ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇದು ಮಸಣದ ಹೂವುಗಳ ಕಥೆ ; ರಾಜ್ಯದ ಹುಡುಗಿಯರ ವ್ಯಥೆ !
ಇದು
ಮಸಣದ
ಹೂವುಗಳ
ಕಥೆ
;
ರಾಜ್ಯದ
ಹುಡುಗಿಯರ
ವ್ಯಥೆ
!
ಸುಮಾರು
25
ನೆಟ್ವರ್ಕ್ಗಳಿಂದ
ಮಾಂಸದ
ಅಡ್ಡೆಗಳಿಗೆ
ರಾಜ್ಯದ
ಹೆಂಗಸರ
ಸರಬರಾಜು
- ದಟ್ಸ್ಕನ್ನಡ ಬ್ಯೂರೊ
ಇದು ಮೈಸೂರಿನ ಒಡನಾಡಿ ಸಂಸ್ಥೆ ನಮ್ಮ ಮುಂದಿಡುವ ಬೆಚ್ಚಿಬೀಳಿಸುವ ಸತ್ಯ. ಮುಂಬಯಿ ಮಾತ್ರವಲ್ಲ - ಮೆಟ್ರೊಪಾಲಿಟಿನ್ ನಗರಗಳಾದ ದೆಹಲಿ, ಕೋಲ್ಕತ್ತಾ ಗಳ ಪಾಪಕೂಪಗಳಲ್ಲಿ ಕನ್ನಡದ ಹುಡುಗಿಯರ ಬದುಕು ಸವೆಯುತ್ತಿದೆ. ನೆರೆಯ ಗೋವಾದ ವೇಶ್ಯಾವಾಟಿಕೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ರಾಜ್ಯದ ಹೆಣ್ಣುಮಕ್ಕಳಿದ್ದಾರೆ.
ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತಿಗೆ ಕೂತ ಒಡನಾಡಿ ಸಂಸ್ಥೆಯ ಬಳಗ- ತಮ್ಮ ಅಧ್ಯಯನದ ಅಂಕಿಅಂಶಗಳನ್ನು ಮುಂದಿಟ್ಟಾಗ ಕ್ಷಣಕಾಣ ನಿಬ್ಬೆರಗು, ಮರುಕ್ಷಣ ಎದೆ ಹಿಂಡಿದಂತೆ ನೋವು. ಇದು ಕರ್ನಾಟಕದ ಹುಡುಗಿಯರ ವ್ಯಥೆ ಮಾತ್ರವಲ್ಲ ; ಎಲ್ಲ ರಾಜ್ಯಗಳ ಹುಡುಗಿಯರ ಕಥೆಯೂ ಹೌದು.
ಒಡನಾಡಿ
ಸಂಸ್ಥೆಯ
ಅಧ್ಯಯನದ
ವರದಿಯ
ಕೆಲವು
ವಿಷಯಗಳು
:
- ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟ ಬಹುತೇಕ ಹುಡುಗಿಯರು ಅನಾಥರು. ಉಳಿದಂತೆ ಹಿಂದುಳಿದ ವರ್ಗಕ್ಕೆ ಸೇರಿದವರು. ಆರ್ಥಿಕವಾಗಿ ಹಿಂದುಳಿದವರು.
- ವೇಶ್ಯಾವಾಟಿಕೆಗೆ ಹುಡುಗಿಯರನ್ನು ಸಾಗಿಸುವ ಬಹುದೊಡ್ಡ ಜಾಲವೇ ಕರ್ನಾಟಕದಲ್ಲಿದೆ. ಇಂಥ ಸುಮಾರು 25 ನೆಟ್ವರ್ಕ್ಗಳು ಮಾಂಸದ ಅಡ್ಡೆಗಳಿಗೆ ರಾಜ್ಯದ ಹೆಂಗಸರನ್ನು ಸರಬರಾಜು ಮಾಡುತ್ತಿವೆ. ಮೈಸೂರು ಜಿಲ್ಲೆಯಲ್ಲೇ ಮೂರು ಜಾಲಗಳಿವೆ.
- ಕೆಲವು ಹುಡುಗಿಯರನ್ನು ಅಪಹರಿಸಲಾಗುತ್ತದೆ, ಕೆಲವರಿಗೆ ಆಮಿಷ ತೋರಿಸಲಾಗುತ್ತದೆ, ಕೆಲವರನ್ನು ಬಲಾತ್ಕಾರ ಮಾಡಲಾಗುತ್ತದೆ.
- ಹುಡುಗಿಯರ ಸಾಗಣೆಯ ವಿಷಯ ಪೊಲೀಸರಿಗೆ ಗೊತ್ತಿಲ್ಲವೆಂದೇನಲ್ಲ . ಆದರೆ ರಾಜ್ಯದ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಈ ಕುರಿತು ಮೌನವಾಗಿದ್ದಾರೆ.
- ರಾಜ್ಯದಲ್ಲಿನ ಪೊಲೀಸ್ ದಾಖಲೆಗಳ ಮೂಲಕ- ಪ್ರತಿವರ್ಷ 5400 ಹುಡುಗಿಯರ ಅಪಹರಣದ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತವೆ. ದಾಖಲಾಗದ ಪ್ರಕರಣಗಳ ಸಂಖ್ಯೆ ಇದಕ್ಕೂ ಹೆಚ್ಚು .
- 15 ರಿಂದ 25 ಸಾವಿರ ರುಪಾಯಿಗಳಿಗೆ ಹುಡುಗಿಯರನ್ನು ಮಾರಾಟ ಮಾಡಲಾಗುತ್ತದೆ.
- ಒಡನಾಡಿ ಸಂಸ್ಥೆ ಈವರೆಗೆ 480 ಹುಡುಗಿಯರನ್ನು ಪಾಪಕೂಪದಿಂದ ರಕ್ಷಿಸಿ ಪುನರ್ವಸತಿ ಕಲ್ಪಿಸಿದೆ.
ಮುಖಪುಟ / ವಾಟ್ಸ್ ಹಾಟ್
Comments
Story first published: Saturday, November 24, 2001, 5:30 [IST]