ಕಾವೇರಿ: ನ್ಯಾಯ ದೊರಕುವವರೆಗೆ ನನಗೆ ವಿಶ್ರಾಂತಿಯಿಲ್ಲ -ಜಯಾ
ಕಾವೇರಿ:
ನ್ಯಾಯ
ದೊರಕುವವರೆಗೆ
ನನಗೆ
ವಿಶ್ರಾಂತಿಯಿಲ್ಲ
-ಜಯಾ
ಕರ್ನಾಟಕದಿಂದ
ಜಲಾನಯನ
ಪ್ರದೇಶದ
ವಿಸ್ತರಣೆ....
ತಮಿಳ್ನಾಡು
ಸಚಿವರ
ಆರೋಪ
ಇದೇ ಸಂದರ್ಭದಲ್ಲಿ , ಕಾವೇರಿ ನೀರು ಹಂಚಿಕೆಯ ಕುರಿತು ಕರ್ನಾಟಕ ಹಾಗೂ ತಮಿಳುನಾಡು ಸರಕಾರದ ನಡುವೆ ದ್ವಿಪಕ್ಷೀಯ ಮಾತುಕತೆಗೆ ಅವಕಾಶವಿಲ್ಲ. ಏನಿದ್ದರೂ ಕಾವೇರಿ ಉಸ್ತುವಾರಿ ಸಮಿತಿಯ ಹಾಗೂ ಸುಪ್ರೀಮ್ ಕೋರ್ಟ್ ನಿರ್ಧಾರ ಮಾತ್ರ ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂದು ತಮಿಳುನಾಡು ವಿತ್ತ ಖಾತೆ ಸಚಿವ ಸಿ.ಪೊನ್ನಯ್ಯನ್ ತಮಿಳುನಾಡು ವಿಧಾನ ಸಭೆಗೆ ತಿಳಿಸಿದರು.
ಕರ್ನಾಟಕ ಸರಕಾರದೊಂದಿಗೆ ಈವರೆಗೆ ನಡೆದ ಹಲವು ಸುತ್ತಿನ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಕಾವೇರಿ ಉಸ್ತುವಾರಿ ಸಮಿತಿಯ ಹಾಗೂ ಸುಪ್ರೀಮ್ ಕೋರ್ಟ್ ನಿರ್ಧಾರ ಮಾತ್ರ ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂಬ ಕಠಿಣ ಮತ್ತು ಸ್ಪಷ್ಟ ನಿರ್ಧಾರಕ್ಕೆ ಬಂದಿದೆ ಎಂದು ಮಾಜಿ ನೀರಾವರಿ ಸಚಿವರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅವರು , ಕರ್ನಾಟಕ ತನ್ನ ಜಲಾನಯನ ಪ್ರದೇಶಗಳಾದ ಕೃಷ್ಣರಾಜ ಸಾಗರ, ಕಬಿನಿ, ಹೇಮಾವತಿ ಮತ್ತು ಹಾರಂಗಿಯಲ್ಲಿ ತಡೆ ಣೆಕಟ್ಟು ನಿರ್ಮಿಸಿದೆ. ಆ ಮೂಲಕ 21 ಲಕ್ಷವಿದ್ದ ನೀರಾವರಿ ಭೂಮಿಯನ್ನು 26 ಲಕ್ಷ ಹೆಕ್ಟೇರ್ಗೆ ಹೆಚ್ಚಿಸಿಕೊಂಡು ಸ್ತುವಾರಿ ಸಮಿತಿಯ ನಿಯಮ ಉಲ್ಲಂಘಿಸುತ್ತಿದೆ ಎಂದು ಆಪಾದಿಸಿದರು.
(ಪಿಟಿಐ)
ಮುಖಪುಟ / ಕಾವೇರಿ