ಬೇಡ ಬೇಡ ಫರ್ನಾಂಡಿಸ್ ಮಾತ ನಂಬಬೇಡ -ಲಾಲೂ ಹಿತನುಡಿ
ಬೇಡ ಬೇಡ ಫರ್ನಾಂಡಿಸ್ ಮಾತ ನಂಬಬೇಡ -ಲಾಲೂ ಹಿತನುಡಿ
ರಾಮಕೃಷ್ಣ ಹೆಗಡೆ ಅವರ ನಿಷ್ಠರಿಗೀಗ ಭಾರಿ ಡಿಮ್ಯಾಂಡು !
ಹೆಗಡೆ ಅವರ ಅನುಯಾಯಿಗಳು ಜಾತ್ಯತೀತ ಜನತಾದಳ ಸೇರಲಿ ಎಂದು ಸಿದ್ಧರಾಮಯ್ಯ ತೋಳುಬೀಸಿ ಕರೆದಿದ್ದಾರೆ. ಅನಾಥಪ್ರಜ್ಞೆಯಿಂದ ಹೆಗಡೆ ಬೆಂಬಲಿಗರು ನರಳುವುದು ಬೇಡ, ಅವರೊಂದಿಗೆ ನಾವಿದ್ದೇವೆ ಎಂದು ಪಿಜಿಆರ್ ಸಿಂಧ್ಯಾ ಹೇಳಿದ್ದಾರೆ. ಸಮತಾ ಪಕ್ಷಕ್ಕೆ ಬನ್ನಿ ಎಂದು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ತಾಂಬೂಲ ಮುಂದಿಟ್ಟಿದ್ದಾರೆ. ನಾವೇನು ಕಮ್ಮಿ ಎಂದು ಬಿಜೆಪಿಯ ವೆಂಕಯ್ಯನಾಯ್ಡು ಕೂಡ ಹೆಗಡೆ ಬೆಂಬಲಿಗರ ಕೈಗೆ ಕಮಲ ಕೊಡುವುದಕ್ಕೆ ಮುಂದಾಗಿದ್ದಾರೆ. ಈಗ ಲಾಲೂ ಪ್ರಸಾದ್ ಯಾದವ್ ಸರದಿ !
ಆರ್ಜೆಡಿ ಅಧ್ಯಕ್ಷ ಲಾಲೂಪ್ರಸಾದ್ ಯಾದವ್ ಅವರದ್ದು ಆಹ್ವಾನವಲ್ಲ ; ಉಪದೇಶ. ದುಡುಕಬೇಡಿ, ಎಚ್ಚರದಿಂದಿರಿ ಎನ್ನುವುದು ಲಾಲೂ ಉಪದೇಶಾಮೃತ. ಖಾಸಗಿ ಕಾರಣಗಳಿಗಾಗಿ ಜ.23ರಂದು ಬೆಂಗಳೂರಿಗೆ ಆಗಮಿಸಿದ್ದ ಲಾಲೂ ಯಾದವ್ ಅವರನ್ನು ಪ್ರಗತಿಪರರು ಭೇಟಿಯಾದಾಗ ಲಾಲೂ ಈ ಉಪದೇಶ ಮಾಡಿದರು.
ಲಾಲೂ ಅವರ ಎಚ್ಚರಿಕೆಯೆಲ್ಲ ಜಾರ್ಜ್ ಫರ್ನಾಂಡಿಸ್ ಅವರ ಕುರಿತಾದದ್ದೇ ಗಮನಾರ್ಹ. ಜಾರ್ಜ್ ಈಗ ಬಿಹಾರದಲ್ಲಿ ನೆಲೆ ಕಳಕೊಂಡಿದ್ದಾರೆ. ಅತಂತ್ರ ಸ್ಥಿತಿಯಲ್ಲಿರುವ ಆತ ನೆಲೆ ಹುಡುಕುತ್ತಿದ್ದಾನೆ. ಜಾರ್ಜ್ ಮಾತಿಗೆ ಮರುಳಾಗಿ ಬಿಜೆಪಿಯಾಂದಿಗೆ ಕೈ ಜೋಡಿಸದಿರಿ ಎಂದು ಲಾಲೂ ಕಿವಿ ಮಾತು ಹೇಳಿದರು.
ಸಮಾಜವಾದವನ್ನು ನೆಲಕಚ್ಚಿಸಿದ ವಿಷಯದಲ್ಲಿ ಲಾಲೂ ಹೆಸರು ಅಜರಾಮರ. ಜಾತ್ಯತೀತ ವಾದಕ್ಕೂ ಜಾರ್ಜ್ಗೂ ಸಂಬಂಧವೇ ಇಲ್ಲ . ಆತನ ಮಾತು ಕೇಳಿದರೆ ನಿಮ್ಮ ವ್ಯಕ್ತಿತ್ವವೇ ನಾಶವಾಗುತ್ತದೆ ಎಂದರು ಲಾಲೂ.
ಹೆಗಡೆ ಅವರೊಂದಿಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಂಡ ಲಾಲೂ- ತಮ್ಮ ಪಕ್ಷಕ್ಕೆ ಹೆಸರು ಸೂಚಿಸಿದ್ದೇ ಹೆಗಡೆ ಎಂದರು. ಬೊಮ್ಮಾಯಿ ಅವರ ಕುರಿತೂ ತಮಗೆ ಗೌರವವಿದೆ. ಜನತಾ ಪರಿವಾರದವರು ಕಚ್ಚಾಡುವ ಬದಲು ಒಂದಾಗಬೇಕು ಎಂದು ಲಾಲೂ ಹೇಳಿದರು.
ಲಾಲೂ ಅವರನ್ನು ಭೇಟಿಯಾದವರಲ್ಲಿ ಎಬಿಪಿಜೆಡಿ ನಾಯಕರಾದ ಕೆ.ಎನ್.ನಾಗೇಗೌಡ, ಬಿ.ರಘುಪತಿ, ರಮೇಶ್ಕುಮಾರ್, ಎಂ.ಸಿ.ನಾಣಯ್ಯ ಮುಂತಾದವರು ಸೇರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications