ನಾಗಮಂಗಲ ಕಾಂಗ್ರೆಸ್ ಸಭೆಯಲ್ಲಿ ಕ್ಲಬ್ಡ್ಯಾನ್ಸ್ ಪ್ಲಸ್ ಬಾಡೂಟ !!
ನಾಗಮಂಗಲ ಕಾಂಗ್ರೆಸ್ ಸಭೆಯಲ್ಲಿ ಕ್ಲಬ್ಡ್ಯಾನ್ಸ್ ಪ್ಲಸ್ ಬಾಡೂಟ !!
ನಾಚ್ ಮೇರೇ ಬುಲ್ಬುಲ್ ಕೆ ಓಟು ಮಿಲೇಗಾ.......! ಮತಗಳಿಕೆಗೆ ಮೋಹಿನಿ ದರ್ಶನ
ಇಂಥ ದೃಶ್ಯ ಕಂಡು ಬಂದದ್ದು ಒಂದು ಕಾಲಕ್ಕೆ ರಾಜಕೀಯ ಪ್ರಬುದ್ಧತೆಗೆ ಹೆಸರಾಗಿದ್ದ ನಾಗಮಂಗಲ ವಿಧಾನಸಭೆ ಕ್ಷೇತ್ರದ ದೇವಲಾಪುರದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ.
ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಹಲವು ರಾಜಕಾರಣಿಗಳನ್ನು ಕೊಡುಗೆ ನೀಡಿದ್ದ ಖ್ಯಾತಿ ನಾಗಮಂಗಲ ತಾಲೂಕಿಗಿತ್ತು. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಹಣ, ಹೆಂಡ, ತೋಳ್ಬಲ ಹೆಚ್ಚಿದೆ. ಇಂತಹ ಅರೆನಗ್ನ ನೃತ್ಯವು ರಾಜಕೀಯ ದಿಕ್ಕು ತಪ್ಪಿರುವುದರ ಸಂಕೇತವಾಗಿದೆ.
ನಡೆದದ್ದಿಷ್ಟು : ಹತ್ತು ಸಹಸ್ರಕ್ಕೂ ಹೆಚ್ಚು ಮಂದಿ ನೆರೆದಿದ್ದ ಬೃಹತ್ ಸಭೆ ಅದಾಗಿತ್ತು. ಮಧ್ಯಾಹ್ನ 1:30 ಗಂಟೆಗೆ ನಿಗದಿಯಾಗಿದ್ದ ಸಭೆ ಪ್ರಾರಂಭವಾಗುವುದು ಸ್ವಲ್ಪ ವಿಳಂಬವಾಯಿತು. ನೆರೆದಿದ್ದವರ ಮನ ತಣಿಸಲು ರಸಮಂಜರಿ ಏರ್ಪಡಿಸಲಾಗಿತ್ತು.
ಆರ್ಕೆಸ್ಟ್ರಾ ತಂಡದವರು ತಮ್ಮ ಗಾಯನದ ಮೂಲಕ ಸಭಿಕರ ಮನಸೂರೆಗೊಂಡರು. ಇಷ್ಟು ಸಾಲದೆಂಬಂತೆ ವಿಕೃತ ಕಸರತ್ತೊಂದು ನಡೆಯಿತು. ಮೂರ್ನಾಲ್ಕು ಹಾಡುಗಳ ನಂತರ ಅರೆನಗ್ನ ಯುವತಿಯಾಬ್ಬಳು ‘ರಸವತ್ತಾದ’ ನೃತ್ಯದೊಂದಿಗೆ ರಂಜನೆ ನೀಡಿದಳು.
ಉಪೇಂದ್ರ ನಾಯಕ ನಟನಾಗಿ ನಟಿಸಿರುವ ‘ರಕ್ತ ಕಣ್ಣೀರು’ ಚಿತ್ರದ ‘ಬಾ.. ಬಾರೋ ರಸಿಕ...’ ಹಾಡಿಗೆ ಆ ಯುವತಿಯು ಚಿತ್ರದ ನಾಯಕಿ ರಮ್ಯಕೃಷ್ಣ ಶೈಲಿಯಲ್ಲೇ ನೃತ್ಯ ಮಾಡಿದಳು. ನೆರೆದಿದ್ದ ಯುವಕರು ಕುಣಿದು ಕುಪ್ಪಳಿಸಿದರು. ನೃತ್ಯ ನಡೆಯುತ್ತಿದ್ದಾಗಲೇ ಶಿವರಾಮೇಗೌಡ ಅವರು ಸಚಿವ ಎಚ್. ಎಂ. ರೇವಣ್ಣ ಜತೆಗೂಡಿ ವೇದಿಕೆ ಏರಿದರು.
ಬೊಂಬಾಟಾಗಿತ್ತು : ಬಾಡೂಟ ಸಖತ್ತಾಗಿತ್ತು ಸಾರ್, ಹೊಟ್ಟೆ ಬಿರಿಯಂಗೆ ತಿಂದ್ವಿ ಸಾರ್. ಡ್ಯಾನ್ಸಂತೂ ಬೊಂಬಾಟಾಗಿತ್ತು ಸಾರ್... ಎಂದು ಸಮಾವೇಶದಲ್ಲಿ ‘ಸಮಾ’ ಕುಡಿದಿದ್ದ ಗ್ರಾಮಸ್ಥನೊಬ್ಬ ತೂರಾಡುತ್ತಲೇ ನುಡಿದಿದ್ದು ಇಡೀ ಕಾರ್ಯಕ್ರಮಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಸಮಾವೇಶಕ್ಕೆ ಬಂದಿದ್ದ ಸುಮಾರು 20 ಸಾವಿರ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗಾಗಿ ದೊಡ್ಡ ದೊಡ್ಡ ಕಡಾಯಿಗಳಲ್ಲಿ ಮಾಂಸ ಬೇಯಿಸಲಾಗಿತ್ತು . ಅಡುಗೆ, ಊಟಕ್ಕೆಂದೇ ಬೃಹತ್ ಶಾಮಿಯಾನ ಹಾಕಲಾಗಿತ್ತು.
ಸತತ ಎರಡು ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡ ಎಲ್.ಆರ್.ಶಿವರಾಮೇಗೌಡ ಅವರು ಕಳೆದ ಚುನಾವಣೆ ಸೋಲಿನಿಂದ ಕಂಗೆಟ್ಟಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅವರು ಮುಂಬರುವ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿದ್ದಾರೆ.
ಕಡು ವೈರಿಗಳಾದ ಶಿವರಾಮೇಗೌಡ ಮತ್ತು ಶಾಸಕ ಚಲುವರಾಯಸ್ವಾಮಿ ಅವರು ಪ್ರತಿ ಹೋಬಳಿ ಮಟ್ಟದಲ್ಲಿ ತಂತಮ್ಮ ಕಾರ್ಯಕರ್ತರ ಸಭೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಈ ಸಭೆಗಳು ಬಾಡೂಟ, ಆರ್ಕೆಸ್ಟ್ರಾಗೆ ಸೀಮಿತವಾಗಿರುತ್ತಿದ್ದವು. ದೇವಲಾಪುರದ ಈ ರಸಮಂಜರಿ ಕರ್ನಾಟಕ ಚುನಾವಣಾ ಅಖಾಡದಲ್ಲಿ ವಿನೂತನ ಪ್ರಯೋಗ.
(ಸ್ನೇಹಸೇತು: ವಿಜಯ ಕರ್ನಾಟಕ)
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications