ಸಕ್ಕರೆ ಕಾರ್ಮಿಕರ ಕಹಿ ಬದುಕು: ಕಣ್ತೆರೆದು ನೋಡಯ್ಯ ಎಸ್ಸೆಂ.ಕೃಷ್ಣ !
ಸಕ್ಕರೆ
ಕಾರ್ಮಿಕರ
ಕಹಿ
ಬದುಕು:
ಕಣ್ತೆರೆದು
ನೋಡಯ್ಯ
ಎಸ್ಸೆಂ.ಕೃಷ್ಣ
!
ಪಾಂಡವಪುರ
ಸಕ್ಕರೆ
ಕಾರ್ಖಾನೆಯ
ಕಾರ್ಮಿಕರು
ಹಾಗೂ
ಅವರ
ಕುಟುಂಬಗಳಿಂದ
ಚುನಾವಣೆಗೆ
ಬಹಿಷ್ಕಾರ
ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯ 400ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಅವರ ಕುಟುಂಬಗಳು ಮುಂಬರುವ ವಿಧಾನಸಭೆ ಚುನಾವಣೆಗಳಿಗೆ ಸಾಮೂಹಿಕ ಬಹಿಷ್ಕಾರ ಹಾಕಿದ್ದಾರೆ. ಅಷ್ಟೇ ಅಲ್ಲ - ರಾಜ್ಯದಲ್ಲಿನ ಎಲ್ಲ ಸಕ್ಕರೆ ಕಾರ್ಖಾನೆಗಳ ಕಾರ್ಮಿಕರೂ ಚುನಾವಣೆ ಬಹಿಷ್ಕರಿಸುವಂತೆ ಪ್ರಯತ್ನಗಳನ್ನು ನಡೆಸಲು ಪಾಂಡವಪುರದ ಕಾರ್ಮಿಕರು ನಿರ್ಧರಿಸಿದ್ದಾರೆ.
ಸಕ್ಕರೆ ಕಾರ್ಖಾನೆಯ ಕಾರ್ಮಿಕರು ಚುನಾವಣೆಗಳನ್ನು ಬಹಿಷ್ಕರಿಸಿರುವ ಕಾರಣ ಇಷ್ಟೆ : ಕಳೆದ ಎರಡು ಅವಧಿಗಳಿಂದ ಪಾಂಡವಪುರ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವುದನ್ನೇ ನಿಲ್ಲಿಸಿದೆ. ಗಾಣ ತಿರುಗದಿದ್ದ ಮೇಲೆ ಸಂಬಳದ ಮಾತೆಲ್ಲಿಂದ ಬಂತು ? ಕಳೆದ 10 ತಿಂಗಳಿಂದ ಕಾರ್ಮಿಕರು ಸಂಬಳದ ಮುಖವನ್ನೇ ಕಂಡಿಲ್ಲ . ಹೀಗಿರುವಾಗ ಕಾರ್ಮಿಕರ ಕುಟುಂಬದ ಸದಸ್ಯರ ಮುಖಗಳಲ್ಲಿ ನಗು ಎಲ್ಲಿಂದ ಬರಬೇಕು ?
ರಾಮಣ್ಣ ಎನ್ನುವ ಕಾರ್ಮಿಕನ ಕಥೆಯನ್ನೇ ಕೇಳಿ. ಈತ ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ಕಂಪ್ಯೂಟರ್ ಆಪರೇಟರ್. ಕಳೆದ 14 ತಿಂಗಳಿಂದ ರಾಮಣ್ಣನಿಗೆ ಸಂಬಳ ಬಂದಿಲ್ಲ . ದೊಡ್ಡ ಸಂಸಾರವಿದೆ. ಹಸಿದ ಹೊಟ್ಟೆಗಳಿಗೆ. ದುಡಿಯಲು ಆಸಕ್ತಿಯೂ ಇದೆ. ಸಂಬಳ ಮಾತ್ರ ಇಲ್ಲ !
ನಮಗೆಲ್ಲಾ ಸಂಸಾರಗಳಿವೆ. ಮಕ್ಕಳಿವೆ. ಮಕ್ಕಳನ್ನು ಸ್ಕೂಲಿಗೆ ಕಳಿಸಬೇಕು. ಸಂಬಳ ಕೊಡದಿದ್ದರೆ ಹೇಗೆ ? ಹಬ್ಬಕ್ಕಾಗಿ 500 ರುಪಾಯಿ ಮುಂಗಡ ಕೊಡಿ ಎಂದರೂ ಕಾರ್ಖಾನೆ ಆಡಳಿತ ಮಂಡಳಿ ನಿರಾಕರಿಸಿದೆ ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಾರೆ. ಈ ಪರಿಸ್ಥಿತಿಯಿಂದಾಗಿಯೇ ಚುನಾವಣೆಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ.
ಇಲ್ಲಿ ಉದ್ಯೋಗ ಭದ್ರತೆಯೂ ಇಲ್ಲ . 25 ವರ್ಷಗಳಿಂದ ಸೇವೆ ಸಲ್ಲಿಸಿರುವ 173 ತಾತ್ಕಾಲಿಕ ಉದ್ಯೋಗಿಗಳು, ಮೊನ್ನೆಯಷ್ಟೇ ಕೆಲಸ ಕಳಕೊಂಡು, ಸಂಬಳವಿಲ್ಲದೆ ಮನೆಗೆ ಹೋಗಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ 8 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಸಾವುಗಳಿಗೆ ಕಾರಣ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಇರುವುದು ಎಂದು ಪಿ.ರಾಮಚಂದ್ರ ಎನ್ನುವ ನೌಕರ ದೂರುತ್ತಾರೆ.
ಟೀವಿಗಳಲ್ಲಿ ನೊಂದವರ ಕಣ್ಣೊರೆಸುವ, ವಿಧಾನಸಭೆಯಲ್ಲಿ ಚೈತನ್ಯಶೀಲ ಕರ್ನಾಟಕದ ಮಾತನಾಡುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಪಾಂಡವಪುರದ ಕಾರ್ಮಿಕರತ್ತ ಕಣ್ಣೆತ್ತಿ ನೋಡಬಾರದೆ ?
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ