Get Updates
Get notified of breaking news, exclusive insights, and must-see stories!

ಕಾಳ್ಗಿಚ್ಚು , ನಾಗರಹೊಳೆ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ

ಕಾಳ್ಗಿಚ್ಚು , ನಾಗರಹೊಳೆ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ
ಮಾರ್ಚ್‌ 1ರಿಂದಲೇ ನಿಷೇಧ ಜಾರಿ, ಬೆಂಕಿ ಹತೋಟಿಗೆ ಸಮರ ಸಿದ್ಧತೆ

ಮೈಸೂರು : ಕಾಳ್ಗಿಚ್ಚಿನ ಭೀತಿಯಿಂದಾಗಿ ನಾಗರಹೊಳೆ ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ಮುಂಜಾಗ್ರತಾ ಕ್ರಮವಾಗಿ ನಿಷೇಧಿಸಲಾಗಿದೆ.

ನಾಗರಹೊಳೆ ಉದ್ಯಾನಕ್ಕೆ ಸಾರ್ವನಿಕರ ಪ್ರವೇಶವನ್ನು ಮಾರ್ಚ 1ರಿಂದಲೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. ನಾಗರಹೊಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಾಳ್ಗಿಚ್ಚು ಹತೋಟಿಗೆ ಬರುವವರೆಗೂ, ಅನಿರ್ದಿಷ್ಟ ಕಾಲ ಈ ನಿಷೇಧ ಮುಂದುವರಿಯಲಿದೆ ಎಂದು ಪ್ರಾಜೆಕ್ಟ್‌ ಟೈಗರ್‌ನ ಕ್ಷೇತ್ರ ನಿರ್ದೇಶಕರು ತಿಳಿಸಿದ್ದಾರೆ.

ಅರಣ್ಯ ಸಿಬ್ಬಂದಿ ಹಾಗೂ ಲಭ್ಯವಿರುವ ಎಲ್ಲ ವಾಹನಗಳನ್ನೂ ಬೆಂಕಿ ಹತೋಟಿಗೆ ತರಲು ಬಳಸಿಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಸಫಾರಿ ಹಾಗೂ ವಸತಿಗೃಹಗಳಲ್ಲಿ ಸಾರ್ವಜನಿಕರು ಉಳಿದುಕೊಳ್ಳುವುದನ್ನು ನಿಷೇಧಿಸಲಾಗಿದೆ.

ಬೇಸಗೆಯಲ್ಲಿ ಕಾಳ್ಗಿಚ್ಚು ಸ್ವಾಭಾವಿಕವಾದರೂ, ಈ ಬಾರಿ ಕಾಳ್ಗಿಚ್ಚಿನ ಬೇಗೆ ತೀವ್ರತರವಾಗಿದೆ. ಕಾಳ್ಗಿಚ್ಚನ್ನು ಹತೋಟಿಗೆ ತರಲು ಅರಣ್ಯ ಸಿಬ್ಬಂದಿ ಯಮ ಸಾಹಸ ಪಡುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+