ಎಂಫಸಿಸ್ ಬಿಎಫ್ಎಲ್ ತೆಕ್ಕೆಯಲ್ಲಿ ‘ಕ್ಷೇಮ’ ಟೆಕ್ನಾಲಜೀಸ್ ಆರಾಮ
ಎಂಫಸಿಸ್ ಬಿಎಫ್ಎಲ್ ತೆಕ್ಕೆಯಲ್ಲಿ ‘ಕ್ಷೇಮ’ ಟೆಕ್ನಾಲಜೀಸ್ ಆರಾಮ
21 ಮಿಲಿಯನ್ ಡಾಲರ್ಗಳಿಗೆ ‘ಕ್ಷೇಮ’ ಎಂಫಸಿಸ್ ವಶ
21 ಮಿಲಿಯನ್ ಡಾಲರ್ಗಳ ನಗದು ಮತ್ತು ಸ್ಟಾಕ್ಗಳನ್ನು ನೀಡುವ ಮೂಲಕ ಕ್ಷೇಮ ಟೆಕ್ನಾಲಜಿಸ್ ಕಂಪನಿಯನ್ನು ಎಂಫಸಿಸ್ ತನ್ನ ಸ್ವಾಮಕ್ಕೆ ಒಳಪಡಿಸಿಕೊಂಡಿದೆ. ಅಮೆರಿಕ ಮೂಲದ ಎಂಫಸಿಸ್ ಬೆಂಗಳೂರು ಮೂಲದ ಬಿಎಫ್ಎಲ್ ಸಮೂಹದೊಂದಿಗೆ ಕೈಗೂಡಿಸಿದ ನಂತರ ಸಾಧಿಸಿದ ಬಹುದೊಡ್ಡ ವ್ಯವಹಾರ ಇದಾಗಿದೆ.
6.8 ಮಿಲಿಯನ್ ಡಾಲರ್ಗಳ ನಗದು ಹಾಗೂ ಉಳಿದ ಹಣವನ್ನು ಸ್ಟಾಕ್ಗಳ ರೂಪದಲ್ಲಿ ನೀಡಲಾಗುವುದು. 2004-05ರ ಮೊದಲ ವಿತ್ತ ತ್ರೆೃಮಾಸಿಕ (ಏಪ್ರಿಲ್-ಜೂನ್)ದ ಕೊನೆಯ ವೇಳೆಗೆ ಈ ವಾಣಿಜ್ಯ ಒಪ್ಪಂದ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಒಪ್ಪಂದದಿಂದಾಗಿ ಕ್ಷೇಮ ಟೆಕ್ನಾಲಜೀಸ್ನ ಇಬ್ಬರು ಪಾಲುದಾರರಾದ ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಮತ್ತು ಸಿಂಗಪುರ್ ಕಂಪ್ಯೂಟರ್ ಸಿಸ್ಟಂಸ್, ಕ್ಷೇಮಾಗೆ ದೊರೆತಿರುವ ಮೊತ್ತದಲ್ಲಿ ಕ್ರಮವಾಗಿ ಶೇ.64 ಹಾಗೂ ಶೇ.30 ಈಕ್ವಿಟಿ ಪಡೆಯಲಿದ್ದಾರೆ. ಉಳಿದ ಶೇ.24ರ ಈಕ್ವಿಟಿಯನ್ನು ಕ್ಷೇಮಾದ ಹಿರಿಯ ಆಡಳಿತ ವರ್ಗ ಹಾಗೂ ಆಯ್ದ ನೌಕರರು ಹೊಂದುವರು.
ಎಂಫಸಿಸ್ ಸ್ವಾಮ್ಯಕ್ಕೆ ಸಂಪೂರ್ಣವಾಗಿ ಒಳಪಡುವ ಸಂದರ್ಭದಲ್ಲಿ , ಕ್ಷೇಮಾದ ಮೀಸಲು ನಗದು 600 ಮಿಲಿಯನ್ ರುಪಾಯಿ ಇರಬಹುದೆಂದು ಅಂದಾಜಿಸಲಾಗಿದೆ. ಕ್ಷೇಮಾದ ಮೂಲ ಬಂಡವಾಳ 180 ಮಿಲಿಯನ್ ರುಪಾಯಿಗಳು.
ಎಂಫಸಿಸ್ ಹಾಗೂ ಕ್ಷೇಮ ಟೆಕ್ನಾಲಜಿಸ್ ಕಂಪನಿಗಳ ನಡುವಣ ಒಪ್ಪಂದವನ್ನು ಏ.2ರಂದು ಸುದ್ದಿಗಾರರಿಗೆ ತಿಳಿಸಿದ ಎಂಫಸಿಸ್ನ ಮುಖ್ಯಸ್ಥ ಜೆರ್ರಿ ರಾವ್- ಈ ಒಪ್ಪಂದದಿಂದಾಗಿ ಸ್ಪರ್ಧಾತ್ಮಕ ಜಾಗತಿಕ ಮಾರುಕಟ್ಟೆಯಲ್ಲಿ ಎಂಫಸಿಸ್ನ ಸೇವೆಗಳ ಕಾರ್ಯವ್ಯಾಪ್ತಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಎಂದರು.
ಏಳು ವರ್ಷಗಳ ಅವಧಿಯ ಕ್ಷೇಮ ಟೆಕ್ನಾಲಜಿಸ್ SEI CMM ಹಂತದ 5 ಪ್ರಮಾಣೀಕತ ಸಾಫ್ಟ್ವೇರ್ ಸೇವೆಗಳ ಸಂಸ್ಥೆಯಾಗಿದ್ದು - ಆರೋಗ್ಯ ಸೇವೆಗಳು, ಜೀವ ವಿಜ್ಞಾನ ಮತ್ತು ವಾಣಿಜ್ಯ ಸೇವೆಗಳಲ್ಲಿ ಹೆಸರುಗಳಿಸಿದೆ. ಆಟೊಮೇಷನ್ ಮತ್ತು ಸ್ಥಿರ ತಂತ್ರಜ್ಞಾನದಲ್ಲೂ ಸಂಸ್ಥೆ ಖ್ಯಾತಿ ಸಂಪಾದಿಸಿದೆ.
(ಏಜನ್ಸೀಸ್)
ಮುಖಪುಟ / ಐಟಿ - ಬಿಟಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications