ಸಚಿವ ಲಾಲೂ ಮಾರುವೇಷ ; ರೈಲ್ವೆ ಸಿಬ್ಬಂದಿಗಳಿಗೀಗ ಮೀನಮೇಷ..!
ಸಚಿವ ಲಾಲೂ ಮಾರುವೇಷ ; ರೈಲ್ವೆ ಸಿಬ್ಬಂದಿಗಳಿಗೀಗ ಮೀನಮೇಷ..!
ಬಿಹಾರ: ಒಂದು ವಾರದಲ್ಲಿ ಮೂರು ರೈಲು ದರೋಡೆ ಪ್ರಕರಣಗಳು
ರೈಲ್ವೆ ಇಲಾಖೆಯ ಸಿಬ್ಬಂದಿ ವರ್ಗದವರಂತೂ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದರೆ ಮುಗಿಯಿತು. ಮಾರು ವೇಶದಲ್ಲಿ ಬರಲಿರುವ ಲಾಲೂ ಪ್ರಸಾದರ ಕೈಯಲ್ಲಿ ಸಿಕ್ಕುಬಿದ್ದಂತೆ. ಹೌದು, ಪ್ರಯಾಣಿಕರ ಸಮಸ್ಯೆಗಳನ್ನು, ತೊಡಕು ತೊಂದರೆಗಳನ್ನು ಅರಿಯಲು, ರೈಲ್ವೆ ನಿಲ್ದಾಣಗಳಲ್ಲಿನ ವ್ಯವಸ್ಥೆ-ಅವ್ಯವಸ್ಥೆಗಳ ಸ್ಥೂಲ ಚಿತ್ರಣವನ್ನು ವೀಕ್ಷಿಸಲೆಂದು ನೂತನ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಸ್ವತಃ ತಾವೇ ಬಣ್ಣ ಹಚ್ಚಿ ನಿಂತಿದ್ದಾರೆ.
ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ತೊಂದರೆಗಳನ್ನು ಪರಿಹರಿಸಿಯೇ ಸಿದ್ಧ ಎಂದು ಹೊರಟಿರುವ ಲಾಲೂರ ಹೊಸ ಉಪಾಯ ಫಲಿಸಲಿ. ಇಲಾಖೆಯಲ್ಲಿನ ಭ್ರಷ್ಟ ಅಧಿಕಾರಿಗಳ ಬಂಡವಾಳ ಹೊರ ಬರಲಿ. ಆದರೆ ಹೆದರಿಕೆಯ ವಿಷಯವೆಂದರೆ ಮೊದಲೇ ರೈಲ್ವೆ ದರೋಡೆಯ ಸಂಖ್ಯೆ ಹೆಚ್ಚುತ್ತಿದೆ. ಕಳ್ಳರಿಗೆ ಲಾಲೂ ಯಾರೆಂದು ತಿಳಿಯದೆ ಅವರ ಜೋಳಿಗೆಗೇ ಕೈ ಹಾಕದಿದ್ದರೆ ಸಾಕು!
ಲಾಲೂ ಪ್ರಸಾದರ ರಾಜ್ಯ ಬಿಹಾರದಲ್ಲೇ ಇನ್ನೊಂದು ರೈಲ್ವೆ ದರೋಡೆ
ಗಯಾ : ಸಶಸ್ತ ್ರರಾದ ದರೋಡೆಕೋರರು ಜೂನ್ 3ರ ರಾತ್ರಿ ಜಿಲ್ಲೆಯ ಡೆಹ್ರಾಡೂನ್ ಎಕ್ಸ್ಪ್ರೆಸ್ ಸ್ಲೀಪರ್ ಕೋಚ್ಗೆ ನುಗ್ಗಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಮೂರು ಲಕ್ಷ ರೂಪಾಯಿ ನಗದು ಮತ್ತು ಒಂದು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಆಕ್ರಮಣದಲ್ಲಿ ಬಿಎಸ್ಎಫ್ ಇನ್ಸ್ಪೆಕ್ಟರ್ ಹತರಾಗಿದ್ದು ಸುಮಾರು ಹತ್ತು ಜನ ಪ್ರಯಣಿಕರುಗಳಿಗೆ ಚಿಕ್ಕ ಪುಟ್ಟ ಚೂರಿ ಇರಿತದ ಗಾಯಗಳಾಗಿವೆ ಎಂದು ಗಯಾ ಸ್ಟೇಷನ್ ಮಾಸ್ಟರ್ ಡಿ.ಎನ್. ಭಗತ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಳೆದ ಒಂದು ವಾರದಲ್ಲಿ, ಇದು ಬಿಹಾರದಲ್ಲಿ ನಡೆದಿರುವ ಮೂರನೇ ರೈಲು ದರೋಡೆಯಾಗಿದೆ.
ದರೋಡೆಕೋರರೂ ಸಹ ತಮ್ಮ ರಾಜ್ಯದ ರೈಲ್ವೆ ಸಚಿವರ ಮರ್ಯಾದೆಯನ್ನು ಅ(ಉ)ಳಿಸುವ ಪ್ರಯತ್ನದಲ್ಲಿ ಭಾರಿ ಕಾರ್ಯ ಪ್ರವೃತ್ತರಾದಂತಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications