ಆಹಾ ! ಹವ್ಯಕ ಪಾಕೋತ್ಸವವಿದು...
ಆಹಾ ! ಹವ್ಯಕ ಪಾಕೋತ್ಸವವಿದು...
ಬೆಂಗಳೂರಿನಲ್ಲಿ ಫೆ.28 ಮತ್ತು 29 ರಂದು ಹವ್ಯಕ ಪಾಕೋತ್ಸವ. ಮಲೆನಾಡ ಮಕ್ಕಳ ಆಹಾರ ವೈವಿಧ್ಯದ ಪ್ರದರ್ಶನ ಮಾತ್ರವಲ್ಲದೆ ಹತ್ತಾರು ಮನರಂಜನೆ- ಸ್ಪರ್ಧೆಗಳೂ ಇಲ್ಲುಂಟು. ಊಟಪ್ರಿಯರಿಗೆ ಸ್ವಾಗತವು.
- ಶ್ರೀಕಾಂತ ಹೆಗಡೆ, ಬೆಂಗಳೂರು
ಹವ್ಯಕ ಆಹಾರ ಮತ್ತು ಆಹಾರ ಕ್ರಮದಲ್ಲಿ ಆಯುರ್ವೇದೀಯ ಪದ್ಧತಿಯಿದೆ. ಇದು ಯಾವ ಶಾಸ್ರ್ತಾಧ್ಯಯನವಿಲ್ಲದೆ ಮನೆಯ ಪಾಕಾಧ್ಯಕ್ಷರಾದ ಹಿರಿಯರಿಂದ ಕಿರಿಯರಿಗೆ ತಲೆತಲಾಂತರಗಳಿಂದ ಹರಿದು ಬರುತ್ತಿದೆ. ನಗರ ಜೀವನಕ್ಕೆ ಒಗ್ಗಿಕೊಂಡಿದ್ದರೂ ಇಲ್ಲಿಯೂ ತಮ್ಮ ಆಹಾರ ಸೇವನೆಯ ಕ್ರಮ, ಸಮಯ, ಪರಿಮಾಣಗಳನ್ನು ಹವ್ಯಕರು ಉಳಿಸಿಕೊಂಡು ಬಂದಿದ್ದಾರೆ. ಇಂತಹ ಒಂದು ವೈಶಿಷ್ಟ್ಯ ಭಕ್ಷ್ಯ ಭೋಜ್ಯಗಳ ರುಚಿ ಮತ್ತು ಮಹತ್ವವನ್ನು ಬೆಂಗಳೂರಿನ ಸಸ್ಯಾಹಾರಿ ಜನತೆಗೆ ತೋರಿಸಿ ಕೊಡುವ ಉದ್ದೇಶದಿಂದ ಫೆಬ್ರವರಿ 28 ಮತ್ತು 29 ರಂದು ಬೆಂಗಳೂರಿನ ಗಿರಿನಗರದಲ್ಲಿ ‘ಹವ್ಯಕ ಪಾಕೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದೊಂದು ಸಂಪೂರ್ಣ ಸಸ್ಯಾಹಾರದ, ಮಲೆನಾಡು ಕರಾವಳಿಯ ಹವ್ಯಕರ ಆಹಾರ ಮೇಳ. ಆಹಾರ ಪ್ರದರ್ಶನ, ಸ್ಪರ್ಧೆ, ಊಟ, ಅಂಗಡಿ-ಮುಂಗಟ್ಟು, ಸಭೆ, ಮನರಂಜನೆಗಳು ಈ ಮೇಳದಲ್ಲಿವೆ.
ಇಲ್ಲಿನ ಖಾದ್ಯ ವೈವಿಧ್ಯಗಳ ಹಲವು ಹೆಸರುಗಳೇ ವಿಶಿಷ್ಟವಾದವು. ಸುಕ್ಕಿನುಂಡೆ, ಗೆಣಸಲೆ, ವಡಪೆ, ಪತ್ರೊಡೆ, ಕೊಟ್ಟೆಕಡುಬು, ಕರ್ಜಿಕಾಯಿ, ಅತ್ರಾಸ, ಮನೋಹರ, ಖಟ್ಟೆ, ತೊಡದೇವು, ನೀರ್ದೋಸೆ, ಯಲವರಿಗೆ, ಉರಗ ಸಂಬಾರ ಸೊಪ್ಪುಗಳ ತಂಬಳಿಗಳು.... ಇತ್ಯಾದಿ.
ನೂರಾರು ಬಗೆಯ ಔಷಧೀಯ ಗುಣಗಳ ವನಸ್ಪತಿಯ ತಿಂಡಿ-ತಿನಿಸು, ಪಾನೀಯಗಳು ಬಾಯಲ್ಲಿ ನೀರೂರಿಸಲಿವೆ. ಜೊತೆಗೆ ಅವುಗಳ ಸೇವನೆಯ ಕಾಲ ಹಾಗೂ ಆರೋಗ್ಯಕರ ಗುಣಗಳು ಇತ್ಯಾದಿ ವಿವರಗಳೂ ಮೇಳದಲ್ಲಿ ಸಿಗಲಿದೆ.
ಈ ಭೂರಿ ಭೋಜನ ಕೂಟದ ರುಚಿಯನ್ನು ಮನರಂಜನೀಯ ಹಾಸ್ಯಲಹರಿಗಳು, ಯಕ್ಷಗಾನ, ಹಾಡು ನೃತ್ಯಗಳು ಹೆಚ್ಚಿಸಲಿವೆ. ಇದರೊಂದಿಗೆ ಕರಕುಶಲ ಕಲಾಕೃತಿಗಳ, ಕರಕುಶಲ ತಿನಿಸುಗಳ, ಸಿದ್ಧಾಹಾರಗಳ, ಅಡಿಗೆ ಪರಿಕರಗಳ, ಗೃಹೋಪಕರಣಗಳ, ಆಯುರ್ವೇದೀಯ ಔಷಧಿಗಳ ನೂರಾರು ಮಳಿಗೆಗಳು ಕೈಬೀಸಿ ಕರೆಯಲಿವೆ.
ಫೆಬ್ರವರಿ 28ರಂದು ಸಂಜೆ 4 ಗಂಟೆಗೆ ಈ ಉತ್ಸವ ಉದ್ಘಾಟನೆಗೊಳ್ಳಲಿದೆ. ನಂತರ ಹವ್ಯಕರಿಗಾಗಿ ತಿಂಡಿ-ತಿನಿಸು ತಯಾರಿಯ ಸ್ಪರ್ಧೆ, ಪಾಯಸ ಕುಡಿಯುವ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆಬ್ರವರಿ 29ರಂದು ವಿವಿಧ ವಸ್ತುಗಳ ಅಂಗಡಿ-ಮುಂಗಟ್ಟುಗಳು, ತಿನ್ನುವ, ಉಣ್ಣುವ, ಕುಡಿಯುವ, ಆಹಾರ ಪ್ರದರ್ಶನ, ಮಾರಾಟ, ಸಭೆ, ಚಿಂತನೆ, ನೃತ್ಯ ಗಾಯನ, ಯಕ್ಷಗಾನಾದಿ ಕಾರ್ಯಕ್ರಮಗಳು ಭಾನುವಾರದ ಬಿಡುವನ್ನು ಅರ್ಥಪೂರ್ಣ ಮಾಡುವ ಅವಕಾಶ ನೀಡಲಿದೆ.
ಒಟ್ಟಾರೆ ನಗರದ ಸುಸಂಸ್ಕೃತರಿಗೆ, ಶಾಖಾಹಾರ ಭೋಜನ ಪ್ರಿಯರಿಗೆ, ಸಹೃದಯರಿಗೆ ಇದೊಂದು ಅಪರೂಪದ ಅವಕಾಶ. ಬೆಂಗಳೂರು ಪ್ರಾಂತ ಪ್ರತಿನಿಧಿ ಪರಿಷತ್ ಈ ಆಹಾರ ಮೇಳ ಆಯೋಜಿಸಿದೆ.
ಹೆಚ್ಚಿನ ಮಾಹಿತಿ ಮತ್ತು ಸಂಪರ್ಕಕ್ಕಾಗಿ:
ಶ್ರೀ ರಾಮಾಶ್ರಮ, ಗಿರಿನಗರ, ದೂರವಾಣಿ: 6721510, 9448061678
ಮುಖಪುಟ / ವಾರ್ತೆಗಳು
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications