ಇದು ಮಸಣದ ಹೂವುಗಳ ಕಥೆ ; ರಾಜ್ಯದ ಹುಡುಗಿಯರ ವ್ಯಥೆ !
ಇದು ಮಸಣದ ಹೂವುಗಳ ಕಥೆ ; ರಾಜ್ಯದ ಹುಡುಗಿಯರ ವ್ಯಥೆ !
ಸುಮಾರು 25 ನೆಟ್ವರ್ಕ್ಗಳಿಂದ ಮಾಂಸದ ಅಡ್ಡೆಗಳಿಗೆ ರಾಜ್ಯದ ಹೆಂಗಸರ ಸರಬರಾಜು
- ದಟ್ಸ್ಕನ್ನಡ ಬ್ಯೂರೊ
ಇದು ಮೈಸೂರಿನ ಒಡನಾಡಿ ಸಂಸ್ಥೆ ನಮ್ಮ ಮುಂದಿಡುವ ಬೆಚ್ಚಿಬೀಳಿಸುವ ಸತ್ಯ. ಮುಂಬಯಿ ಮಾತ್ರವಲ್ಲ - ಮೆಟ್ರೊಪಾಲಿಟಿನ್ ನಗರಗಳಾದ ದೆಹಲಿ, ಕೋಲ್ಕತ್ತಾ ಗಳ ಪಾಪಕೂಪಗಳಲ್ಲಿ ಕನ್ನಡದ ಹುಡುಗಿಯರ ಬದುಕು ಸವೆಯುತ್ತಿದೆ. ನೆರೆಯ ಗೋವಾದ ವೇಶ್ಯಾವಾಟಿಕೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ರಾಜ್ಯದ ಹೆಣ್ಣುಮಕ್ಕಳಿದ್ದಾರೆ.
ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತಿಗೆ ಕೂತ ಒಡನಾಡಿ ಸಂಸ್ಥೆಯ ಬಳಗ- ತಮ್ಮ ಅಧ್ಯಯನದ ಅಂಕಿಅಂಶಗಳನ್ನು ಮುಂದಿಟ್ಟಾಗ ಕ್ಷಣಕಾಣ ನಿಬ್ಬೆರಗು, ಮರುಕ್ಷಣ ಎದೆ ಹಿಂಡಿದಂತೆ ನೋವು. ಇದು ಕರ್ನಾಟಕದ ಹುಡುಗಿಯರ ವ್ಯಥೆ ಮಾತ್ರವಲ್ಲ ; ಎಲ್ಲ ರಾಜ್ಯಗಳ ಹುಡುಗಿಯರ ಕಥೆಯೂ ಹೌದು.
ಒಡನಾಡಿ ಸಂಸ್ಥೆಯ ಅಧ್ಯಯನದ ವರದಿಯ ಕೆಲವು ವಿಷಯಗಳು :
- ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟ ಬಹುತೇಕ ಹುಡುಗಿಯರು ಅನಾಥರು. ಉಳಿದಂತೆ ಹಿಂದುಳಿದ ವರ್ಗಕ್ಕೆ ಸೇರಿದವರು. ಆರ್ಥಿಕವಾಗಿ ಹಿಂದುಳಿದವರು.
- ವೇಶ್ಯಾವಾಟಿಕೆಗೆ ಹುಡುಗಿಯರನ್ನು ಸಾಗಿಸುವ ಬಹುದೊಡ್ಡ ಜಾಲವೇ ಕರ್ನಾಟಕದಲ್ಲಿದೆ. ಇಂಥ ಸುಮಾರು 25 ನೆಟ್ವರ್ಕ್ಗಳು ಮಾಂಸದ ಅಡ್ಡೆಗಳಿಗೆ ರಾಜ್ಯದ ಹೆಂಗಸರನ್ನು ಸರಬರಾಜು ಮಾಡುತ್ತಿವೆ. ಮೈಸೂರು ಜಿಲ್ಲೆಯಲ್ಲೇ ಮೂರು ಜಾಲಗಳಿವೆ.
- ಕೆಲವು ಹುಡುಗಿಯರನ್ನು ಅಪಹರಿಸಲಾಗುತ್ತದೆ, ಕೆಲವರಿಗೆ ಆಮಿಷ ತೋರಿಸಲಾಗುತ್ತದೆ, ಕೆಲವರನ್ನು ಬಲಾತ್ಕಾರ ಮಾಡಲಾಗುತ್ತದೆ.
- ಹುಡುಗಿಯರ ಸಾಗಣೆಯ ವಿಷಯ ಪೊಲೀಸರಿಗೆ ಗೊತ್ತಿಲ್ಲವೆಂದೇನಲ್ಲ . ಆದರೆ ರಾಜ್ಯದ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಈ ಕುರಿತು ಮೌನವಾಗಿದ್ದಾರೆ.
- ರಾಜ್ಯದಲ್ಲಿನ ಪೊಲೀಸ್ ದಾಖಲೆಗಳ ಮೂಲಕ- ಪ್ರತಿವರ್ಷ 5400 ಹುಡುಗಿಯರ ಅಪಹರಣದ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತವೆ. ದಾಖಲಾಗದ ಪ್ರಕರಣಗಳ ಸಂಖ್ಯೆ ಇದಕ್ಕೂ ಹೆಚ್ಚು .
- 15 ರಿಂದ 25 ಸಾವಿರ ರುಪಾಯಿಗಳಿಗೆ ಹುಡುಗಿಯರನ್ನು ಮಾರಾಟ ಮಾಡಲಾಗುತ್ತದೆ.
- ಒಡನಾಡಿ ಸಂಸ್ಥೆ ಈವರೆಗೆ 480 ಹುಡುಗಿಯರನ್ನು ಪಾಪಕೂಪದಿಂದ ರಕ್ಷಿಸಿ ಪುನರ್ವಸತಿ ಕಲ್ಪಿಸಿದೆ.
ಮುಖಪುಟ / ವಾಟ್ಸ್ ಹಾಟ್
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications