ಸುಬ್ರಹ್ಮಣ್ಯನ ಕುಕ್ಕೆಯಲ್ಲಿ 18 ಅಡಿ ಎತ್ತರದ ಬೃಹತ್ ಏಕಶಿಲಾ ಗಣಪತಿ
ಸುಬ್ರಹ್ಮಣ್ಯನ
ಕುಕ್ಕೆಯಲ್ಲಿ
18
ಅಡಿ
ಎತ್ತರದ
ಬೃಹತ್
ಏಕಶಿಲಾ
ಗಣಪತಿ
ಸಾಗರದ
ಶಿಲ್ಪಿ
ಅಶೋಕ್
ಗುಡಿಗಾರ್
ಕೈಯಲ್ಲಿ
ಅರಳಿದ
ಕಲಾಕೃತಿ
ಇವ ಅಂತಿಂಥ ಗಣೇಶನಲ್ಲ . 18 ಅಡಿ ಎತ್ತರದ ಗಣೇಶ. ಏಕಶಿಲೆಯಲ್ಲಿ ಕಡೆಯಲಾದ ಈ ಗಣೇಶ ಮೂರ್ತಿ ಮೇ 31ರ ಸೋಮವಾರದಿಂದ ದೇಗುಲದ ಮತ್ತೊಂದು ಆಕರ್ಷಣೆ, ಭಕ್ತಿಯ ಕೇಂದ್ರ.
ಗಣೇಶ ಮೂರ್ತಿಯ ವಿಗ್ರಹ ವಿಶೇಷ ಗುಣಮಟ್ಟದಿಂದ ಕೂಡಿದೆ. 18 ಅಡಿ ಎತ್ತರದ ಗಣೇಶ ಮೂರ್ತಿಯ ವಿಗ್ರಹವನ್ನು ಏಕಶಿಳೆಯಲ್ಲಿ ಕಡೆಯಲಾಗಿದ್ದು , ಶಿಲೆಯ ತೂಕ 80 ಟನ್ಗಳು ಎಂದು ದೇಗುಲದ ವಕ್ತಾರ ಬಿ.ವಿಠ್ಠಲ ರಾವ್ ತಿಳಿಸಿದ್ದಾರೆ. ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆಯ ಗುಜ್ಜೆಗೌಡನಪುರ ಗ್ರಾಮದಲ್ಲಿ ಈ ಬೃಹತ್ ಕಲ್ಲನ್ನು ಪತ್ತೆ ಹಚ್ಚಲಾಗಿತ್ತು .
ಸಾಗರದ ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಿ ಅಶೋಕ್ ಗುಡಿಗಾರ್ ಬೃಹತ್ ಗಣೇಶ ವಿಗ್ರಹವನ್ನು ರೂಪಿಸಿದ್ದಾರೆ. ಗಣೇಶ ಮೂರ್ತಿಯನ್ನು ಸ್ಥಾಪಿಸಿರುವ ಪಾಣಿಪೀಠ 14 ಅಡಿ ಎತ್ತರವಾಗಿದ್ದು , ಇದರಿಂದಾಗಿ ಮೂರ್ತಿಯ ಒಟ್ಟು ಎತ್ತರ 32 ಅಡಿಗಳಾಗಿದೆ. ಪ್ರವಾಸಿಗರು ಹಾಗೂ ಭಕ್ತಾದಿಗಳನ್ನು ಈ ವಿಗ್ರಹ ಸೆಳೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು