ತುಮಕೂರು ವಿವಿ ಗರ್ಭಪಾತ, ಹೊಸ ವಿವಿ ಯೋಜನೆಗೆ ಎಳ್ಳುನೀರು
ತುಮಕೂರು
ವಿವಿ
ಗರ್ಭಪಾತ,
ಹೊಸ
ವಿವಿ
ಯೋಜನೆಗೆ
ಎಳ್ಳುನೀರು
ಜುಲೈ
8ರಿಂದ
ಸಿಇಟಿ
ಸೀಟು
ಹಂಚಿಕೆ
ಪ್ರಾರಂಭ
ತುಮಕೂರು ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವ ಯೋಜನೆಯನ್ನು ಸರ್ಕಾರ ಸದ್ಯಕ್ಕೆ ಕೈ ಬಿಟ್ಟಿದೆ. ಹಲವಾರು ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶಿಕ್ಷಣ ಸಚಿವ ಡಿ.ಮಂಜುನಾಥ್ ಗುರುವಾರ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದರು.
ಕೋಲಾರದ ಜನತೆ ತುಮಕೂರು ವಿಶ್ವವಿದ್ಯಾಲಯದ ಕುರಿತು ಆಸಕ್ತಿ ಹೊಂದಿಲ್ಲ . ಅಲ್ಲದೆ ಮೂಲಭೂತ ಸೌಕರ್ಯಗಳ ಕೊರತೆ, ನಿವೇಶನ ಈವರೆಗೂ ದೊರೆಯದಿರುವುದು, ನಿಧಿಯ ಸಮಸ್ಯೆ- ಮುಂತಾದ ಕಾರಣಗಳಿಂದಲೂ ತುಮಕೂರು ವಿವಿ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ ಎಂದು ಮಂಜುನಾಥ್ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶವನ್ನು ಆಗಸ್ಟ್ ತಿಂಗಳಲ್ಲಿ ಪ್ರಾರಂಭಿಸಲಾಗುವುದು. ಈ ಬಾರಿ ಸಿಇಟಿ ಸೀಟು ಹಂಚಿಕೆಯ ಕಾರ್ಯ ವಿಳಂಬವಾಗಿದ್ದು, ಜುಲೈ 8ರಿಂದ ಸೀಟು ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸಚಿವ ಮಂಜುನಾಥ್ ಹೇಳಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ