ಭಾರತೀಯ ಪಂಜಾಬ್ ವರ್ಸಸ್ ಪಾಕಿಸ್ತಾನ ಪಂಜಾಬ್ ಕ್ರಿಕೆಟ್!
ಭಾರತೀಯ ಪಂಜಾಬ್ ವರ್ಸಸ್ ಪಾಕಿಸ್ತಾನ ಪಂಜಾಬ್ ಕ್ರಿಕೆಟ್!
ಪಟಿಯಾಲ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಪಂಜಾಬ್ಗಳ ನಡುವೆ ಕ್ರಿಕೆಟ್ ಪ್ರಸ್ತಾವನೆ
ಸದ್ಯಕ್ಕೆ ಪಂಜಾಬ್ ವರ್ಸಸ್ ಪಂಜಾಬ್ ನಡುವಿನ ಕ್ರಿಕೆಟ್ ಪಂದ್ಯದ ಪ್ರಸ್ತಾವನೆ ಕಾಗದದ ಮೇಲಿದೆ.
ಭಾರತ ಹಾಗೂ ಪಾಕಿಸ್ತಾನ್ ಎರಡೂ ರಾಷ್ಟ್ರಗಳಲ್ಲೂ ಪಂಜಾಬ್ ಹೆಸರಿನ ರಾಜ್ಯಗಳಿವೆ. ಈ ಎರಡೂ ರಾಜ್ಯಗಳ ತಂಡಗಳ ನಡುವೆ ಹಬ್ಬದ ಕ್ರಿಕೆಟ್ ಪಂದ್ಯ ಆಡಿಸುವ ಚಿಂತನೆ ಭಾರತದ ಪಂಜಾಬ್ನಲ್ಲಿ ಹುಟ್ಟಿಕೊಂಡಿದೆ. ಈ ಕುರಿತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈಗಾಗಲೇ ಕಾರ್ಯ ತತ್ಪರರಾಗಿದ್ದಾರೆ.
ಕೇಂದ್ರದ ಕ್ರೀಡೆ ಮತ್ತು ಯುವಜನ ಖಾತೆ ಸಚಿವ ವಿಕ್ರಂ ವರ್ಮ ಅವರಿಗೆ ಪಂಜಾಬ್ಗಳ ನಡುವಿನ ಕ್ರಿಕೆಟ್ ಪಂದ್ಯದ ಕುರಿತು ಅಮರಿಂದರ್ ಸಿಂಗ್ ಪತ್ರ ಬರೆದಿದ್ದಾರೆ. ಪತ್ರ ಬರೆದಿರುವುದಷ್ಟೇ ಅಲ್ಲ , ಜ.22ರ ಗುರುವಾರ ಕೇಂದ್ರ ಸಚಿವರನ್ನು ಖುದ್ದು ಭೇಟಿ ಮಾಡಿದ ಅಮರಿಂದರ್ ಸಿಂಗ್ ಭೇಟಿ ಮಾಡಿದ್ದಾರೆ. ಸಚಿವ ವಿಕ್ರಂ ಸಿಂಗ್ ಪಂಜಾಬ್ ಕ್ರಿಕೆಟ್ಟಿಗೆ ಹಸಿರು ನಿಶಾನೆಯನ್ನು ತೋರಿಸಿದ್ದಾರೆ.
ಪಂಜಾಬ್ ಕ್ರಿಕೆಟ್ ಕೌನ್ಸಿಲ್ ಕೂಡ ಈ ಕ್ರಿಕೆಟ್ ಪಂದ್ಯದ ಕುರಿತು ಅತ್ಯಾಸಕ್ತಿ ಹೊಂದಿದ್ದು , ಪಾಕಿಸ್ತಾನದ ಪಂಜಾಬ್ ಕ್ರಿಕೆಟ್ ಕೌನ್ಸಿಲ್ ಜೊತೆ ಮಾತುಕತೆ ಆರಂಭಿಸಿದೆ. ಆದರೆ, ಈ ಮಾತುಕತೆಗೊಂದು ಸ್ಪಷ್ಟ ದಿಕ್ಕು ದೊರೆಯಲಿಕ್ಕೆ, ಕೇಂದ್ರ ಕ್ರೀಡಾ ಸಚಿವಾಲಯದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಬೇಕು. ಅದಕ್ಕಾಗಿ ಕಾಯಲಾಗುತ್ತಿದೆ.
ಮುಂಬರುವ ಫೆಬ್ರವರಿ 21 ರಿಂದ 29ರವೆರೆಗೆ ಪಂಜಾಬ್ನಲ್ಲಿ ಪಟಿಯಾಲ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಈ ಸಂಭ್ರಮದ ಸಂದರ್ಭದಲ್ಲಿ ಪಂಜಾಬ್ಗಳ ಕ್ರಿಕೆಟ್ ಪಂದ್ಯವನ್ನು ಏರ್ಪಡಿಸುವುದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಉದ್ದೇಶ. ಕ್ರಿಕೆಟ್ ಪಂದ್ಯದಿಂದ ಸಂಗ್ರಹವಾಗುವ ಹಣವನ್ನು, ಪಂಜಾಬ್ನಲ್ಲಿನ ಸ್ಮಾರಕಗಳ ಅಭಿವೃದ್ಧಿಗೆ ಬಳಸಲು ಅಮರಿಂದರ್ ಉದ್ದೇಶಿಸಿದ್ದಾರೆ.
ಕಾಗದದ ಮೇಲಿನ ಪ್ರಸ್ತಾವನೆ ಕಾರ್ಯರೂಪಕ್ಕೆ ಬಂದಿದ್ದೇ ಆದಲ್ಲಿ - ಭಾರತ ಹಾಗೂ ಪಾಕ್ ರಾಷ್ಟ್ರೀಯ ತಂಡಗಳ ನಡುವಿನ ಕ್ರಿಕೆಟ್ ಹಣಾಹಣಿಗೆ ಮುನ್ನವೇ ಪಂಜಾಬ್ ವರ್ಸಸ್ ಪಂಜಾಬ್ ಸೆಣಸಾಟ ನಡೆಯಲಿದೆ. ಕ್ರೀಡೆಗೆ ಜಯವಾಗಲಿ.
(ಪಿಟಿಐ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications