ರಾಯಚೂರಲ್ಲಿ ಮಳೆಯ ಚಿತ್ರಗಳು ಗೈರು, ಒಕ್ಕಲು ಮಕ್ಕಳು ಕಂಗಾಲು
ರಾಯಚೂರಲ್ಲಿ
ಮಳೆಯ
ಚಿತ್ರಗಳು
ಗೈರು,
ಒಕ್ಕಲು
ಮಕ್ಕಳು
ಕಂಗಾಲು
ಕಣ್ಣುಗಳು
ಮುಗಿಲಿಗೆ
ನೆಡುತ್ತವೆ.
ಆದರೆ
ಮಳೆ
ಸುರಿಯುವುದಿಲ್ಲ
!
ಮೋಡ ಕವಿದ ವಾತಾವರಣವಿದೆ. ಮೋಡಗಳೂ ತೂಗುತ್ತವೆ. ಮಳೆ ಇನ್ನೇನು ಧೋ ಎಂದೀತು ಎಂದು ಕಣ್ಣುಗಳು ಮುಗಿಲಿಗೆ ನೆಡುತ್ತವೆ. ಆದರೆ ಮಳೆ ಸುರಿಯುವುದಿಲ್ಲ ! ಇದು ರಾಯಚೂರಿನ ಇಂದಿನ ಚಿತ್ರಣ. ಪರಿಣಾಮವಾಗಿ ರೈತರು ತಲ್ಲಣ.
ಅಂದಹಾಗೆ, ರಾಯಚೂರು ಜಿಲ್ಲೆಯಲ್ಲಿ ಮಳೆಯ ದರ್ಶನವೇ ಆಗಿಲ್ಲ ಎಂದಲ್ಲ . ಮೇ ಮೊದಲ ವಾರದಲ್ಲಿ ಕೊಂಚ ಮಳೆ ಬಿದ್ದಿತ್ತು . ಜೂನ್ 6ರಂದು ನೆಲ ತೇವವಾಗಿತ್ತು . ಮಳೆ ಮುಂದುವರಿಯುತ್ತದೆ ಎಂದು ಒಕ್ಕಲು ಮಕ್ಕಳು ಉತ್ತಲಿಕ್ಕೆ ಬಿತ್ತಲಿಕ್ಕೆ ಸಿದ್ಧತೆ ನಡೆಸುತ್ತಿದ್ದಂತೆಯೇ ಮಳೆ ಮುನಿಸಿಕೊಂಡಿತ್ತು .
ಜಿಲ್ಲೆಯ ಕೆಲಭಾಗದ ಭೂಮಿಗೆ ತುಂಗಭದ್ರಾ ಎಡದಂಡೆ ಯೋಜನೆಯಿಂದಾಗಿ ಹಸುರು ಕಾಣುತ್ತದೆ. ಕೃಷ್ಣಾನದಿಯ ನೀರೂ ಕೆಲಭಾಗವನ್ನು ತಣಿಸುತ್ತದೆ. ಆದರೆ ಬಹುಸಂಖ್ಯೆಯ ರೈತರು ನೆಚ್ಚಿಕೊಂಡಿರುವುದು ಮಳೆರಾಯನನ್ನು . ಈ ರೈತರು ಹುಯ್ಯೋ ಹುಯ್ಯೋ ಮಳೆರಾಯ ಎಂದು ಮುಗಿಲು ನೋಡುತ್ತಿದ್ದಾರೆ. ಮಳೆರಾಯನಿಗೂ ಭೇದಭಾವವಾ ? ತರವಲ್ಲ ತಗಿ.....
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು