ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೌಡರ ಪ್ರಣಾಳಿಕೆ : ರೈತರಿಗೆ ಆದ್ಯತೆ, ಬಡವರಿಗೆ ಅಕ್ಕಿ, ಉದ್ಯೋಗ
ಗೌಡರ
ಪ್ರಣಾಳಿಕೆ
:
ರೈತರಿಗೆ
ಆದ್ಯತೆ,
ಬಡವರಿಗೆ
ಅಕ್ಕಿ,
ಉದ್ಯೋಗ
ಬೊಕ್ಕಸ
ಬರಿದಾಯಿತು,
ಅಭಿವೃದ್ಧಿಗ
ಬರ
ಬಂದಿತು-
ಗೌಡರ
ಟೀಕೆ
ಏಪ್ರಿಲ್ 5 ರಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ದೇವೇಗೌಡರು- ಕರ್ನಾಟಕದಲ್ಲಿ ಆಡಳಿತ ನಡೆಸುವ ಅವಕಾಶವನ್ನು ಮಾಡಿಕೊಟ್ಟರೆ ಕೃಷಿಕರಿಗೆ ಸಾಲದ ಮೇಲೆ 5 % ಸಬ್ಸಿಡಿಯನ್ನು ಕೊಡಲಾಗುವುದು ಎಂದು ಘೋಷಿಸಿದರು.
ಪ್ರಣಾಳಿಕೆಯ ಮುಖ್ಯಾಂಶಗಳು :
- ಸರ್ಕಾರದಿಂದ ಕೃಷಿಕರು ತೆಗೆದುಕೊಂಡ ಸಾಲಗಳ ಮೇಲಿನ ಬಡ್ಡಿಯ ದರಗಳನ್ನೂ ಇಳಿಸಲಾಗುವುದು
- ಅತಿ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಾಲ ದೊರಕುವಂತೆ ಮಾಡಲಾಗುವುದು.
- ಎರಡು ವರ್ಷಗಳೊಳಗಾಗಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಿ ನಿಗದಿತ ದರ ದೊರಕುವಂತೆ ಮಾಡಲಾಗುವುದು.
- ಆನ್ಲೈನ್ ಲಾಟರಿಯ ಸಂಪೂರ್ಣ ನಿಷೇಧ.
- ನಿರುದ್ಯೋಗಿಗಳಿಗೆ 5 ಲಕ್ಷ ಉದ್ಯೋಗಾವಕಾಶಗಳು.
- ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಪ್ರತಿ ಕೆ.ಜಿಗೆ ರೂ. 3.50 ರಂತೆ ಅಕ್ಕಿ.
ಕೃಷ್ಣ ಸರ್ಕಾರದ ಆಡಳಿತಾವಧಿಯಲ್ಲೇ ಬಡತನ, ಸಾಲ, ಹಿಂಸೆ, ನೋವು ಸಹಿಸಲಾರದೇ ಸತ್ತ ರೈತರ ಸಂಖ್ಯೆ 470. ಸರ್ಕಾರದ ಬೊಕ್ಕಸವನ್ನು ಬರಿದು ಮಾಡಿದ್ದರೂ, ಈ ಹಣ ಯಾವುದೇ ಒಂದು ಸಾರ್ವಜನಿಕ ಕೆಲಸಕಾರ್ಯಗಳಿಗೆ ಅದು ಬಳಕೆಯಾಗಿಲ್ಲ. ಜನರನ್ನೂ ಬರ ಪೀಡಿತರನ್ನಾಗಿಸಿ, ಸರ್ಕಾರದ ಬೊಕ್ಕಸವನ್ನೂ ಬರಿದು ಮಾಡಲಾಗಿದೆ ಎಂದು ದೇವೇಗೌಡ ದೂರಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004
Comments
Story first published: Saturday, November 24, 2001, 5:30 [IST]