ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬರಿಸಿಬೊಬ್ಬಿರಿದ ಮಳೆದಾಳಿಗೆ ಬೆಂಗಳೂರಲ್ಲಿ ಮುನ್ನೂರು ಮರ ಬಲಿ

By Staff
|
Google Oneindia Kannada News

ಅಬ್ಬರಿಸಿಬೊಬ್ಬಿರಿದ ಮಳೆದಾಳಿಗೆ ಬೆಂಗಳೂರಲ್ಲಿ ಮುನ್ನೂರು ಮರ ಬಲಿ
ಸಂಚಾರ ಅಸ್ತವ್ಯಸ್ತ , ವಿದ್ಯುತ್‌ ಕಣ್ಣಾಮುಚ್ಚಾಲೆ, ಪಾಲಿಕೆ-ಪೊಲೀಸ್‌ ನಿದ್ದೆಗೆ ಸಂಚಕಾರ

ಬೆಂಗಳೂರು : ಗುಡುಗು ಸಿಡಿಲು ಹಾಗೂ ಬಿರುಗಾಳಿ ಸಹಿತ ಬಿರುಮಳೆಗೆ ಸಿಕ್ಕಿ ನಗರದಲ್ಲಿ ಮುನ್ನೂರಕ್ಕೂ ಹೆಚ್ಚು ಮರಗಳು ಬುಡಮೇಲಾಗಿವೆ.

ಮಲ್ಲೇಶ್ವರಂ, ಸದಾಶಿವನಗರ, ಶ್ರೀರಾಮಪುರ, ಸ್ಯಾಂಕಿ ರಸ್ತೆ , ವಯ್ಯಾಲಿ ಕಾವಲ್‌, ಗುಟ್ಟಹಳ್ಳಿ, ಮೇಕ್ರಿ ವೃತ್ತ ಮುಂತಾದ ಪ್ರದೇಶಗಳಲ್ಲಿ ಕನಿಷ್ಠ ಮುನ್ನೂರು ಮರಗಳು ಮಳೆಗಾಳಿಯಿಂದ ಉರುಳಿ ಬಿದ್ದಿರಬಹುದೆಂದು ಅಂದಾಜು ಮಾಡಲಾಗಿದೆ. ಏ.22 ಹಾಗೂ 23ರ ರಾತ್ರಿ ಸುರಿದ ಬಿರುಮಳೆಯಿಂದ ಈ ಮರ ಹಾನಿ ಸಂಭವಿಸಿದೆ.

ಅಬ್ಬರದ ಮಳೆಗಾಳಿಯಿಂದಾಗಿ ಬೆಂಗಳೂರಿನಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವುಂಟಾಗಿದ್ದು , ಬೆಂಗಳೂರು ದಕ್ಷಿಣ ಭಾಗದಲ್ಲಿ ಶುಕ್ರವಾರ ವಿದ್ಯುತ್‌ ಕಣ್ಣಾಮುಚ್ಚಾಲೆ ಸಾಮಾನ್ಯವಾಗಿತ್ತು .

ಮರಗಳು ಉರುಳಿರುವುದರಿಂದ ಅನೇಕ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಗೆ ಧಕ್ಕೆಯುಂಟಾಗಿದೆ. 8 ವಾಹನಗಳು ಈ ಅಸ್ತವ್ಯಸ್ತತೆಯಲ್ಲಿ ಜಖಂಗೊಂಡಿವೆ. ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ), ನಗರ ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಿದ್ದ ಮರಗಳು ಹಾಗೂ ಮುರಿದ ಕೊಂಬೆಗಳನ್ನು ತೆರವುಗೊಳಿಸುವ, ವಿದ್ಯುತ್‌ ಸರಬರಾಜು ಸುಗಮಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X