Get Updates
Get notified of breaking news, exclusive insights, and must-see stories!

ಕಾವೇರಿ: ನ್ಯಾಯ ದೊರಕುವವರೆಗೆ ನನಗೆ ವಿಶ್ರಾಂತಿಯಿಲ್ಲ -ಜಯಾ

ಕಾವೇರಿ: ನ್ಯಾಯ ದೊರಕುವವರೆಗೆ ನನಗೆ ವಿಶ್ರಾಂತಿಯಿಲ್ಲ -ಜಯಾ
ಕರ್ನಾಟಕದಿಂದ ಜಲಾನಯನ ಪ್ರದೇಶದ ವಿಸ್ತರಣೆ.... ತಮಿಳ್ನಾಡು ಸಚಿವರ ಆರೋಪ

ಚೆನ್ನೈ: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆಯಲ್ಲಿ ನ್ಯಾಯ ದೊರಕುವವರೆಗೆ ನನಗೆ ವಿಶ್ರಾಂತಿಯಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪುನರುಚ್ಚರಿಸಿದ್ದಾರೆ. ಅವರು ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ಸಂದರ್ಭದಲ್ಲಿ (ಫೆ.09) ಮಾತನಾಡುತ್ತಾ ಈ ವಿಷಯ ಹೇಳಿದರು.

ಇದೇ ಸಂದರ್ಭದಲ್ಲಿ , ಕಾವೇರಿ ನೀರು ಹಂಚಿಕೆಯ ಕುರಿತು ಕರ್ನಾಟಕ ಹಾಗೂ ತಮಿಳುನಾಡು ಸರಕಾರದ ನಡುವೆ ದ್ವಿಪಕ್ಷೀಯ ಮಾತುಕತೆಗೆ ಅವಕಾಶವಿಲ್ಲ. ಏನಿದ್ದರೂ ಕಾವೇರಿ ಉಸ್ತುವಾರಿ ಸಮಿತಿಯ ಹಾಗೂ ಸುಪ್ರೀಮ್‌ ಕೋರ್ಟ್‌ ನಿರ್ಧಾರ ಮಾತ್ರ ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂದು ತಮಿಳುನಾಡು ವಿತ್ತ ಖಾತೆ ಸಚಿವ ಸಿ.ಪೊನ್ನಯ್ಯನ್‌ ತಮಿಳುನಾಡು ವಿಧಾನ ಸಭೆಗೆ ತಿಳಿಸಿದರು.

ಕರ್ನಾಟಕ ಸರಕಾರದೊಂದಿಗೆ ಈವರೆಗೆ ನಡೆದ ಹಲವು ಸುತ್ತಿನ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಕಾವೇರಿ ಉಸ್ತುವಾರಿ ಸಮಿತಿಯ ಹಾಗೂ ಸುಪ್ರೀಮ್‌ ಕೋರ್ಟ್‌ ನಿರ್ಧಾರ ಮಾತ್ರ ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂಬ ಕಠಿಣ ಮತ್ತು ಸ್ಪಷ್ಟ ನಿರ್ಧಾರಕ್ಕೆ ಬಂದಿದೆ ಎಂದು ಮಾಜಿ ನೀರಾವರಿ ಸಚಿವರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಅವರು , ಕರ್ನಾಟಕ ತನ್ನ ಜಲಾನಯನ ಪ್ರದೇಶಗಳಾದ ಕೃಷ್ಣರಾಜ ಸಾಗರ, ಕಬಿನಿ, ಹೇಮಾವತಿ ಮತ್ತು ಹಾರಂಗಿಯಲ್ಲಿ ತಡೆ ಣೆಕಟ್ಟು ನಿರ್ಮಿಸಿದೆ. ಆ ಮೂಲಕ 21 ಲಕ್ಷವಿದ್ದ ನೀರಾವರಿ ಭೂಮಿಯನ್ನು 26 ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸಿಕೊಂಡು ಸ್ತುವಾರಿ ಸಮಿತಿಯ ನಿಯಮ ಉಲ್ಲಂಘಿಸುತ್ತಿದೆ ಎಂದು ಆಪಾದಿಸಿದರು.

(ಪಿಟಿಐ)

ಮುಖಪುಟ / ಕಾವೇರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+