ಸಿಖ್ರ ‘ಪೋಪ್’ ಖ್ಯಾತಿಯ ಗುರುಚರಣ್ಸಿಂಗ್ ತೋಹ್ರಾ ನಿಧನ
ಸಿಖ್ರ
‘ಪೋಪ್’
ಖ್ಯಾತಿಯ
ಗುರುಚರಣ್ಸಿಂಗ್
ತೋಹ್ರಾ
ನಿಧನ
ಏಪ್ರಿಲ್
2ರಂದು
ಹುಟ್ಟೂರಲ್ಲಿ
ಅಂತ್ಯಸಂಸ್ಕಾರ
1924ರಲ್ಲಿ ಪಂಜಾಬಿನ ಪಾಟಿಯಾಲದಲ್ಲಿ ಜನಿಸಿದ ತೋಹ್ರ ಭಾರತ ವಿಭಜನೆಗೊಳ್ಳುವ ಹಿಂದೆಯೇ ಅಕಾಲಿದಳದ ಸಕ್ರಿಯ ಕಾರ್ಯಕರ್ತರಾಗಿದ್ದರು. ಉತ್ತಮ ಸಂಘಟಕರಾದ ಅವರು ರಾಜಕೀಯವಾಗಿ ಅಧಿಕಾರದತ್ತ ಒಲವು ತೋರಿಸಿರಲಿಲ್ಲ. ಧರ್ಮ ಯುದ್ಧಮೋರ್ಚಾ ಮತ್ತು ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಸಂದರ್ಭಗಳು ಒಳಗೊಂಡಂತೆ ಹಲವು ಬಾರಿ ಧರ್ಮಕ್ಕಾಗಿ, ರೈತರಿಗಾಗಿ, ಹಕ್ಕುಗಳಿಗಾಗಿ, ಸ್ವಾತಂತ್ರಕ್ಕಾಗಿ ಜೈಲುವಾಸ ಅನುಭವಿಸಿದ್ದರು. ಎರಡು ದಶಕಕ್ಕೂ ಹೆಚ್ಚಿನ ಕಾಲ ಎಸ್ಜಿಪಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಏಪ್ರಿಲ್ ಎರಡರಂದು ಸಕಲ ಗೌರವದೊಂದಿಗೆ ತೋಹ್ರಾ ಅಂತಿಮ ಸಂಸ್ಕಾರ ಕ್ರಿಯೆಗಳನ್ನು ಅವರ ಹುಟ್ಟೂರಾದ ಪಾಟಿಯಾಲದ ತೊಹ್ರಾದಲ್ಲಿ ನೆರವೇರಿಸಲಾಗುವುದು. ನವದೆಹಲಿಯಿಂದ ಅಕಾಲಿದಳ ಪ್ರಧಾನ ಕಾರ್ಯದರ್ಶಿ ಸುಖಬೀರ್ ಸಿಂಗ್ ಬಾದಲ್ ಮತ್ತು ಅವರ ಅಳಿಯ ಪಾರ್ಥೀವ ಶರೀರವನ್ನು ಕರೆತರಲಿದ್ದಾರೆ.ಅಕಾಲಿ ದಳದ ಅಧ್ಯಕ್ಷ ಪ್ರಕಾಶ್ಸಿಂಗ್ ಬಾದಲ್ ಸ್ವೀಕರಿಸಲಿದ್ದಾರೆ ಎಂದು ಅಕಾಲಿದಳದ ಕಾರ್ಯದರ್ಶಿ ಡಿ.ಎಸ್.ಚೀಮಾ ಹೇಳಿದರು. ದೇಶದಾದ್ಯಂತ ಹಲವು ಧಾರ್ಮಿಕ ಮತ್ತು ರಾಜಕೀಯ ನಾಯಕರುಗಳು ತೋಹ್ರಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು