ಬೆಂಗಳೂರು ಐಟಿ ಜಗತ್ತು : ಆತ್ಮಹತ್ಯೆ ಹೆಚ್ಚಳ, ಸೋಡಾಚೀಟಿ ಅಗ್ಗ
ಬೆಂಗಳೂರು
ಐಟಿ
ಜಗತ್ತು
:
ಆತ್ಮಹತ್ಯೆ
ಹೆಚ್ಚಳ,
ಸೋಡಾಚೀಟಿ
ಅಗ್ಗ
ಹಣ
ಗಳಿಕೆ
ಹಾಗೂ
ವೃತ್ತಿಯ
ಒತ್ತಡದಲ್ಲಿ
ಖಾಸಗಿ
ಜೀವನದ
ಬಳಲಿಕೆ
ಮೇಲೆ ಥಳಕು ಒಳಗೆ ಹುಳುಕು ಅನ್ನುವ ಮಾತಿಗೆ ಅನ್ವಯವಾಗುವಂತಿದೆ ಐಟಿ ಜಗತ್ತಿನ ಮಂದಿಯ ಬದುಕು. ಸಾಫ್ಟ್ವೇರ್ ವೃತ್ತಿಪರರಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿದೆ ಹಾಗೂ ಮದುವೆಯಲ್ಲಿನ ಬಿರುಕುಗಳು ಹೆಚ್ಚಾಗುತ್ತಿವೆ ಎನ್ನುತ್ತಿದೆ ಇತ್ತೀಚಿನ ಒಂದು ಅಧ್ಯಯನ. ವೆಲ್ಲೂರಿನ ಕ್ರಿಶ್ಚಿಯನ್ ಕೌನ್ಸೆಲಿಂಗ್ ಸೆಂಟರ್ನ ನಿರ್ದೇಶಕ ಬಿ.ಜೆ.ಪ್ರಶಾಂತಂ ಈ ಸಮೀಕ್ಷೆ ನಡೆಸಿದ್ದಾರೆ.
ಪ್ರಶಾಂತಂ ಅವರ ಸಮೀಕ್ಷೆಯ ಪ್ರಕಾರ , ಬೆಂಗಳೂರಿನಲ್ಲಿ ಕಳೆದ ವರ್ಷ 2000 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಶೇ. 70 ಪ್ರಕರಣಗಳು ಸಾಫ್ಟ್ವೇರ್ ಇಂಜಿನಿಯರ್ ಹಾಗೂ ಕಾಲ್ಸೆಂಟರ್ ನೌಕರರಿಗೆ ಸಂಬಂಧಪಟ್ಟಿವೆ. ಆತ್ಮಹತ್ಯೆ ಮಾಡಿಕೊಂಡವರೆಲ್ಲರೂ 35 ವರ್ಷಕ್ಕಿಂತ ಕೆಳಗಿನವರು. ದಿಗಿಲು ಹುಟ್ಟಿಸುವ ಇನ್ನೊಂದು ಅಂಶವೆಂದರೆ, ಈ ಶೇ. 70 ಮಂದಿ ಸಾಯುವ ಮೊದಲು ಕನಿಷ್ಠ ಪಕ್ಷ 10 ಬಾರಿಯಾದರೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಇದಕ್ಕೆಲ್ಲಾ ಕಾರಣವಾದರೂ ಏನು ? ವೃತ್ತಿಪರರಿಗೆ ಸಾಧ್ಯವಾಗುವ ಅಸಾಮಾನ್ಯ ಹಣ ಗಳಿಕೆ ಮತ್ತು ದೊರೆಯುವ ವಿಫುಲ ಅವಕಾಶಗಳು ಅವರ ಖಾಸಗಿ ಜೀವನವನ್ನು ಮರೆಯುವಂತೆ ಮಾಡುತ್ತಿವೆಯೇ ? ಹೌದು ಎನ್ನುತ್ತಾರೆ ಕೆಲವು ವರ್ಷದಿಂದ ಅಮೇರಿಕಾದ ಮೈಕ್ರೋಸಾಫ್ಟ್ ನೌಕರರಿಗೆ ಕೌನ್ಸೆಲಿಂಗ್ ಮಾಡುತ್ತಿರುವ ಪ್ರಶಾಂತಂ .
ಇನ್ನು ವಿಚ್ಛೇದನದ ವಿಷಯ.
ಕಳೆದ ಮೂರು ತಿಂಗಳಲ್ಲಿ 100 ಮಂದಿ ಐಟಿ ಜಾಣರು ವಿಚ್ಛೇದನ ಪಡೆದಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ವಿಚ್ಛೇದನಗಳ ಸಂಖ್ಯೆ ಶೇ.20 ರಷ್ಟು ಹೆಚ್ಚಲಿದೆ ಎನ್ನುತ್ತಾರೆ ಪ್ರಶಾಂತಂ.
ಬೆಂಗಳೂರಲ್ಲಿ ಬದಲಾವಣೆ ಎಂಬುದು ಅತಿವೇಗದಲ್ಲಿದೆ. ಈ ವೇಗದ ಬದುಕಿನಲ್ಲಿ ಒತ್ತಡ ಸಾಮಾನ್ಯ. ಕೌಟುಂಬಿಕ ನೆಮ್ಮದಿ ಹಾಗೂ ಕಾರ್ಯ ನಿರತ ಪರಿಸರದಲ್ಲಿ ಸ್ನೇಹಪರ ವಾತಾವರಣ ಇಲ್ಲದಿದ್ದರೆ ವ್ಯಕ್ತಿ ಇನ್ನಷ್ಟು ಕುಸಿಯುತ್ತಾನೆ ಎಂದು ಪ್ರಶಾಂತಂ ಹೇಳುತ್ತಾರೆ.
ಬೆಂಗಳೂರನ್ನು ಸಿಂಗಾಪೂರ್ ಆಗಿಸುವವರು ಈ ಅಂಶಗಳನ್ನೂ ಗಮನಿಸಬೇಕು.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ