ನಾನು ಮಂತ್ರಿಯಾಗೋದು ಗ್ಯಾರಂಟಿ ; ಮಹಿಮಾ ಪಟೇಲ್ ವಿಶ್ವಾಸ
ನಾನು ಮಂತ್ರಿಯಾಗೋದು ಗ್ಯಾರಂಟಿ ; ಮಹಿಮಾ ಪಟೇಲ್ ವಿಶ್ವಾಸ
ಅಪ್ಪನಿಗೆ ತಕ್ಕ ಮಗ - ಮಾತುಗಾರಿಕೆಯಲ್ಲೂ , ಗತ್ತಿನಲ್ಲೂ
ಇತ್ತೀಚೆಗೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮುಖಾಮುಖಿಯಾದ ಮಹಿಮಾ ಪಟೇಲ್ ತಾವು ಸಚಿವರಾಗುವ ಕುರಿತು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಸಚಿವ ಸ್ಥಾನ ನೀಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕೇಳಿದ್ದೇನೆ. ಅವರಿಬ್ಬರೂ ಒಪ್ಪಿಕೊಂಡಿದ್ದಾರೆ. ಮುಂಬರುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ಸಿಗೋದು ಗ್ಯಾರಂಟಿ ಎಂದು ಮಹಿಮಾ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.
ಅಂದಹಾಗೆ, ಮಹಿಮಾ ಪಟೇಲ್ರ ಅಗ್ಗಳಿಕೆ, ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರ ಮಗ ಎನ್ನೋದು. ತತ್ವ ಸಿದ್ಧಾಂತಗಳ ವಿಷಯ ಗೊತ್ತಿಲ್ಲ , ಮಾತಿನಲ್ಲಂತೂ ಅಪ್ಪನಿಗೆ ತಕ್ಕ ಮಗ.
ಮಹಿಮಾ ಪಟೇಲ್ ಮಾತನಾಡೋದೆ ಹಾಗೆ, ನೇರಾನೇರ. ಚುನಾವಣೆಗೂ ಮುನ್ನ ಟೀವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಹಿಮಾ ಪಟೇಲ್ರ ಗತ್ತುಗಾರಿಕೆ ಹಾಗೂ ಮಾತುಗಾರಿಕೆಯನ್ನು ರಾಜ್ಯದ ಜನ ಮೆಚ್ಚುಗೆಯಿಂದ ನೋಡಿ ಪಟೇಲರ ನೆನಪಿಸಿಕೊಂಡಿದ್ದರು. ಇತರ ಪಕ್ಷಗಳವರು ಟಿಕೇಟಿಗಾಗಿ ಪಡಿಪಾಟಲು ಪಡುವ ಕುರಿತು ಅಯ್ಯೋ ಎಂದಿದ್ದ ಮಹಿಮಾ ಪಟೇಲ್- ತಮ್ಮ ಪಕ್ಷದಲ್ಲಿ ತಾವೇ ಟಿಕೇಟು ನೀಡೋದು (ಅರ್ಥಾತ್ ಅಂತದೊಂದು ಸ್ಥಾನದಲ್ಲಿ ತಾನಿದ್ದೇನೆ) ಎಂದಿದ್ದರು.
ಈ ಪರಿಯ ಮಹಿಮಾ ಪಟೇಲರಿಗೀಗ ಮಂತ್ರಿಯಾಗುವ ಹುಕಿ ಬಂದಿದೆ. ಮಂತ್ರಿಯಾದರೆ ಮಹಿಮಾ ಯಾವ ಖಾತೆ ಬಯಸುತ್ತಾರೆ ? ಹಿಂದೆಮುಂದೆ ನೋಡದೆ ಮಹಿಮಾ ಉತ್ತರಿಸುತ್ತಾರೆ- ಶಿಕ್ಷಣ ಖಾತೆ. ಶೈಕ್ಷಣಿಕ ಕ್ಷೇತ್ರದಲ್ಲಿ ಒಂದಷ್ಟು ಬದಲಾವಣೆಗಳು ತುರ್ತಾಗಿ ಆಗಬೇಕಿದೆ. ಈ ಕುರಿತು ನನ್ನಲ್ಲಿ ಒಂದಷ್ಟು ಚಿಂತನೆಗಳಿವೆ. ಆ ಕಾರಣದಿಂದಾಗಿ ಶಿಕ್ಷಣ ಖಾತೆಯಾದರೆ ಒಳ್ಳೆಯದು ಎಂದು ಮಹಿಮಾ ಕನಸು ತೋಡಿಕೊಳ್ಳುತ್ತಾರೆ.
ಮಹಿಮಾ ಮಂತ್ರಿಯಾಗುತ್ತಾರಾ ? ಗೊತ್ತಿಲ್ಲ . ಸದ್ಯಕ್ಕಂತೂ ಸಂಪುಟ ವಿಸ್ತರಣೆಯ ಕುರಿತು ಯಾರೂ ಮಾತಾಡುತ್ತಿಲ್ಲ . ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರವೇ ಇನ್ನೂ ನಿಗದಿಯಾಗಿಲ್ಲ . ಆದರೆ, ಮಹಿಮಾರಂಥ ಯುವಕರು ಮಂತ್ರಿಯಾಗುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications