Get Updates
Get notified of breaking news, exclusive insights, and must-see stories!

ಪಾಲಾರ್‌ ಹತ್ಯಾಕಾಂಡದ ಕಾಡುಗಳ್ಳ ವೀರಪ್ಪನ್‌ ಸಹಚರರಿಗೆ ಗಲ್ಲು

ಪಾಲಾರ್‌ ಹತ್ಯಾಕಾಂಡದ ಕಾಡುಗಳ್ಳ ವೀರಪ್ಪನ್‌ ಸಹಚರರಿಗೆ ಗಲ್ಲು
ಜೀವಾವಧಿ ಶಿಕ್ಷೆಯನ್ನು ಗಲ್ಲಿಗೆ ಪರಿವರ್ತಿಸಿದ ಸುಪ್ರಿಂಕೋರ್ಟ್‌

ನವದೆಹಲಿ : ನರಹಂತಕ ವೀರಪ್ಪನ್‌ನ ನಾಲ್ವರು ಸಹಚರರಿಗೆ ಸುಪ್ರಿಂಕೋರ್ಟ್‌ ಗುರುವಾರ ಗಲ್ಲು ಶಿಕ್ಷೆ ವಿಧಿಸಿದೆ.

1993ರ ಏಪ್ರಿಲ್‌ನಲ್ಲಿ ನೆಲಬಾಂಬ್‌ ಸ್ಫೋಟಿಸುವ ಮೂಲಕ 21 ಜನರ ಸಾವಿಗೆ ಈ ನಾಲ್ವರು ಅಪರಾಧಿಗಳು ಕಾರಣರಾಗಿದ್ದರು. ಪಾಲಾರ್‌ ಬಳಿ ಈ ಹತ್ಯಾಕಾಂಡ ನಡೆದಿತ್ತು . ನ್ಯಾಯಮೂರ್ತಿ ವೈ.ಕೆ.ಸಬರ್‌ವಾಲ್‌ ಮತ್ತು ನ್ಯಾಯಮೂರ್ತಿ ಬಿ.ಎನ್‌.ಅಗರ್‌ವಾಲ್‌ ಅವರನ್ನೊಳಗೊಂಡ ವಿಭಾಗೀಯ ಪೀಠ, ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತು.

ಈ ಮುನ್ನ ಟಾಡಾ ವಿಶೇಷ ನ್ಯಾಯಾಲಯ ಬಂಧಿತ ವೀರಪ್ಪನ್‌ ಸಹಚರರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು . ಈ ಆದೇಶವನ್ನು ಕರ್ನಾಟಕ ಸರ್ಕಾರ ಸುಪ್ರಿಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು . ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ- ಜೀವಾವಧಿ ಶಿಕ್ಷೆಯನ್ನು ಬದಲಿಸಿ ಗಲ್ಲುಶಿಕ್ಷೆ ನೀಡುವ ಮಹತ್ವದ ಆದೇಶವನ್ನು ಜ.29ರ ಗುರುವಾರ ನೀಡಿದೆ.

ಜ್ಞಾನಪ್ರಕಾಶ್‌, ಸಿಮನ್‌, ಬಿಲೈಂದ್ರ ಹಾಗೂ ಶೇಖರನ್‌ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವೀರಪ್ಪನ್‌ ಸಹಚರರು.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+