ದೇಶದ ಎಲ್ಲೆಡೆ ಇರುಳೆಲ್ಲ ಹರ ಹರಾ! ಶಿವರಾತ್ರಿಯ ಸಂಭ್ರಮ
ದೇಶದ ಎಲ್ಲೆಡೆ ಇರುಳೆಲ್ಲ ಹರ ಹರಾ! ಶಿವರಾತ್ರಿಯ ಸಂಭ್ರಮ
ಶಿವ ಶಿವ ಎಂದರೆ, ಭಯವಿಲ್ಲ ಶಿವ ನಾಮಕೆ ಸಾಟಿ ಸಾಟಿಲ್ಲ....
ನಗರದೆಲ್ಲೆಡೆ ಸಂತೃಪ್ತನಾದ ಹರ...
ಬಸವನಗುಡಿಯ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಹೂವಿನ ವಿಶೇಷ ಪೂಜೆ. ಬಸವನಗುಡಿಯ ದೊಡ್ಡ ಗಣೇಶನಿಗೆ ಬೆಣ್ಣೆ ಅಲಂಕಾರ. ದರ್ಶನಕ್ಕೆ ಬೀದಿ ಬದಿಯಲ್ಲೂ ನೆರೆದಿದ್ದ ಸಾಲು.ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯದ ಬಳಿ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡಲು ಜನ ಸಾಲು ಸಾಲು ಬಂದರು. ಹಾಲೆರೆದು ಹರನ ಆಕಾಂಕ್ಷೆಗಳನ್ನು ಈಡೇರಿಸುವಂತೆ ಬೇಡಿಕೊಂಡರು.
ಯಶವಂತಪುರದ ಗಾಯತ್ರಿ ದೇವಾಲಯದಲ್ಲಿ ಪಂಚಕೋಟಿ ಬಿಲ್ವಾರ್ಚನೆಯಿತ್ತು. ಹಾಗೂ ಸಂಗೀತ ಸಂಜೆ, ಭರತನಾಟ್ಯ, ಭಜನೆಯ ಮೂಲಕ ಭಕ್ತಾದಿಗಳು ಜಾಗರಣೆ ಮಾಡಿದರು.ಕೋರಮಂಗಲದಲ್ಲಿರುವ ಪ್ರಜಾಪಿತ ಈಶ್ವರೀಯ ಮಹಾವಿದ್ಯಾಲಯದಲ್ಲಿ ‘ಅಮರನಾಥ ಗುಹೆಗಳಲ್ಲಿ ಶಿವದರ್ಶನ’ ಎಂಬ ಆಧ್ಯಾತ್ಮಿಕ ಚಿಂತನಾ ಕಾರ್ಯಕ್ರಮ.
ಕೆ.ಆರ್. ಮಾರ್ಕೇಟ್ ಜಲಕಂಠೇಶ್ವರ ದೇಗುಲದಲ್ಲಿ ಶಿವನ ದರ್ಶನಕ್ಕಾಗಿ ಅಗಾಧ ಜನ ನೆರೆದಿದ್ದರು. ಮೊದಲೇ ತುಂಬಿ ತುಳುಕುವ ಮಾರ್ಕೇಟ್ನಲ್ಲಿ ಹರ ಬಂದರೂ ಹಾದು ಹೋಗಲು ಜಾಗವಿರಲಿಲ್ಲ. ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ‘ ನಗೆ ಜಾಗರಣೆ ’ ಕಾರ್ಯಕ್ರಮ ಏರ್ಪಡಿಸಿದ್ದರು. ರುದ್ರಾವತಾರಿ ಸಾಕ್ಷಾತ್ ಶಿವನೇ ಧರೆಗಿಳಿದು ಬಂದಿದ್ದರೆ ಒಮ್ಮೆ ನಗುತಿದ್ದ.
ತ್ಯಾಗರಾಜ ನಗರದ ಬಲಮುರಿ ಗಣಪತಿ ದೇವಾಲಯದಲ್ಲಿ ಗಿರಿಜಾ ಕಲ್ಯಾಣ ಕಥಾಕ್ಷೇಪವನ್ನು ಏರ್ಪಡಿಸಿದ್ದರು. ಶಿವ ಭಕ್ತರು ಮದುವೆ ಸಂಭ್ರಮದ ಹಾಗೆ ನಿದ್ದೆಗೆಟ್ಟು ಕಾರ್ಯಕ್ರಮ ವೀಕ್ಷಿಸಿದರು.ಮಲ್ಲೇಶ್ವರದ ದಕ್ಷಿಣಮುಖ ನಂದಿತೀರ್ಥ ದೇಗುಲದಲ್ಲಿ ಸಾವಿರದ ಎಂಟು ಲೀಟರ್ ಹಾಲಿನ ಅಭಿಷೇಕ.ನಗರದೆಲ್ಲೆಡೆ ಆರಾಧನೆಗೊಂಡ, ಇವ ರುದ್ರಭೂಮಿ ವಾಸನಾದರೂ, ನಮ್ಮ ಜನಪದರ ಉಕ್ತಿಯಲ್ಲಿ ಸುರಸುಂದರಾಂಗ.
ಶಿವನು ಭಿಕ್ಷಕೆ ಬಂದ ನೋಡು ಬಾರೇ ತಂಗಿ
ಇವನಂತ ಚೆಲುವರಿಲ್ಲ ನೋಡು ಬಾರೆ......
ಭುವನವೆಲ್ಲ ಭಜಿಸುತಿಹೆ ಓ ಮಂಜುನಾಥ...
ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಸಾವಿರಾರು ಯಾತ್ರಾರ್ತಿಗಳು ಆಗಮಿಸಿ ಪೂಜೆ ಸಲ್ಲಿಸಿದರು. ಕುಕ್ಕೆಯ ಸುಬ್ರಹ್ಮಣ್ಯನಿಗೂ ವಿಶೇಷ ಪೂಜೆ ಜರಗಿತು.ಗೋಕರ್ಣ, ಮುರುಡೇಶ್ವರ ಮುಂತಾದ ಶಿವಾಲಯದಲ್ಲಿ ಹರನಾಮ ಉದ್ಗಾರಕ್ಕೆ ಲೆಕ್ಕವಿರಲಿಲ್ಲ. ಕಾಶೀ ಪುಣ್ಯಕ್ಷೇತ್ರದಲ್ಲಿ ಭಕ್ತಾದಿಗಳ ಅಭ್ಯಂಜನ ಮಾಡಿ ಶಿವ ಪೂಜೆಗೈದರು. ನೂಕುನುಗ್ಗಲು ಸಡಿಲಗೊಳಿಸಲು ಕೆಲವರನ್ನು ಬಂಧಿಸ ಬೇಕಾಯಿತು. ವಾರಣಾಸಿಯ ವಿಶ್ವನಾಥನಿಗೆ ಬೃಹತ್ ‘ಶಿವಭಾರತ್’ ಏರ್ಪಸಲಾಗಿತ್ತು. ಜ್ಞಾನವಾಪಿ ಮಸೀದಿಯ ಪಕ್ಕದ ಶೃಂಗಾರ ಗೌರಿ ದೇಗುಲಕ್ಕೆ ಪೂಜೆ ಸಲ್ಲಿಸಲು ತೆರಳಿದವರನ್ನೂ ಬಂಧಸಲಾಯಿತು. ಪುಟಪರ್ತಿಯಲ್ಲಿ ಸಾಯಿಬಾಬರಿಂದ ಲಿಂಗ ದರ್ಶನ . ಮಧ್ಯಪ್ರದೇಶದ ಓಂಕಾರೇಶ್ವರ, ಮಹೇಶ್ವರ ದೇವಳದಲ್ಲಿ ಭಕ್ತರ ಮಹಾಪೂರವೇ ಹರಿದಿತ್ತು. ನರ್ಮದಾ ನದಿಯಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚುಮಂದಿ ಮಿಂದರು.ಭೋಪಾಲ್ನ ಶಿವಧಮ್ದೇಗುಲದಲ್ಲಿ ನಾಗದೇವರಿಗೆ ವಿಶೇಷಪೂಜೆ ಜರುಗಿತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications