ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌: ಮೊಬೈಲ್‌ ತುಂಬಾ ವಾಜಪೇಯಿ ಅಹಿತಾನುಭವ ಮೆಸೆಜ್‌

By Staff
|
Google Oneindia Kannada News

ಗುಜರಾತ್‌: ಮೊಬೈಲ್‌ ತುಂಬಾ ವಾಜಪೇಯಿ ಅಹಿತಾನುಭವ ಮೆಸೆಜ್‌
ಮೆಸೆಜ್‌ ಮೂಲದ ತನಿಖೆಗೆ ಸರಕಾರದಿಂದ ಆದೇಶ

ಅಹಮದಾಬಾದ್‌: ಕಳೆದೆರಡು ದಿನಗಳಿಂದ ಗುಜರಾತ್‌ನಲ್ಲಿ ಮೊಬೈಲ್‌ ತುಂಬಾ ಮಾಜಿ ಪ್ರಧಾನಿ ವಾಜಪೇಯಿ ಹೀಯಾಳಿಸುವ ಮೆಸೆಜ್‌ಗಳು. ಈ ಮೆಸೆಜ್‌ಗಳ ಮೂಲ ತನಿಖೆ ಮಾಡಲು ಗುಜರಾತ್‌ ಸರಕಾರ ಆದೇಶ ಹೊರಡಿಸಿದೆ.

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮೊಬೈಲ್‌ ತುಂಬಾ ವಾಜಪೇಯಿ ಹಿತಾನುಭವದ ಮೆಸೆಜ್‌ಗಳು ಬರುತ್ತಿದ್ದುವು. ಚುನಾವಣೆ ಸೋಲು ಮತ್ತು ಮೋದಿ ಪದಚ್ಯುತಿ ವಾಗ್ಯುದ್ಧದ ಹಿನ್ನೆಲೆಯಲ್ಲಿ ಈ ಮೆಸೆಜ್‌ಗಳು ರವಾನೆಯಾಗುತ್ತಿರಬಹುದು ಎಂದು ಸಂಶಯಿಸಲಾಗಿದೆ.

‘ವಾಜಪೇಯಿಯನ್ನು ಈ ದೇಶದಿಂದಲೇ ಉಚ್ಚಾಟಿಸಬೇಕು’ಮತ್ತು ಇನ್ನಿತರ ಮೆಸೆಜ್‌ಗಳ ಮೂಲ ಪತ್ತೆ ಹಚ್ಚಲು ಪೊಲೀಸ್‌ ಮಧ್ಯ ಪ್ರವೇಶಿಸ ಬೇಕೆಂದು ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‌ಒತ್ತಾಯಿಸಿದ್ದಾರೆ.

ವಾಜಪೇಯಿ ಕುರಿತು ರವಾನೆಯಾಗುತ್ತಿರುವ ಕೀಳುಮಟ್ಟದ ಜಾಹಿರಾತುಗಳ ಮೂಲವನ್ನು ಕಂಡು ಹಿಡಿಯಲಾಗುವುದು ಎಂದು ಗುಜರಾತ್‌ಪೊಲೀಸ್‌ ಮಹಾನಿರ್ದೇಶಕ ಎ.ಕೆ.ಭಾರ್ಗವ ಹೇಳಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X