾಮಿ ಹಾಗೂ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಜೂನ್‌ 28ರ ಸೋಮವಾರ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಸ್ಕರ್‌, ವೆಂಕಯ್ಯನಾಯ್ಡು , ರಾಮಸ್ವಾಮಿ ಹಾಗೂ ಹರಿಪ್ರಸಾದ್‌ ಆಯ್ಕೆಯಾದರು. ನಾಲ್ಕನೇ ಸ್ಥಾನಕ್ಕಾಗಿ ನಡೆದ ತುರುಸಿನ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ ಹರಿಪ್ರಸಾದ್‌ ಎನ್‌ಡಿಎ ಅಭ್ಯರ್ಥಿ ಶಕುಂತಲಾ ಅವರನ್ನು ಪರಾಭವಗೊಳಿಸಿದರು.

ಆಸ್ಕರ್‌, ವೆಂಕಯ್ಯ ಹಾಗೂ ರಾಮಸ್ವಾಮಿ ಗೆಲುವು ಚುನಾವಣೆಗೆ ಮುನ್ನವೇ ಖಚಿತವಾಗಿತ್ತು . ಆದರೆ ನಾಲ್ಕನೇ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಹರಿಪ್ರಸಾದ್‌ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಕುಂತಲಾ ಹೆಗಡೆ ತೀವ್ರ ಸ್ಪರ್ಧೆ ಒಡ್ಡಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಪತ್ನಿ ಶಕುಂತಲಾ ಹೆಗಡೆ ಅವರನ್ನು ಕಣಕ್ಕಿಳಿಸುವ ಮೂಲಕ ಚುನಾವಣೆಗೆ ಭಾವುಕತೆಯ ಸ್ಪರ್ಶವನ್ನು ಬಿಜೆಪಿ ನೀಡಿತ್ತು .

ವಿಧಾನಸಭೆಯ ಬಲಾಬಲ

ಬಿಜೆಪಿ- 79, ಕಾಂಗ್ರೆಸ್‌- 65, ಜಾತ್ಯತೀತ ಜನತಾದಳ-58, ಸಂ.ದ-5, ಪಕ್ಷೇತರರು-13, ಕನ್ನಡನಾಡು, ವಾಟಾಳ್‌, ಸಿಪಿಐಎಂ ಹಾಗೂ ಆರ್‌ಪಿಐ ತಲಾ ಒಂದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+