ಮರು ಮತದಾನ : ಕಾರಿಗನೂರಲ್ಲಿ ಜಟಾಪಟಿ, ಗಾಳಿಯಲ್ಲಿ ಗುಂಡು
ಮರು ಮತದಾನ : ಕಾರಿಗನೂರಲ್ಲಿ ಜಟಾಪಟಿ, ಗಾಳಿಯಲ್ಲಿ ಗುಂಡು
ರಾಜ್ಯದ 71 ಮತಗಟ್ಟೆಗಳಲ್ಲಿ ಮರು ಮತದಾನ
ಕಾಂಗ್ರೆಸ್ನ ಅಭ್ಯರ್ಥಿ ವಡ್ನಾಳ್ ರಾಜಣ್ಣನವರಿಗೆ ಮತದಾನದ ಬೂತ್ನೊಳಗೆ ಪ್ರವೇಶಿಸಲು ಅವಕಾಶ ನಿರಾಕರಿಸಿದ ಪೊಲೀಸರ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು. ಈ ಧರಣಿಯನ್ನು ವಿರೋಧಿಸಿ ಜಾತ್ಯತೀತ ಜನತಾದಳದ ಕಾರ್ಯಕರ್ತರು ಪ್ರತಿಧರಣಿ ಪ್ರಾರಂಭಿಸಿದಾಗ ಉಂಟಾದ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.
ಗುಂಡು ಹಾರಿಸುವ ಮುನ್ನ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಆನಂತರ ಅಶ್ರುವಾಯು ಷೆಲ್ಗಳನ್ನು ಸಿಡಿಸಲಾಯಿತು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಕಾರಣ ಗುಂಡು ಹಾರಿಸುವುದು ಅನಿವಾರ್ಯವಾಯಿತು. ಈ ಘಟನೆಯಲ್ಲಿ ಯಾವುದೇ ಸಾವುನೋವಿನ ಪ್ರಕರಣ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ 71 ಮತಗಟ್ಟೆಗಳಲ್ಲಿ ಗುರುವಾರ ಮರು ಮತದಾನ ನಡೆದಿದೆ.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications