ಬೆಂಗಳೂರು ಐಟಿ ಜಗತ್ತು : ಆತ್ಮಹತ್ಯೆ ಹೆಚ್ಚಳ, ಸೋಡಾಚೀಟಿ ಅಗ್ಗ
ಬೆಂಗಳೂರು ಐಟಿ ಜಗತ್ತು : ಆತ್ಮಹತ್ಯೆ ಹೆಚ್ಚಳ, ಸೋಡಾಚೀಟಿ ಅಗ್ಗ
ಹಣ ಗಳಿಕೆ ಹಾಗೂ ವೃತ್ತಿಯ ಒತ್ತಡದಲ್ಲಿ ಖಾಸಗಿ ಜೀವನದ ಬಳಲಿಕೆ
ಮೇಲೆ ಥಳಕು ಒಳಗೆ ಹುಳುಕು ಅನ್ನುವ ಮಾತಿಗೆ ಅನ್ವಯವಾಗುವಂತಿದೆ ಐಟಿ ಜಗತ್ತಿನ ಮಂದಿಯ ಬದುಕು. ಸಾಫ್ಟ್ವೇರ್ ವೃತ್ತಿಪರರಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿದೆ ಹಾಗೂ ಮದುವೆಯಲ್ಲಿನ ಬಿರುಕುಗಳು ಹೆಚ್ಚಾಗುತ್ತಿವೆ ಎನ್ನುತ್ತಿದೆ ಇತ್ತೀಚಿನ ಒಂದು ಅಧ್ಯಯನ. ವೆಲ್ಲೂರಿನ ಕ್ರಿಶ್ಚಿಯನ್ ಕೌನ್ಸೆಲಿಂಗ್ ಸೆಂಟರ್ನ ನಿರ್ದೇಶಕ ಬಿ.ಜೆ.ಪ್ರಶಾಂತಂ ಈ ಸಮೀಕ್ಷೆ ನಡೆಸಿದ್ದಾರೆ.
ಪ್ರಶಾಂತಂ ಅವರ ಸಮೀಕ್ಷೆಯ ಪ್ರಕಾರ , ಬೆಂಗಳೂರಿನಲ್ಲಿ ಕಳೆದ ವರ್ಷ 2000 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಶೇ. 70 ಪ್ರಕರಣಗಳು ಸಾಫ್ಟ್ವೇರ್ ಇಂಜಿನಿಯರ್ ಹಾಗೂ ಕಾಲ್ಸೆಂಟರ್ ನೌಕರರಿಗೆ ಸಂಬಂಧಪಟ್ಟಿವೆ. ಆತ್ಮಹತ್ಯೆ ಮಾಡಿಕೊಂಡವರೆಲ್ಲರೂ 35 ವರ್ಷಕ್ಕಿಂತ ಕೆಳಗಿನವರು. ದಿಗಿಲು ಹುಟ್ಟಿಸುವ ಇನ್ನೊಂದು ಅಂಶವೆಂದರೆ, ಈ ಶೇ. 70 ಮಂದಿ ಸಾಯುವ ಮೊದಲು ಕನಿಷ್ಠ ಪಕ್ಷ 10 ಬಾರಿಯಾದರೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಇದಕ್ಕೆಲ್ಲಾ ಕಾರಣವಾದರೂ ಏನು ? ವೃತ್ತಿಪರರಿಗೆ ಸಾಧ್ಯವಾಗುವ ಅಸಾಮಾನ್ಯ ಹಣ ಗಳಿಕೆ ಮತ್ತು ದೊರೆಯುವ ವಿಫುಲ ಅವಕಾಶಗಳು ಅವರ ಖಾಸಗಿ ಜೀವನವನ್ನು ಮರೆಯುವಂತೆ ಮಾಡುತ್ತಿವೆಯೇ ? ಹೌದು ಎನ್ನುತ್ತಾರೆ ಕೆಲವು ವರ್ಷದಿಂದ ಅಮೇರಿಕಾದ ಮೈಕ್ರೋಸಾಫ್ಟ್ ನೌಕರರಿಗೆ ಕೌನ್ಸೆಲಿಂಗ್ ಮಾಡುತ್ತಿರುವ ಪ್ರಶಾಂತಂ .
ಇನ್ನು ವಿಚ್ಛೇದನದ ವಿಷಯ.
ಕಳೆದ ಮೂರು ತಿಂಗಳಲ್ಲಿ 100 ಮಂದಿ ಐಟಿ ಜಾಣರು ವಿಚ್ಛೇದನ ಪಡೆದಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ವಿಚ್ಛೇದನಗಳ ಸಂಖ್ಯೆ ಶೇ.20 ರಷ್ಟು ಹೆಚ್ಚಲಿದೆ ಎನ್ನುತ್ತಾರೆ ಪ್ರಶಾಂತಂ.
ಬೆಂಗಳೂರಲ್ಲಿ ಬದಲಾವಣೆ ಎಂಬುದು ಅತಿವೇಗದಲ್ಲಿದೆ. ಈ ವೇಗದ ಬದುಕಿನಲ್ಲಿ ಒತ್ತಡ ಸಾಮಾನ್ಯ. ಕೌಟುಂಬಿಕ ನೆಮ್ಮದಿ ಹಾಗೂ ಕಾರ್ಯ ನಿರತ ಪರಿಸರದಲ್ಲಿ ಸ್ನೇಹಪರ ವಾತಾವರಣ ಇಲ್ಲದಿದ್ದರೆ ವ್ಯಕ್ತಿ ಇನ್ನಷ್ಟು ಕುಸಿಯುತ್ತಾನೆ ಎಂದು ಪ್ರಶಾಂತಂ ಹೇಳುತ್ತಾರೆ.
ಬೆಂಗಳೂರನ್ನು ಸಿಂಗಾಪೂರ್ ಆಗಿಸುವವರು ಈ ಅಂಶಗಳನ್ನೂ ಗಮನಿಸಬೇಕು.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications