ಸಿಲಿಕಾನ್ ವ್ಯಾಲಿಗೆ ಬಯೋ ಲಗ್ಗೆ - ರಸೆಲ್ ಹೆನ್ಕೊಕ್
ಸಿಲಿಕಾನ್ ವ್ಯಾಲಿಗೆ ಬಯೋ ಲಗ್ಗೆ - ರಸೆಲ್ ಹೆನ್ಕೊಕ್
ವ್ಯಾಲಿಯಲ್ಲಿನ ಉದ್ಯೋಗ ಅನಿಶ್ಚಿತತೆಗೆ ಬಯೋಟೆಕ್ ಮದ್ದು !
‘ಮೂರು ದುಖ8ತಪ್ತ ವಸಂತಗಳ ಬಳಿಕ , ಮತ್ತೆ ವ್ಯಾಲಿಯ ಮರುವಿಕಸನದ ಕುರುಹು ಕಾಣುತಿದ್ದೇವೆ. ಇದು ಹಿಂದೆಗಿಂತ ನಿಧಾನವಾಗಿರ ಬಹುದು, ಆದರೆ ಬೆಳವಣಿಗೆಯ ಸ್ಪಷ್ಟ ಚಿತ್ರಣ ಕಾಣುತಿದ್ದೇವೆ.’ ಎಂದು ಲಾಭ ನಿರಪೇಕ್ಷಿತಾ ಸಂಸ್ಥೆಯಾದ ಸಿಲಿಕಾನ್ ವ್ಯಾಲಿ ನೆಟ್ವರ್ಕ್ ಜಂಟಿ ಪಡೆಯು ಹೊರತಂದ ವರದಿಯಲ್ಲಿ ಅದರ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕರಾಗಿರುವ ರಸೆಲ್ ಹೆನ್ಕೊಕ್ ಹೇಳಿದ್ದಾರೆ.
‘ಸಿಲಿಕಾನ್ವ್ಯಾಲಿ ನೆಟ್ವರ್ಕ್ 2004 ಇಂಡೆಕ್ಸ್’ ಎಂಬ ವರದಿಯಲ್ಲಿ ತಿಳಿಸಿರುವಂತೆ 2002 ಮೇ ಯಿಂದ 2003 ಮೇ ಅಂತ್ಯಕ್ಕೆ ವ್ಯಾಲಿಯಲ್ಲಿ ಶೇ5 ರಷ್ಟು ಉದ್ಯೋಗ ಇಳಿಕೆಯಾಗಿದೆ. ವ್ಯಾಲಿಯು 2002ರಲ್ಲಿ 99,262 ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿದರೆ, 2001 ರಿಂದ 2002 ರಲ್ಲಿ ದೇಶದಲ್ಲೇ ಅತಿಹೆಚ್ಚು ಉದ್ಯೋಗ ಕಳೆದುಕೊಂಡ ತಾಣವಾಗಿದೆ. ಆದರೆ ದೇಶದ ಬಯೋಟೆಕ್ನಾಲಜಿ ನಾಯಕರುಗಳನ್ನು ಒಳಗೊಂಡ ಬಯೋಟೆಕ್ನಾಲಜಿ ಕಂಪೆನಿಗಳು ಕೆಲವೇ ಉದ್ಯೋಗಿಗಳನ್ನು ಕಳೆದುಕೊಂಡಿದೆ. ಸರ್ವೆಯಾಂದರ ಅಂಕಿಅಂಶದಂತೆ ವ್ಯಾಲಿಯಲ್ಲೀಗ ಸಾಪ್ಟ್ವೇರ್ ಕಂಪೆನಿ ಹಾಗೂ ಬಯೋಟೆಕ್ನಾಲಜಿ ಕಂಪೆನಿಗಳ ಬಂಡವಾಳ ಪ್ರಮಾಣ ಸಮಾನವಾಗಿದೆ.
‘ ವ್ಯಾಲಿಯಲ್ಲಿ ವೈದ್ಯಕೀಯ ತಂತ್ರಜ್ಞಾನ ಹಾಗೂ ಬಯೋಟೆಕ್ನಿಂದಾಗಿ 2000 ದಲ್ಲಿ ಶೇ 7 ಕ್ಕಿಂತಲೂ ಕಡಿಮೆಯಿದ್ದ ಬಂಡವಾಳ ಹೂಡಿಕೆಯು ಕಳೆದ ವರ್ಷ ಶೇ24ಕ್ಕೇರಿದೆ. ಹೆಚ್ಚು ಸಂಭಾವನೆ ನೀಡುವ ಉದ್ಯೋಗ ಅವಕಾಶಗಳು ಹೆಚ್ಚಿವೆ. ಮುಖ್ಯವಾಗಿ ಆರೋಗ್ಯ ಸೇವೆ ಮತ್ತು ಬಯೋಟೆಕ್ ಕ್ಷೇತ್ರದಲ್ಲಿ ದೇಶದಲ್ಲೇ ವ್ಯಾಲಿಯಲ್ಲಿ ಹೆಚ್ಚಿನ ಉದ್ಯೋಗ ಕೇಂದ್ರಿಕೃತವಾಗಿದೆ ’ ಹೆನ್ಕೊಕ್ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಡಾಟ್ಕಾಮ್ ಪತನ ದಿಂದ ವ್ಯಾಲಿ ಚೇತರಿಸಬಹುದೇ?ಎಂಬ ಜ್ವಲಂತ ಪ್ರಶ್ನೆಗೆ ಉತ್ತರ ದೊರೆಯುತ್ತಿದೆ. ಹೌದು, ವ್ಯಾಲಿ ಮುಂದೆ ಬದಲಾಗಿ ಕಾಣಬಹುದು! ಆದರೆ ಹೆಚ್ಚಿನ ಉದ್ಯೋಗ ಸೃಷ್ಟಿಗಾಗಿ ನಾವು ನಮ್ಮ ಕೌಶಲ್ಯದ ಮೇಲೆ ಬಂಡವಾಳ ಹೂಡಬೇಕಾಗಿದೆ.’ ಎಂದೂ ಅವರು ಹೇಳಿದರು.
‘ಕೈಗಾರಿಕಾ ಕ್ಷೇತ್ರದ ಕ್ಷಿಪ್ರ ಬದಲಾವಣೆಗಳಿಗೆ ನಾವು ನಮ್ಮ ಜನತೆಯನ್ನು ಹೇಗೆ ತಯಾರು ಮಾಡಬೇಕೆಂದು ಅಲೋಚಿಸ ಬೇಕಾಗಿದೆ .’ ಎಂದು ಈ ಜಂಟಿ ಪಡೆಗಾಗಿ ವರದಿ ತಯಾರಿಸಿದ ಕೊಲಾಬರೇಟಿವ್ ಇಕಾನೊಮಿಕ್ಸ್ ಅಧ್ಯಕ್ಷ ಡೌ ಹೇಂಟೋನ್ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications