ಕನ್ನಡ ಬೆಳೆಯಲು ವಿದ್ವತ್ತಿನ ಜೊತೆ ಹೋರಾಟ ಆಗಬೇಕು : ದೇಜಗೌ
ಕನ್ನಡ ಬೆಳೆಯಲು ವಿದ್ವತ್ತಿನ ಜೊತೆ ಹೋರಾಟ ಆಗಬೇಕು : ದೇಜಗೌ
ದೇಶ ಉಳಿಯಬೇಕಾದರೆ ಮೊದಲು ಭಾಷೆಯನ್ನು ಉಳಿಸಿ ಬೆಳೆಸಬೇಕು..
ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮೈಸೂರು ವಿಶ್ವವಿದ್ಯಾಲಯದ ಆಶ್ರದಲ್ಲಿ ನಡೆದ ಜಾಗತೀಕರಣದ ಸಂದರ್ಭದಲ್ಲಿ ಜನಸಂಸ್ಕೃತಿಗಳು ಕುರಿತ ವಿಷಯದ ಮೇಲೆ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಡಾ. ದೇಜಗೌ ಅವರು ಮಾತನಾಡುತ್ತಿದ್ದರು.
ಜಗತ್ತಿನ ಉದ್ಧಾರ ಎನ್ನವುದು ಆಗುವುದೇ ಆದರೆ ಅದು ಶೂದ್ರಾತಿಶೂದ್ರರಿಂದ ಮಾತ್ರಸಾಧ್ಯ. ಅವರು ಅನ್ನ, ಮುದ್ದೆ ಹಾಕದಿದ್ದರೆ ನಾವು ಪಾಠ ಮಾಡಲು ಆಗದು. ಅವರೇ ನಮ್ಮ ಅನ್ನದಾತರು. ಆದರೆ ದೇಶದಲ್ಲಿ ಕೃಷಿಗೆ ಆದ್ಯತೆ ನೀಡುತ್ತಲೇ ಇಲ್ಲ.ಕೃಷಿಕರ ಬಗ್ಗೆ ಚ್ಚಿನ ಕಾಳಜಿ ವಹಿಸಿದ, ಅದನ್ನು ವ್ಯಕ್ತಪಡಿಸಿದ ಏಕೈಕ ಕವಿ ಕುವೆಂಪು. ಅವರಂತೆ ಪುುರೋತಶಾಹಿಯನ್ನು ಧಿಕ್ಕರಿಸಿದ ಗಂಡು ಕವಿ ಇನ್ನೆಬ್ಬರಿಲ್ಲ ಎಂದು ದೇಜಗೌ ಹೇಳಿದರು.
ಜಗತ್ತಿನ ಎಲ್ಲಾ ಕಲೆಗಳಿಗೂ ಜನಪದವೇ ಮೂಲ. ಜನಪದದ ಪ್ರಜ್ನೆ ಗೊತ್ತಿರದವನಿಗೆ ಭವಿಷ್ಯದ ಪ್ರಜ್ಞೆ ಇರುವುದಿಲ್ಲ. ಪ್ರಪಂಚದಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಭಾಷೆಗಳಿದ್ದರೆ, ಭಾರತದಲ್ಲಿ 1,800 ಭಾಷೆಗಳಿವೆ. ಪ್ರತಿಯಾಂದು ಪ್ರದೇಶದ ಭಾಷೆಯೂ ಆಯಾ ಪ್ರದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಮೆಕಾಲೆ ಬಂದು ಇಲ್ಲಿಯ ಸ್ಥಳೀಯ ಭಾಷೆಗಳನ್ನು ನಾಶಪಡಿಸಿ, ತನ್ನದೇ ಆದ ಏಕರೂಪದ ಸಂಸ್ಕೃತಿಯನ್ನು ನೆಲೆಯೂರಿಸಿ, ಇಲ್ಲಿ ಶಾಶ್ವತವಾಗಿ ಅಧಿಕಾರ ಹಿಡಿಯುವ ಸಂಚು ಮಾಡಿದ್ದ ಎಂದು ದೇಜಗೌ ತಿಳಿಸಿದರು.
ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ. ಎ.ಸಿ.ಲಲಿತ ನಿರೂಪಣೆಮಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications