Get Updates
Get notified of breaking news, exclusive insights, and must-see stories!

ಆಹಾ ! ಹವ್ಯಕ ಪಾಕೋತ್ಸವವಿದು...

ಆಹಾ ! ಹವ್ಯಕ ಪಾಕೋತ್ಸವವಿದು...
ಬೆಂಗಳೂರಿನಲ್ಲಿ ಫೆ.28 ಮತ್ತು 29 ರಂದು ಹವ್ಯಕ ಪಾಕೋತ್ಸವ. ಮಲೆನಾಡ ಮಕ್ಕಳ ಆಹಾರ ವೈವಿಧ್ಯದ ಪ್ರದರ್ಶನ ಮಾತ್ರವಲ್ಲದೆ ಹತ್ತಾರು ಮನರಂಜನೆ- ಸ್ಪರ್ಧೆಗಳೂ ಇಲ್ಲುಂಟು. ಊಟಪ್ರಿಯರಿಗೆ ಸ್ವಾಗತವು.

  • ಶ್ರೀಕಾಂತ ಹೆಗಡೆ, ಬೆಂಗಳೂರು
ಬೆಂಗಳೂರು : ‘ಆಹಾರಾರ್ಥ ಕರ್ಮ ಕುರ್ಯಾತ್‌...’ ಎಂಬ ವೇದೋಕ್ತಿಯಂತೆ ಆಹಾರಕ್ಕಾಗಿ ಜೀವದಲ್ಲಿ ನಿಂದ್ಯವಲ್ಲದ ಕೆಲಸವನ್ನು ಮಾಡಬೇಕು, ಪ್ರಾಣ ರಕ್ಷಣೆಗಾಗಿ ಆಹಾರ ಸೇವಿಸಬೇಕು, ತತ್ವಗಳ ತಿಳುವಳಿಕೆಗಾಗಿ ಪ್ರಾಣ ರಕ್ಷಿಸಬೇಕು, ಪುನಃ ದುಃ ಖಿಯಾಗದಿರಲು ತತ್ವ ಜಿಜ್ಞಾಸೆ ಬೇಕು ಎಂಬ ತಾತ್ವಿಕ ಹಿನ್ನೆಲೆಯಲ್ಲಿ ಅಗಣಿತ ತಲೆಮಾರುಗಳಿಂದ ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದನ್ನರಿತು, ಶಾಸ್ತ್ರೀಯವಾದ ಸಾತ್ವಿಕ ಭೋಜನವನ್ನು ಹೊಂದಿ ಶ್ರೇಯಸ್ಕರ ಜೀವನವನ್ನು ಭೋಜನ ಕೋವಿದರು ನಡೆಸುತ್ತಿದ್ದಾರೆ. ಇಂಥಹ ಭೋಜನ ಕಲಾವಿದರಲ್ಲಿ ಹವ್ಯಕರಿಗೊಂದು ವಿಶಿಷ್ಟ ಸ್ಥಾನವಿದೆ.

ಹವ್ಯಕ ಆಹಾರ ಮತ್ತು ಆಹಾರ ಕ್ರಮದಲ್ಲಿ ಆಯುರ್ವೇದೀಯ ಪದ್ಧತಿಯಿದೆ. ಇದು ಯಾವ ಶಾಸ್ರ್ತಾಧ್ಯಯನವಿಲ್ಲದೆ ಮನೆಯ ಪಾಕಾಧ್ಯಕ್ಷರಾದ ಹಿರಿಯರಿಂದ ಕಿರಿಯರಿಗೆ ತಲೆತಲಾಂತರಗಳಿಂದ ಹರಿದು ಬರುತ್ತಿದೆ. ನಗರ ಜೀವನಕ್ಕೆ ಒಗ್ಗಿಕೊಂಡಿದ್ದರೂ ಇಲ್ಲಿಯೂ ತಮ್ಮ ಆಹಾರ ಸೇವನೆಯ ಕ್ರಮ, ಸಮಯ, ಪರಿಮಾಣಗಳನ್ನು ಹವ್ಯಕರು ಉಳಿಸಿಕೊಂಡು ಬಂದಿದ್ದಾರೆ. ಇಂತಹ ಒಂದು ವೈಶಿಷ್ಟ್ಯ ಭಕ್ಷ್ಯ ಭೋಜ್ಯಗಳ ರುಚಿ ಮತ್ತು ಮಹತ್ವವನ್ನು ಬೆಂಗಳೂರಿನ ಸಸ್ಯಾಹಾರಿ ಜನತೆಗೆ ತೋರಿಸಿ ಕೊಡುವ ಉದ್ದೇಶದಿಂದ ಫೆಬ್ರವರಿ 28 ಮತ್ತು 29 ರಂದು ಬೆಂಗಳೂರಿನ ಗಿರಿನಗರದಲ್ಲಿ ‘ಹವ್ಯಕ ಪಾಕೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇದೊಂದು ಸಂಪೂರ್ಣ ಸಸ್ಯಾಹಾರದ, ಮಲೆನಾಡು ಕರಾವಳಿಯ ಹವ್ಯಕರ ಆಹಾರ ಮೇಳ. ಆಹಾರ ಪ್ರದರ್ಶನ, ಸ್ಪರ್ಧೆ, ಊಟ, ಅಂಗಡಿ-ಮುಂಗಟ್ಟು, ಸಭೆ, ಮನರಂಜನೆಗಳು ಈ ಮೇಳದಲ್ಲಿವೆ.

ಇಲ್ಲಿನ ಖಾದ್ಯ ವೈವಿಧ್ಯಗಳ ಹಲವು ಹೆಸರುಗಳೇ ವಿಶಿಷ್ಟವಾದವು. ಸುಕ್ಕಿನುಂಡೆ, ಗೆಣಸಲೆ, ವಡಪೆ, ಪತ್ರೊಡೆ, ಕೊಟ್ಟೆಕಡುಬು, ಕರ್ಜಿಕಾಯಿ, ಅತ್ರಾಸ, ಮನೋಹರ, ಖಟ್ಟೆ, ತೊಡದೇವು, ನೀರ್ದೋಸೆ, ಯಲವರಿಗೆ, ಉರಗ ಸಂಬಾರ ಸೊಪ್ಪುಗಳ ತಂಬಳಿಗಳು.... ಇತ್ಯಾದಿ.

ನೂರಾರು ಬಗೆಯ ಔಷಧೀಯ ಗುಣಗಳ ವನಸ್ಪತಿಯ ತಿಂಡಿ-ತಿನಿಸು, ಪಾನೀಯಗಳು ಬಾಯಲ್ಲಿ ನೀರೂರಿಸಲಿವೆ. ಜೊತೆಗೆ ಅವುಗಳ ಸೇವನೆಯ ಕಾಲ ಹಾಗೂ ಆರೋಗ್ಯಕರ ಗುಣಗಳು ಇತ್ಯಾದಿ ವಿವರಗಳೂ ಮೇಳದಲ್ಲಿ ಸಿಗಲಿದೆ.

ಈ ಭೂರಿ ಭೋಜನ ಕೂಟದ ರುಚಿಯನ್ನು ಮನರಂಜನೀಯ ಹಾಸ್ಯಲಹರಿಗಳು, ಯಕ್ಷಗಾನ, ಹಾಡು ನೃತ್ಯಗಳು ಹೆಚ್ಚಿಸಲಿವೆ. ಇದರೊಂದಿಗೆ ಕರಕುಶಲ ಕಲಾಕೃತಿಗಳ, ಕರಕುಶಲ ತಿನಿಸುಗಳ, ಸಿದ್ಧಾಹಾರಗಳ, ಅಡಿಗೆ ಪರಿಕರಗಳ, ಗೃಹೋಪಕರಣಗಳ, ಆಯುರ್ವೇದೀಯ ಔಷಧಿಗಳ ನೂರಾರು ಮಳಿಗೆಗಳು ಕೈಬೀಸಿ ಕರೆಯಲಿವೆ.

ಫೆಬ್ರವರಿ 28ರಂದು ಸಂಜೆ 4 ಗಂಟೆಗೆ ಈ ಉತ್ಸವ ಉದ್ಘಾಟನೆಗೊಳ್ಳಲಿದೆ. ನಂತರ ಹವ್ಯಕರಿಗಾಗಿ ತಿಂಡಿ-ತಿನಿಸು ತಯಾರಿಯ ಸ್ಪರ್ಧೆ, ಪಾಯಸ ಕುಡಿಯುವ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಫೆಬ್ರವರಿ 29ರಂದು ವಿವಿಧ ವಸ್ತುಗಳ ಅಂಗಡಿ-ಮುಂಗಟ್ಟುಗಳು, ತಿನ್ನುವ, ಉಣ್ಣುವ, ಕುಡಿಯುವ, ಆಹಾರ ಪ್ರದರ್ಶನ, ಮಾರಾಟ, ಸಭೆ, ಚಿಂತನೆ, ನೃತ್ಯ ಗಾಯನ, ಯಕ್ಷಗಾನಾದಿ ಕಾರ್ಯಕ್ರಮಗಳು ಭಾನುವಾರದ ಬಿಡುವನ್ನು ಅರ್ಥಪೂರ್ಣ ಮಾಡುವ ಅವಕಾಶ ನೀಡಲಿದೆ.

ಒಟ್ಟಾರೆ ನಗರದ ಸುಸಂಸ್ಕೃತರಿಗೆ, ಶಾಖಾಹಾರ ಭೋಜನ ಪ್ರಿಯರಿಗೆ, ಸಹೃದಯರಿಗೆ ಇದೊಂದು ಅಪರೂಪದ ಅವಕಾಶ. ಬೆಂಗಳೂರು ಪ್ರಾಂತ ಪ್ರತಿನಿಧಿ ಪರಿಷತ್‌ ಈ ಆಹಾರ ಮೇಳ ಆಯೋಜಿಸಿದೆ.

ಹೆಚ್ಚಿನ ಮಾಹಿತಿ ಮತ್ತು ಸಂಪರ್ಕಕ್ಕಾಗಿ:
ಶ್ರೀ ರಾಮಾಶ್ರಮ, ಗಿರಿನಗರ, ದೂರವಾಣಿ: 6721510, 9448061678

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+