ಅವರು-ಇವರು ಸೇರಿ ಹತ್ತು ಸಚಿವರು : ಜೂ.7ಕ್ಕೆ ಖಾತೆ ಹಂಚಿಕೆ ಕ್ಯಾತೆ
ಅವರು-ಇವರು ಸೇರಿ ಹತ್ತು ಸಚಿವರು : ಜೂ.7ಕ್ಕೆ ಖಾತೆ ಹಂಚಿಕೆ ಕ್ಯಾತೆ
ನೂತನ ಸಚಿವರ ಸಾಲಿನಲ್ಲಿರದ ಎಚ್.ಕೆ.ಪಾಟಿಲ್
ವಿಧಾನ ಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿಗಳ ಹೊರತಾಗಿ ಇದೇ ಮೊದಲ ಬಾರಿಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಾಹ್ನ 1:00ರಿಂದ 1:30ಗಂಟೆಯವರೆಗೆ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನ ತಲಾ ಐವರು ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಟಿ.ಎನ್.ಚತುರ್ವೇದಿ ಪ್ರಮಾಣ ವಚನ ಭೋದಿಸಿದರು.
ಮಲ್ಲಿಕಾರ್ಜುನ ಖರ್ಗೆ ಪ್ರಮಾಣ ವಚನ ಸ್ವೀಕರಿಸಿದ ಮೊದಲಿಗರಾದರೆ ಎಚ್.ಡಿ.ರೇವಣ್ಣ ತಂದೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಿರೀಕ್ಷಿತ ಸಚಿವ ಎಚ್.ಕೆ.ಪಾಟಿಲ್ ನೂತನ ಸಚಿವರ ಸಾಲಿನಲ್ಲಿರಲಿಲ್ಲ. ಇದರಿಂದ ಅವರು ವಿಧಾನ ಪರಿಷತ್ ಅಧ್ಯಕ್ಷರಾಗುವ ಸಾಧ್ಯತೆ ಸ್ಪಷ್ಟವಾಗಿದೆ.
ಈ ನಡುವೆ ಮಹತ್ವದ ಬೆಳವಣಿಗೆಯಲ್ಲಿ ವಿಲಾಸ್ರಾವ್ ದೇಶ್ಮುಖ್ ಅವರನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸ್ಥಾನದಿಂದ ತೆಗೆದು ಹಾಕಲಾಗಿದೆ. ಅವರು ಎಸ್.ಎಂ.ಕೃಷ್ಣ ಮತ್ತು ಡಿಕೆಶಿ ಪರ ತೀವ್ರ ಲಾಬಿ ನಡೆಸುತ್ತಿದ್ದ ಆರೋಪವಿದೆ. ಅವರ ಸ್ಥಾನದಲ್ಲಿ ಕೆ.ಅಹ್ಮದ್ ಪಟೇಲ್ನ್ನು ನೇಮಕ ಮಾಡಲಾಗಿದೆ.
ನೂತನ ಸಚಿವರುಗಳಿಗೆ ಜೂ.7ರ ಸೋಮವಾರ ಖಾತೆ ಹಂಚಿಕೆ ಮಾಡಲಾಗುವುದೆಂದು ಮುಖ್ಯಮಂತ್ರಿ ಧರ್ಮಸಿಂಗ್ ತಿಳಿಸಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಸಚಿವರುಗಳು:
| ಹೆಸರು | ಪಕ್ಷ | ಸಚಿವ ಸ್ಥಾನ | ಪ್ರತಿನಿಧಿಸಿದ ಕ್ಷೇತ್ರ |
| ಮಲ್ಲಿಕಾರ್ಜುನ ಖರ್ಗೆ | ಕಾಂಗ್ರೆಸ್ | ಸಂಪುಟ | ಗುರುಮಿಠಕಲ್ |
| ಪಿ.ಜಿ.ಆರ್.ಸಿಂಧ್ಯಾ | ಜೆಡಿಎಸ್ | ಸಂಪುಟ | ಕನಕಪುರ |
| ಎಂ.ಪಿ.ಪ್ರಕಾಶ್ | ಜೆಡಿಎಸ್ | ಸಂಪುಟ | ಹೂವಿನ ಹಡಗಲಿ |
| ಡಿ.ಮಂಜುನಾಥ್ | ಜೆಡಿಎಸ್ | ಸಂಪುಟ | ಹಿರಿಯೂರು ಮೀಸಲು |
| ಪ್ರಾಕಾಶ್ ಬಾಬಣ್ಣ ಹುಕ್ಕೇರಿ | ಕಾಂಗ್ರೆಸ್ | ಸಂಪುಟ | ಸದಲಗ |
| ಎಸ್.ಆರ್. ಮೋರೆ | ಕಾಂಗ್ರೆಸ್ | ಸಂಪುಟ | ಧಾರವಾಡ ನಗರ |
| ಕೆ.ಶ್ರೀನಿವಾಸ ಗೌಡ | ಕಾಂಗ್ರೆಸ್ | ಸಂಪುಟ | ಕೋಲಾರ |
| ಎಚ್.ಡಿ.ರೇವಣ್ಣ | ಜೆಡಿಎಸ್ | ಸಂಪುಟ | ಹೊಳೆ ನರಸೀಪುರ |
| ಮಿರಾಜುದ್ದೀನ್ ಪಟೇಲ್ | ಜೆಡಿಎಸ್ | ಸಂಪುಟ | ಹುಮ್ನಾಬಾದ್ |
| ತನ್ವೀರ್ ಸೇಠ್ | ಕಾಂಗ್ರೆಸ್ | ರಾಜ್ಯ | ನರಸಿಂಹ ರಾಜ |
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications