ದಾಂಡೇಲಿಯ ‘ಕಾಳಿ’ಯಲ್ಲಿ ಸಿಕ್ಕ ಗಣೇಶ! ಕುತೂಹಲವೂ ಪ್ರಶ್ನೆಗಳೂ
ದಾಂಡೇಲಿಯ ‘ಕಾಳಿ’ಯಲ್ಲಿ ಸಿಕ್ಕ ಗಣೇಶ! ಕುತೂಹಲವೂ ಪ್ರಶ್ನೆಗಳೂ
ನದಿಯ ಗರ್ಭದಲ್ಲಿ ಸಿಕ್ಕ ಕಪ್ಪು ಗ್ರಾನೈಟ್ ಗಣೇಶ....
ಈ ಮುನ್ನ ಸ್ಥಳೀಯ ಕಾರ್ಖಾನೆಯಾಂದರ ಉದ್ಯೋಗಿಯಾಗಿದ್ದ ರಮೇಶ್ ಕದಂ ಸದ್ಯಕ್ಕೆ ನಿರುದ್ಯೋಗಿ. ಕಾರ್ಖಾನೆ ಮುಚ್ಚಿದ ನಂತರ ಆತನ ದಿನಗಳು ಅಷ್ಟೇನೂ ಸುಖಕರವಾಗಿರಲಿಲ್ಲ . ಇಂಥ ಸಂದರ್ಭದಲ್ಲಿ ಆತನಿಗೆ ತುಸು ನೆಮ್ಮದಿ ಕೊಡುತ್ತಿದ್ದುದು ಆಗಾಗ ಕೈಗೊಳ್ಳುತ್ತಿದ್ದ ಮೀನು ಶಿಕಾರಿ.
ಮೀನು ಹಿಡಿಯುವುದು ಕದಂರ ನೆಚ್ಚಿನ ಹವ್ಯಾಸಗಳಲ್ಲೊಂದು. ಮೊನ್ನೆಯಾಂದು ದಿನ ಮೀನು ಹಿಡಿಯಲು ಕಾಳಿ ನದಿಗಿಳಿದಿದ್ದ ಕದಂಗೆ ಸಿಕ್ಕಿದ್ದು ಭಾರೀ ಬೇಟೆ ! ಮೀನಿಗೆ ಗಾಳ ಹಾಕುತ್ತಾ ದಾಂಡೇಲಿಯಿಂದ ಸುಮಾರು 5 ಕಿಮೀ ಕ್ರಮಿಸಿದ ಕದಂಗೆ ಒಂದು ಭಾರೀ ಮೀನು ಸಿಕ್ಕಿತ್ತು . ಆದರೆ ಆ ಹಠಮಾರಿ ಮೀನು ಕದಂಗೆ ಚಳ್ಳೆಹಣ್ಣು ತಿನ್ನಿಸಿ ಪಾರಾಯಿತು. ಆ ಬೇಸರದಲ್ಲೇ ಮುಂದೆ ಸಾಗಿದಾಗ ಕದಂಗೆ ಸಿಕ್ಕಿದ್ದು ಗಣೇಶ !
ಕಾಳಿ ನದಿಯಲ್ಲಿ ನೀರು ತೆಳ್ಳಗಿತ್ತು . ಆ ಕಾರಣದಿಂದ ನದಿಯ ಮಧ್ಯಭಾಗ್ಯಕ್ಕೆ ನಡೆದೇ ತೆರಳಿದ ಕದಂ, ಅಲ್ಲೊಂದು ಕಡೆ ಮರಳ ಮೇಲೆ ಮಲಗಿದ ಗಣೇಶ ಮೂರ್ತಿಯನ್ನು ಕಂಡರು. ಸುತ್ತಲೂ ಕಪ್ಪು ಕಲ್ಲುಗಳಿದ್ದವು. ಕಪ್ಪು ಗ್ರಾನೈಟ್ ಶಿಲೆಯ ಗಣೇಶಮೂರ್ತಿಯ ಎತ್ತರ 2 ಅಡಿಗಳು. ಮೂರ್ತಿಯ ತಲೆಗೆ ಚಾಮರವಾಗಿ ಹೆಡೆಬಿಚ್ಚಿದ ನಾಗನಿದ್ದಾನೆ. ಅಂದಹಾಗೆ, ಈ ಗಣೇಶನಿಗೆ 6 ಕೈಗಳು.
ಸದ್ಯಕ್ಕೆ ಕದಂರ ಮನೆಯೇ ಕಾಳಿಯಲ್ಲಿ ಸಿಕ್ಕ ಗಣೇಶನಿಗೆ ಮಂಟಪವಾಗಿದೆ. ಜನ ತಂಡೋಪತಂಡವಾಗಿ ಬಂದು ಗಣೇಶನಿಗೆ ನಮೋ ಎನ್ನುತ್ತಿದ್ದಾರೆ. ಗಣೇಶನಿಗೊಂದು ಆಲಯ ಕಟ್ಟುವ ಯೋಚನೆ ಕದಂರ ತಲೆಯಲ್ಲಿ ಮೊಳೆತಿದೆ.
ಈ ನಡುವೆ ವಿಗ್ರಹದ ಕುರಿತು ಹಲವು ಪ್ರಶ್ನೆಗಳೂ ಎದ್ದಿವೆ : ಕಾಳಿ ನದಿಯಲ್ಲಿ ಸಿಕ್ಕ ಗಣೇಶ ವಿಗ್ರಹ ಯಾವ ಕಾಲದ್ದು ? ಅದು ನದಿ ಸೇರಿದ್ದು ಹೇಗೆ ? ವಿಗ್ರಹದ ಇತಿಹಾಸ ಏನು ? ಇತ್ಯಾದಿ.... ಇತಿಹಾಸ ತಜ್ಞರು ಹಾಗೂ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ಕಣ್ಣು ಇನ್ನೂ ಇತ್ತ ಬಿದ್ದಂತಿಲ್ಲ ...
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications