ಅಲೋಕ್ ಮ್ಯಾಜಿಕ್ : ದಾವಣಗೆರೇಲಿ ಅರ್ಧ ರಾತ್ರಿ ದಂಧೆ ಬಂದ್!
ಅಲೋಕ್ ಮ್ಯಾಜಿಕ್ : ದಾವಣಗೆರೇಲಿ ಅರ್ಧ ರಾತ್ರಿ ದಂಧೆ ಬಂದ್!
ಶಾಂತಿ-ಸುವ್ಯವಸ್ಥೆ ರಕ್ಷಣೆಗೆ ಪೊಲೀಸ್ ವರಿಷ್ಠರ ಕಟ್ಟುನಿಟ್ಟು ಕ್ರಮ
ಅಲೋಕ್ ಕುಮಾರ್ ರಾಜ್ಯದ ಪ್ರಾಮಾಣಿಕ ಐಪಿಎಸ್ ಅಧಿಕಾರಿಗಳಲ್ಲೊಬ್ಬರೆಂದು ಹೆಸರು ಪಡೆದವರು. ಹಾಗಾಗಿಯೇ ಅಲೋಕ್ ದಾವಣಗೆರೆಗೆ ಬರುತ್ತಾರೆಂದಾಗ ಮನಸ್ಸಿನಲ್ಲೇ ಸ್ವಾಗತ ಕೋರಿದ ನಾಗರಿಕರ ಸಂಖ್ಯೆ ದೊಡ್ಡದು. ಅಲೋಕ್ಕುಮಾರ್ ನಾಗರಿಕರ ನಿರೀಕ್ಷೆಗಳನ್ನು ಹುಸಿ ಮಾಡಿಲ್ಲ . ಇತ್ತೀಚೆಗಷ್ಟೇ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠರಾಗಿ ಅಧಿಕಾರ ವಹಿಸಿಕೊಂಡಿರುವ ಅಲೋಕ್ ಕುಮಾರ್, ಮೊದಲ ದಿನದಿಂದಲೇ ತಮ್ಮ ವರಸೆ ಆರಂಭಿಸಿದ್ದಾರೆ. ಅಂಥ ಗತ್ತಿನ ಆದೇಶಗಳಲ್ಲೊಂದು- ಅರ್ಧರಾತ್ರಿಯ ವ್ಯವಹಾರಗಳಿನ್ನು ಬಂದ್ !
ಸಿನಿಮಾ ಮಂದಿರ, ಹೊಟೇಲು, ಬಾರ್, ಮನರಂಜನಾ ಕೇಂದ್ರ- ಪ್ರತಿಯಾಂದೂ ರಾತ್ರಿ 11.30ರೊಳಗೆ ಕಡ್ಡಾಯವಾಗಿ ಮುಚ್ಚಬೇಕು ಎನ್ನುವುದು ಅಲೋಕ್ ಆದೇಶ. ದರೋಡೆ, ದೊಂಬಿ ಹಾಗೂ ಕುಡುಕರ ಹಾವಳಿ ತಡೆಗೆ ಈ ಮುಂಜಾಗರೂಕತಾ ಕ್ರಮ ಅಗತ್ಯ ಎಂದು ತಮ್ಮ ಆದೇಶವನ್ನವರು ಸಮರ್ಥಿಸಿಕೊಳ್ಳುತ್ತಾರೆ.
ದಂಧೆಗಳ ಮಾತು ಪಕ್ಕಕ್ಕಿರಲಿ ; ಜನತೆ ಕೂಡ ಶಿಸ್ತನ್ನು ರೂಢಿಸಿಕೊಳ್ಳಬೇಕು. ಅರ್ಧರಾತ್ರಿಯಾಳಗೆ ಜನ ಮನೆ ಸೇರಬೇಕು. ಇಲ್ಲದೆ ಹೋದಲ್ಲಿ ಗಸ್ತು ತಿರುಗುವ ಪೊಲೀಸರ ಪ್ರಶ್ನೆಗಳ ಕಣ್ಣಿಗೆ ಒಳಗಾಗಬೇಕಾದೀತು ಎಂದು ಅಲೋಕ್ ಎಚ್ಚರಿಸಿದ್ದಾರೆ. ಮದುವೆ-ಮುಂಜಿ-ಆಸ್ಪತ್ರೆಯಂಥ ಪ್ರಕರಣಗಳಲ್ಲಿ ಮೂಗು ತೂರಿಸೊಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಿರುವುದರಿಂದ, ರಾತ್ರಿ ಗಸ್ತನ್ನು ಪರಿಷ್ಕರಿಸಲಾಗುತ್ತಿದೆ. ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಡ್ಡಾದಿಡ್ಡಿ ಡ್ರೆೃವ್ ಮಾಡುವವರ (ವಿಶೇಷವಾಗಿ ವಿದ್ಯಾರ್ಥಿಗಳು) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇದಿಷ್ಟೂ ಅಲೋಕ್ ಆಡಳಿತದ ಒಂದು ಮುಖ. ನೋಡಿ ಕಲಿಯುವ ಬುದ್ಧಿ ನಮ್ಮ ಇತರ ಅಧಿಕಾರಿಗಳಿಗೆ ಬರಬಾರದೆ ?
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications