ಕಾಂಗ್ರೆಸ್ ಪೂರ್ಣ ನೆಲಕಚ್ಚುವುದನ್ನು ಬಿಜೆಪಿ ಬಯಸದು -ವೆಂಕಯ್ಯ
ಕಾಂಗ್ರೆಸ್ ಪೂರ್ಣ ನೆಲಕಚ್ಚುವುದನ್ನು ಬಿಜೆಪಿ ಬಯಸದು -ವೆಂಕಯ್ಯ
ಲೋಕಸಭೆಯಲ್ಲಿ ಬಿಜೆಪಿಗೆ 272 ಸ್ಥಾನ, ರಾಜ್ಯದಲ್ಲೂ ಅಧಿಕಾರ ಗ್ರಹಣ
ಜನತೆಯ ಒಲವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪರವಾಗಿದ್ದು , ಚುನಾವಣಾ ಫಲಿತಾಂಶಗಳು ಏಕಪಕ್ಷೀಯವಾಗಿರುತ್ತವೆ. ಬಿಜೆಪಿ ಅರ್ಧಕ್ಕಿಂಥ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ. ಇದರೊಂದಿಗೆ ಕಾಂಗ್ರೆಸ್ ಶೋಚನೀಯ ಪರಿಸ್ಥಿತಿಗೆ ತಲುಪಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಶುಕ್ರವಾರ ಹೇಳಿದರು. ರಾಜ್ಯ ಪ್ರವಾಸದಲ್ಲಿದ್ದ ಅವರು ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯ ಆತ್ಮ ವಿಶ್ವಾಸ ಕೇವಲ ಚುನಾವಣಾ ಸಮೀಕ್ಷೆಗಳಿಗೆ ಅವಲಂಬಿತವಾಗಿಲ್ಲ . ತಮಗೆ ಬಂದಿರುವ ವರ್ತಮಾನದ ಪ್ರಕಾರ ಬಿಜೆಪಿ ಪರವಾಗಿ ಗಾಳಿ ಬೀಸುತ್ತಿದೆ ಎಂದು ವೆಂಕಯ್ಯನಾಯ್ಡು ಹೇಳಿದರು.
ಕಾಂಗ್ರೆಸ್ಸನ್ನು ತೀರಾ ಅಶಕ್ತಗೊಳಿಸಲು ನಾವು ಬಯಸುವುದಿಲ್ಲ . ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆರಡೂ ಗಟ್ಟಿಯಾಗಿರಬೇಕು. ಆದರೂ, ಚುನಾವಣೆ ನಂತರ ಕಾಂಗ್ರೆಸ್ ಹೀನಾಯ ಸ್ಥಿತಿ ಹೊಂದುವುದು ಖಚಿತ ಎಂದು ವೆಂಕಯ್ಯ ನಾಯ್ಡು ಭವಿಷ್ಯ ನುಡಿದರು. ಸಮಾನ ಅಂಶಗಳ ಮೇಲೆ ವಿರೋಧಿ ಒಕ್ಕೂಟವನ್ನು ರೂಪಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಜನತೆಯ ಮುಂದೆ ಪರ್ಯಾಯವನ್ನು ಬಿಂಬಿಸುವಲ್ಲಿ ಕೂಡ ಕಾಂಗ್ರೆಸ್ ವಿಫಲವಾಗಿದೆ ಎಂದು ವೆಂಕಯ್ಯ ಆಪಾದಿಸಿದರು.
‘ಮಹಾಶಕ್ತಿ ಭಾರತ್’ ಎನ್ನುವ ಆಶಯ ಗೀತೆಯನ್ನು ಬಿಜೆಪಿ ಹೊಂದಲಿದೆ. ಅಭಿವೃದ್ಧಿಯ ಅಗತ್ಯಗಳಾದ- ಸ್ವಾವಲಂಬನೆ, ಸ್ವದೇಶಿ ಮತ್ತು ಹೆಮ್ಮೆ, ಇತ್ಯಾದಿ ವಿಷಯಗಳನ್ನು ಈ ಆಶಯ ಗೀತೆ ಜನತೆಗೆ ತಲುಪಿಸಲಿದೆ ಎಂದು ವೆಂಕಯ್ಯ ನಾಯ್ಡು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ ವೆಂಕಯ್ಯ ನಾಯ್ಡು , ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿಗೆ ಅಧಿಕಾರ ಗ್ರಹಣದ ಹೆಬ್ಬಾಗಿಲು ಎನ್ನುವ ತಮ್ಮ ಮಾತನ್ನು ಪುನರುಚ್ಛರಿಸಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications