ಪಾಲಾರ್ ಹತ್ಯಾಕಾಂಡದ ಕಾಡುಗಳ್ಳ ವೀರಪ್ಪನ್ ಸಹಚರರಿಗೆ ಗಲ್ಲು
ಪಾಲಾರ್
ಹತ್ಯಾಕಾಂಡದ
ಕಾಡುಗಳ್ಳ
ವೀರಪ್ಪನ್
ಸಹಚರರಿಗೆ
ಗಲ್ಲು
ಜೀವಾವಧಿ
ಶಿಕ್ಷೆಯನ್ನು
ಗಲ್ಲಿಗೆ
ಪರಿವರ್ತಿಸಿದ
ಸುಪ್ರಿಂಕೋರ್ಟ್
1993ರ ಏಪ್ರಿಲ್ನಲ್ಲಿ ನೆಲಬಾಂಬ್ ಸ್ಫೋಟಿಸುವ ಮೂಲಕ 21 ಜನರ ಸಾವಿಗೆ ಈ ನಾಲ್ವರು ಅಪರಾಧಿಗಳು ಕಾರಣರಾಗಿದ್ದರು. ಪಾಲಾರ್ ಬಳಿ ಈ ಹತ್ಯಾಕಾಂಡ ನಡೆದಿತ್ತು . ನ್ಯಾಯಮೂರ್ತಿ ವೈ.ಕೆ.ಸಬರ್ವಾಲ್ ಮತ್ತು ನ್ಯಾಯಮೂರ್ತಿ ಬಿ.ಎನ್.ಅಗರ್ವಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತು.
ಈ ಮುನ್ನ ಟಾಡಾ ವಿಶೇಷ ನ್ಯಾಯಾಲಯ ಬಂಧಿತ ವೀರಪ್ಪನ್ ಸಹಚರರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು . ಈ ಆದೇಶವನ್ನು ಕರ್ನಾಟಕ ಸರ್ಕಾರ ಸುಪ್ರಿಂಕೋರ್ಟ್ನಲ್ಲಿ ಪ್ರಶ್ನಿಸಿತ್ತು . ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ- ಜೀವಾವಧಿ ಶಿಕ್ಷೆಯನ್ನು ಬದಲಿಸಿ ಗಲ್ಲುಶಿಕ್ಷೆ ನೀಡುವ ಮಹತ್ವದ ಆದೇಶವನ್ನು ಜ.29ರ ಗುರುವಾರ ನೀಡಿದೆ.
ಜ್ಞಾನಪ್ರಕಾಶ್, ಸಿಮನ್, ಬಿಲೈಂದ್ರ ಹಾಗೂ ಶೇಖರನ್ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವೀರಪ್ಪನ್ ಸಹಚರರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್