Get Updates
Get notified of breaking news, exclusive insights, and must-see stories!

ರಾಯಚೂರಲ್ಲಿ ಮಳೆಯ ಚಿತ್ರಗಳು ಗೈರು, ಒಕ್ಕಲು ಮಕ್ಕಳು ಕಂಗಾಲು

ರಾಯಚೂರಲ್ಲಿ ಮಳೆಯ ಚಿತ್ರಗಳು ಗೈರು, ಒಕ್ಕಲು ಮಕ್ಕಳು ಕಂಗಾಲು
ಕಣ್ಣುಗಳು ಮುಗಿಲಿಗೆ ನೆಡುತ್ತವೆ. ಆದರೆ ಮಳೆ ಸುರಿಯುವುದಿಲ್ಲ !

ರಾಯಚೂರು : ಮಳೆ ಮಳೆ ಮಳೆ. ರಾಜ್ಯದೆಲ್ಲೆಡೆಯೂ ಮಳೆಯದೇ ಸುದ್ದಿ . ಆದರೆ ರಾಯಚೂರಿನಲ್ಲಿ ಮಾತ್ರ ಮಳೆ ಮಾಯವಾಗಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯದ ಭೂಪಟದಿಂದ ಅಳಿಸಿಹೋಗಿದ್ದ ಮಳೆಯ ಚಿತ್ರಗಳು ಈ ಬಾರಿ ಮರುಕಳಿಸಿದರೂ, ರಾಯಚೂರಿನಲ್ಲಿ ಮಾತ್ರ ಮಳೆ ಗುಳೆ ಹೊಂಟಿದೆ.

ಮೋಡ ಕವಿದ ವಾತಾವರಣವಿದೆ. ಮೋಡಗಳೂ ತೂಗುತ್ತವೆ. ಮಳೆ ಇನ್ನೇನು ಧೋ ಎಂದೀತು ಎಂದು ಕಣ್ಣುಗಳು ಮುಗಿಲಿಗೆ ನೆಡುತ್ತವೆ. ಆದರೆ ಮಳೆ ಸುರಿಯುವುದಿಲ್ಲ ! ಇದು ರಾಯಚೂರಿನ ಇಂದಿನ ಚಿತ್ರಣ. ಪರಿಣಾಮವಾಗಿ ರೈತರು ತಲ್ಲಣ.

ಅಂದಹಾಗೆ, ರಾಯಚೂರು ಜಿಲ್ಲೆಯಲ್ಲಿ ಮಳೆಯ ದರ್ಶನವೇ ಆಗಿಲ್ಲ ಎಂದಲ್ಲ . ಮೇ ಮೊದಲ ವಾರದಲ್ಲಿ ಕೊಂಚ ಮಳೆ ಬಿದ್ದಿತ್ತು . ಜೂನ್‌ 6ರಂದು ನೆಲ ತೇವವಾಗಿತ್ತು . ಮಳೆ ಮುಂದುವರಿಯುತ್ತದೆ ಎಂದು ಒಕ್ಕಲು ಮಕ್ಕಳು ಉತ್ತಲಿಕ್ಕೆ ಬಿತ್ತಲಿಕ್ಕೆ ಸಿದ್ಧತೆ ನಡೆಸುತ್ತಿದ್ದಂತೆಯೇ ಮಳೆ ಮುನಿಸಿಕೊಂಡಿತ್ತು .

ಜಿಲ್ಲೆಯ ಕೆಲಭಾಗದ ಭೂಮಿಗೆ ತುಂಗಭದ್ರಾ ಎಡದಂಡೆ ಯೋಜನೆಯಿಂದಾಗಿ ಹಸುರು ಕಾಣುತ್ತದೆ. ಕೃಷ್ಣಾನದಿಯ ನೀರೂ ಕೆಲಭಾಗವನ್ನು ತಣಿಸುತ್ತದೆ. ಆದರೆ ಬಹುಸಂಖ್ಯೆಯ ರೈತರು ನೆಚ್ಚಿಕೊಂಡಿರುವುದು ಮಳೆರಾಯನನ್ನು . ಈ ರೈತರು ಹುಯ್ಯೋ ಹುಯ್ಯೋ ಮಳೆರಾಯ ಎಂದು ಮುಗಿಲು ನೋಡುತ್ತಿದ್ದಾರೆ. ಮಳೆರಾಯನಿಗೂ ಭೇದಭಾವವಾ ? ತರವಲ್ಲ ತಗಿ.....

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+