ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮಿಶ್ರ ಸರಕಾರದ ಸಂತುಲಿತ ಯೋಜನೆಗೆ ರಾಜ್ಯಪಾಲರಿಂದ ಚಾಲನೆ

By Staff
|
Google Oneindia Kannada News

ಸಮ್ಮಿಶ್ರ ಸರಕಾರದ ಸಂತುಲಿತ ಯೋಜನೆಗೆ ರಾಜ್ಯಪಾಲರಿಂದ ಚಾಲನೆ
ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಟಿ.ಎನ್‌.ಚತುರ್ವೇದಿ

ಬೆಂಗಳೂರು: ಹಳ್ಳಿ ಮತ್ತು ರೈತರನ್ನು ಸಶಕ್ತಗೊಳಿಸಲು ಜನಪರ ಸಾಮಾನ್ಯ ಆಡಳಿತ ನೀಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಹೇಳಿದರು.

ಅವರು ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ಮೂಲಕ ಅವರು ರಾಜ್ಯದ ಪ್ರಪ್ರಥಮ (ಕಾಂಗ್ರೆಸ್‌-ಜೆಡಿಎಸ್‌) ಸಮ್ಮಿಶ್ರ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಿಗೆ ಚಾಲನೆ ನೀಡಿದಂತಾಗಿದೆ.

ರಾಜ್ಯಪಾಲರ ಭಾಷಣದ ಪ್ರಮುಖ ಅಂಶಗಳು :

  • ಸ್ವಆಡಳಿತ ನಡೆಸುವ ನಿಟ್ಟಿನಲ್ಲಿ (ವಿಕೇಂದ್ರೀಕರಣ) ರೈತರ ಮತ್ತು ಹಳ್ಳಿಜನರ ಸಶಕ್ತೀಕರಣ
  • ಬರಗಾಲ ಪರಿಹಾರಕ್ಕಾಗಿ ದೀರ್ಘಕಾಲೀನ ಯೋಜನೆಗಳು
  • ಹಳ್ಳಿ ಮತ್ತು ಸಣ್ಣ-ಶಹರುಗಳ ವಿದ್ಯಾವಂತ ಯುವಜನತೆಗೆ ಉದ್ಯೋಗ
  • ಐಟಿ ಮೂಲಕ ರಾಜ್ಯದಲ್ಲಿ ಒಂದು ಮಿಲಿಯ ಉದ್ಯೋಗ ಸೃಷ್ಟಿ
  • ಉದ್ಯೋಗ ಹೆಚ್ಚಳಕ್ಕಾಗಿ ‘ ಬಿಪಿಒ’ ಗೆ ಆದ್ಯತೆ
  • ಬಂಡವಾಳ ಹೂಡಿಕೆಗೆ ಆಹ್ವಾನ
  • ಪ್ರಮುಖ ಮಾರುಕಟ್ಟೆ ಮತ್ತು ಉತ್ಪಾದನಾ ಸ್ಥಳಗಳಿಗೆ ಹಾಗೂ ಬಂದರಿಗೆ ರೈಲು ಸಂಪರ್ಕ
  • ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಆರಂಭ
  • ಕೃಷಿ ಆಧಾರಿತ ಕೈಗಾರಿಕೆಗಳ ಹೆಚ್ಚಳಕ್ಕೆ ಕ್ರಮ
  • ಪ್ರಾಥಮಿಕ ಶಿಕ್ಷಣಕ್ಕೆ ಪ್ರಥಮ ಆದ್ಯತೆ, ಶಾಲೆ -ಶಿಕ್ಷಕರ ಸಂಖ್ಯೆ ಹೆಚ್ಚಳ
  • ಬೆಂಗಳೂರಿಗೆ ಕಾವೇರಿ ನೀರು ಸರಬರಾಜಿಗಾಗಿ 3,500 ಕೋಟಿ ಯೋಜನೆ
  • ವಿದ್ಯುತ್‌ಶಕ್ತಿ ಹೆಚ್ಚಳಕ್ಕೆ ಯೋಜನೆ
  • ಮೊದಲ ಹಂತದಲ್ಲಿ 20 ಮತ್ತು ಎರಡನೇ ಹಂತದಲ್ಲಿ 19 ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ
(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X